ಕಲಕೇರಿ ಹೋಬಳಿಗಾಗಿ ಪ್ರತಿಭಟನೆ ಅಂಗಡಿ ಮುಂಗಟ್ಟುಗಳು ಮುಚ್ಚಿ ಬಂದ್ಗೆ ಬೆಂಬಲ ಸೂಚಿಸಿದ ವರ್ತಕರು
ಕಲಕೇರಿ: ೨೦೦೩ ರಲ್ಲಿ ಕಲಕೇರಿ ತಾಲೂಕಿಗಾಗಿ ಸುಮಾರು ೧೨೦ ದಿನಗಳ ಕಾಲ ಧರಣಿ ಹೋರಾಟ ಮಾಡಿ ಆಗಿನ ಶಾಸಕರು, ಅಧಿಕಾರಿಗಳ ಗಮನಕ್ಕೆ ತಂದರೂ, ಪ್ರಯೋಜನವಾಗಿಲ್ಲ, ೨೦೨೦ರಲ್ಲಿ ಕಲಕೇರಿಯಲ್ಲಿ ಹೋರಾಟ ಮಾಡಿ ಕಲಕೇರಿಯಿಂದ ತಾಳಿಕೋಟಿವರೆಗೆ ಸಾವಿರಾರು ಜನರೊಂದಿಗೆ ತಾಲೂಕಾ ದಂಡಾಧಿಕಾರಿಗಳ ಮೂಲಕ ಜಿಲ್ಲಾಧಿಕಾರಿ ಹಾಗೂ ಸರಕಾರಕ್ಕೆ ಮನವಿ ಸಲ್ಲಿಸಲಾಗಿತ್ತು, ಕರೋನಾ ನಿಮಿತ್ಯ ಅನಿವಾರ್ಯವಾಗಿ ಹೊರಾಟಕ್ಕೆ ತಡೆ ಹಿಡಿಯಲಾಗಿತ್ತು, ಈಗ ಮತ್ತೆ ಹೋರಾಟ ಚುರುಕುಗೊಂಡಿದ್ದು, ಕಲಕೇರಿ ಹೋಬಳಿ ಆಗುವವರೆಗೂ ನಾವೆಲ್ಲರೂ ಸುಮ್ಮನಿರಲ್ಲ ಹೋರಾಟ ಮುಂದುವರೆಸುತ್ತೇವೆ ಎಂದು ಮಾಜಿ ತಾ.ಪಂ ಸದಸ್ಯ ಲಕ್ಕಪ್ಪ ಬಡಿಗೇರ ಹೇಳಿದರು.
ಪ್ರಗತಿಪರ ಹೋರಾಟಗಾರರ ಒಕ್ಕೂಟ ರಚನಾ ಸಮಿತಿ ವತಿಯಿಂದ ಕಲಕೇರಿ ಹೋಬಳಿ ಮಾಡಬೇಕು ಎಂದು ಸ್ಥಳೀಯ ಡಾ|| ಬಾಬಾ ಸಾಹೇಬ ಅಂಬೇಡ್ಕರ ವೃತ್ತದಿಂದ ಮುಖ್ಯ ಬಜಾರದವರೆಗೆ ಹಲಿಗೆಯೊಂದಿಗೆ ವಿವಿಧ ಘೋಷಣೆ ಕೂಗುತ್ತಾ ಮೆರವಣಿಗೆ ಮೂಲಕ ಆಗಮಿಸಿ ಟಾಯರ್ಗೆ ಬೆಂಕಿ ಹಚ್ಚಿ ಆಕ್ರೋಶ ವ್ಯಕ್ತಪಡಿಸಿದ ಪ್ರತಿಭಟನಾಕಾರರನ್ನು ಉದ್ದೇಶಿಸಿ ಅವರು ಮಾತನಾಡಿದರು.
ಮುಖಂಡರಾದ ಸುಧಾಕರ ಅಡಕಿ ಹಾಗೂ ಹಣಮಂತ ವಡ್ಡರ ಮಾತನಾಡಿದರು.
ಈ ವೇಳೆ ನಿವೃತ್ತ ಶಿಕ್ಷಕ ಎಂ.ಪಿ.ನದಾಫ, ಮುಖಂಡರಾದ ಚಾಂದಪಾಶಾ ಹವಾಲ್ದಾರ, ನಬಿಲಾಲ ನಾಯ್ಕೋಡಿ, ಕಾಶೀಂ ನಾಯ್ಕೋಡಿ, ಸಲೀಂ ನಾಯ್ಕೋಡಿ, ರಾಜು ಅಡಕಿ, ರಮೆಶ ಹೆಂಡಿ, ಈರಘಂಟಿ ಬಡಿಗೇರ, ಸಂಗಮೆಶ ಸಗರ, ಸೇರಿದಂತೆ ಅನೇಕರು ಕಲಕೇರಿ ಹೋಬಳಿ ಆಗಲೆಬೇಕು ಇದರಿಂದ ಕಲಕೇರಿ ಮಾತ್ರವಲ್ಲದೇ ಸುತ್ತಮುತ್ತಲಿನ ೪೦-೫೦ ಹಳ್ಳಿಗಳ ರೈತರು, ವಿದ್ಯಾರ್ಥಿಗಳು, ವ್ಯಾಪಾರಿಗಳು, ಅಂಗವಿಕಲರಿಗೆ, ವಯೋವೃದ್ದರಿಗೆ ಅನುಕೂಲವಾಗಲಿದೆ ಎಂದರು.
ನಂತರ ಸ್ಥಳಕ್ಕಾಗಮಿಸಿದ ತಾಳಿಕೋಟಿ ತಾಲುಕಾ ದಂಡಾಧಿಕಾರಿಗಳಾದ ಕೀರ್ತಿ ಚಾಲಕ ಅವರಿಗೆ ಪ್ರತಿಭಟನಾಕಾರರೆಲ್ಲ ಸೇರಿ ಮನವಿ ಸಲ್ಲಿಸಿದರು.
ಈ ಸಂದರ್ಭದಲ್ಲಿ ಗ್ರಾ.ಪಂ ಅಧ್ಯಕ್ಷರಾದ ರಾಜ ಅಹಮ್ಮದ ಸಿರಸಗಿ, ಮುಖಂಡರಾದ ದೇವಿಂದ್ರ ಜಂಬಗಿ, ಶಾಂತಯ್ಯ ಹಿರೇಮಠ, ಶ್ರೀಶೈಲ ಅಡಕಿ, ಪ್ರವೀಣ ಜಗಶೆಟ್ಟಿ, ಸುಧಾಕರ ಕವದಿ, ಪರಶುರಾಮ ಕುದರಕಾರ, ಅನೀಲ ಬಡಿಗೇರ, ಪರಶುರಾಮ ಬೇಡರ, ರಮೇಶ ಹೆಂಡಿ, ಚಂದ್ರಕಾಂತ ಬಡಿಗೇರ, ಶಿವರಾಯ ಮೋಪಗಾರ, ಹಾಜಿಪಾಶಾ ಜಾಗೀರದಾರ, ಅಶ್ಪಾಕ ಅತ್ತಾರ, ಅಶೊಕ ಕಾದಳ್ಳಿ, ಅಶೋಕ ಭೋವಿ ಸೇರಿದಂತೆ ಅನೇಕರು ಇದ್ದರು.

