ಮುದ್ದೇಬಿಹಾಳ: ಕರ್ಮದಲ್ಲಿ ಸಾವು ಸಹಿತವಾಗಿದೆ. ಭಗವದ್ಗೀತೆ ಸುಳ್ಳು ರಹಿತವಾಗಿದೆ ಎಂದು ಶಿಕ್ಷಣ ಸಂಯೋಜಕಿ ವಿಜಯಲಕ್ಷ್ಮೀ ಚಿಲ್ಲಾಳಶೆಟ್ಟ ಹೇಳಿದರು.
ಪಟ್ಟಣದ ಜ್ಞಾನ ಭಾರತಿ ವಿದ್ಯಾ ಮಂದಿರದಲ್ಲಿ ನಡೆದ ಶ್ರೀಮಜ್ಜಗದ್ಗುರು ಶಂಕರಾಚಾರ್ಯ ಸೋಂದಾ ಸ್ವರ್ಣವಲ್ಲೀ ಮಹಾಸಂಸ್ಥಾನದ ಯತಿವರೇಣ್ಯರಾದ ಗಂಗಾಧರೇಂದ್ರ ಸರಸ್ವತೀ ಮಹಾಸ್ವಾಮಿಗಳು ಆಯೋಜಿಸಿರುವ ಭಗವದ್ಗೀತಾ ಅಭಿಯಾನ-ಕರ್ನಾಟಕ-೨೦೨೩ರ ತಾಲೂಕು ಮಟ್ಟದ ಸಪ್ತಾಹದ ೨ನೇ ದಿನದ ಗೀತಾರಾಧನೆ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ಜೀವನದ ಪ್ರತಿಯೊಂದು ಸುಖ-ದು:ಖಗಳಿಗೆ ಗೀತೆಯಲ್ಲಿ ಉತ್ತರವಿದೆ. ಕಲೆ ಮತ್ತು ವಿಜ್ಞಾನ ಸದಶೃವಾದ ಅಂಶಗಳು ಅಡಕವಾಗಿದೆ. ಪ್ರತಿಯೊಂದು ಗೀತೆಯಲ್ಲಿನ ಅಂಶಗಳನ್ನು ಅನ್ವಯಮಾಡಿಕೊಳ್ಳುತ್ತಾ ಸಾರ್ಥಕ್ಯ ಕಾಣಬೇಕಾಗಿದೆ. ಮಕ್ಕಳು ಚಿಕ್ಕ ವಯಸ್ಸಿನಲ್ಲಿಯೇ ಮಾಡಬಾರದನ್ನು ಮಾಡುವ, ನೋಡಬಾರದನ್ನು ನೋಡುವ ಕಾರ್ಯಕ್ಕೆ ಮುಂದಾಗಿ ಸಮಾಜಕ್ಕೆ ಕಂಟಕರಾಗುತ್ತಿದ್ದಾರೆ. ಮನೆಯ ಮತ್ತು ಸುತ್ತಮುತ್ತಲಿನ ಪರಿಸರದಲ್ಲಿ ಧರ್ಮಮಾರ್ಗದ ಸುವಾಸನೆ ಪಸರಿಸುತ್ತ ಇರಬೇಕು. ಮೊದಲು ಪಾಲಕರು ಸಂಸ್ಕಾರವನ್ನು ಹೊಂದಿ ಮಕ್ಕಳಿಗೆ ಸಂಸ್ಕಾರ ಉಣಬಡಿಸಬೇಕು. ನಾವು ಮನರಂಜನೆ ಚಟುವಟಿಕೆ, ಸಮಾಜ ವ್ಯವಸ್ಥೆ, ಪ್ರತಿಯೊಂದು ಕಡೆಯಲ್ಲಿ ಕಾಣುವ ಒಳ್ಳೆಯ ಅಂಶಗಳನ್ನು ಮಾತ್ರವೇ ತೆಗೆದುಕೊಳ್ಳಬೇಕು ಎಂದರು.
ಪುರಸಭೆ ನಾಮನಿರ್ದೇಶಕ ಸದಸ್ಯರಾದ ರಾಜಶೇಖರ ಹೊಳಿ ಮಾತನಾಡಿದರು.
ನಿವೃತ್ತ ಮುಖ್ಯ ಗುರುಮಾತೆ ಶಾಂತಾ ಭಟ್ಟ ದೀಪ ಪೂಜನೀಯ ಕಾರ್ಯಕ್ರಮದ ಹಿನ್ನೆಲೆಯನ್ನು ತಿಳಿಸಿದರು.
ಸಂಸ್ಥೆಯ ಅಧ್ಯಕ್ಷ ಬಿ.ಪಿ.ಕುಲಕರ್ಣಿ ಅಧ್ಯಕ್ಷೀಯ ನುಡಿಗಳನ್ನಾಡಿದರು.
ಈ ವೇಳೆ ಉಪಾಧ್ಯಕ್ಷ ಡಾ.ಎಸ್.ಬಿ.ವಡವಡಗಿ, ಸದಸ್ಯರುಗಳಾದ ಲೀಲಾ ಭಟ್ಟ, ಬಸವರಾಜ ನಾಲತವಾಡ, ಅನಿಲ ತೇಲಂಗಿ, ಮಹಾದೇವಿ ಕಂಠಿ, ಅರುಣ ಹುನಗುಂದ, ಜಿ.ಜೆ.ಪಾದಗಟ್ಟಿ, ಅಕ್ಕಮಹಾದೇವಿ ಪೊಲೇಶಿ, ರೇಖಾ ಕಾಳೆ, ಅನಿತಾ ಕರಣಿ, ಪಿಂಟು ರಾಠೋಡ್, ಬಸನಗೌಡ ಪಾಟೀಲ್, ಶಾರದಾ ಗಸ್ತಿಗಾರ, ರಶ್ಮಿ ತೆಲಂಗಿ ಸೇರಿದಂತೆ ಇತರರು ಇದ್ದರು.
ಶಿಕ್ಷಕಿ ಶಾಹೀನ ನಾಲತವಾಡ ಮತ್ತು ಗುರುಬಾಯಿ ತಂಗಡಗಿ ಸೇರಿ ಮಹತ್ವದ ಪೋಟೊಗಳನ್ನು ಶಾಲೆಗೆ ಸಮರ್ಪಿಸಿದರು.
ಶಾಲಾ ಮಾತೆಯರು ದೀಪಾರಾಧನೆ ನೆರವೇರಿಸಿದರು. ಗುರುಮಾತೆ ರಂಜಿತಾ ಹೆಗಡೆ ವಿದ್ಯಾರ್ಥಿಗಳೊಂದಿಗೆ ಪ್ರಾರ್ಥಿಸಿದರು.
ಪ್ರಾಸ್ತಾವಿಕದೊಂದಿಗೆ ಸಂಚಾಲಕ ರಾಮಚಂದ್ರ ಹೆಗಡೆ ಸ್ವಾಗತಿಸಿದರು. ಸರಸ್ವತಿ ಮಡಿವಾಳರ್ ನಿರೂಪಿಸಿದರು. ಅನ್ನಪೂರ್ಣ ನಾಗರಾಳ ವಂದಿಸಿದರು.
Subscribe to Updates
Get the latest creative news from FooBar about art, design and business.
Related Posts
Add A Comment

