ಬೆಳಗಾವಿಯ ಸುವರ್ಣಸೌಧದ ಆವರಣದಲ್ಲಿ ಹೋರಾಟ | ರುಪ್ಸಾ ರಾಜ್ಯ ಸಂಘಟನಾ ಕಾರ್ಯದರ್ಶಿ ಸತೀಶ ಪಾಟೀಲ ಸುದ್ದಿಗೋಷ್ಠಿ
ಆಲಮಟ್ಟಿ: ಮಾನ್ಯತೆ ಪಡೆದ ಅನುದಾನ ರಹಿತ ಖಾಸಗಿ ಶಾಲೆಗಳ ಸಂಘ (ರುಪ್ಸಾ) ದಿಂದ ಅನುದಾನ ರಹಿತ ಶಾಲೆಗಳ ವಿವಿಧ ಬೇಡಿಕೆಗೆ ಆಗ್ರಹಿಸಿ ಒಂದು ದಿನದ ಹೊರಾಟವನ್ನು ಡಿ.೧೧ರಂದು ಬೆಳಗಾಂವಿಯ ಸುವರ್ಣಸೌಧದ ಆವರಣದಲ್ಲಿ ಹಮ್ಮಿಕೊಳ್ಳಲಾಗಿದೆ ಎಂದು ಸಂಘದ ರಾಜ್ಯ ಸಂಘಟನಾ ಕಾರ್ಯದರ್ಶಿ ಸತೀಶ ಪಾಟೀಲ ಹೇಳಿದರು.
ಶುಕ್ರವಾರ ಇಲ್ಲಿನ ಪ್ರವಾಸಿ ಮಂದಿರದಲ್ಲಿ ಪತ್ರಿಕಾಗೋಷ್ಠಿಯಲ್ಲಿ ಅವರು ಮಾತನಾಡಿದರು.
೧೯೯೫ರ ನಂತರದ ರಾಜ್ಯದಲ್ಲಿನ ಕನ್ನಡ ಮಾಧ್ಯಮ ಶಾಲೆಗಳನ್ನು ಅನುದಾನಕ್ಕೆ ಒಳಪಡಿಸಬೇಕು, ಖಾಸಗಿ ಶಾಲೆಗಳಲ್ಲಿ ಶೇಕಡಾ ೨೫%ರಷ್ಟು ಆರ್.ಟಿ.ಇ ಮಕ್ಕಳ ದಾಖಲಾತಿಯನ್ನಯ ಮರು ಸ್ಥಾಪಿಸುವ ಕುರಿತು ಹಾಗೂ ಪ್ರಸ್ತುತ ನೀಡುತ್ತಿರುವ ೧೬,೦೦೦ ವೆಚ್ಚವನ್ನು ೩೫,೦೦೦ ರೂಗಳಿಗೆ ವಿಸ್ತರಿಸಬೇಕು ಎಂದರು.
ಖಾಸಗಿ ಅನುದಾನ ರಹಿತ ಮಾನ್ಯತೆ ಪಡೆದ ಶಾಲೆಗಳ ನವೀಕರಣವನ್ನು ೧೦ ವರ್ಷಗಳ ಅವಧಿಗೆ ನಿಗದಿ ಪಡಿಸುವ ಹಾಗೂ ಖಾಸಗಿ ಶಾಲೆಗಳಿಗೆ ನವೀಕರಣ ಸಂದರ್ಭದಲ್ಲಿ ಕೇಲುವ ಫೈರ್ ಸೇಪ್ಟಿ ಹಾಗೂ ಕಟ್ಟಡ ಭದ್ರತಾ ಪ್ರಮಾಣ ಪತ್ರಗಳಲ್ಲಿ ರಿಯಾಯಿತಿ ನೀಡಬೇಕು ಎಂದರು.
ರುಪ್ಸಾ ಕರ್ನಾಟಕ ಸಂಘದ ರಾಜ್ಯಾದ್ಯಕ್ಷ ಡಾ: ಹಾಲನೂರ ರವರ ನೇತೃತ್ವದಲ್ಲಿ ರಾಜ್ಯದ ಬಹುತೇಕ ಶಿಕ್ಷಣ ಸಂಸ್ಥೆಗಳ ಪದಾಧಿಕಾರಿಗಳು ಈ ಹೋರಾಟದಲ್ಲಿ ಪಾಲ್ಗೊಂಡು ಸಂಬಂದಿಸಿದ ಮಂತ್ರಿಗಳಿಗೆ ಹಾಗೂ ಅಧಿಕಾರಿಗಳ ಗಮನ ಸೆಳೆದು ಮನವಿ ಸಲ್ಲಿಸಲಾಗುವದು ಎಂದರು.
ಸರಕಾರ ನಮ್ಮ ಬೇಡಿಕೆ ಈಡೇರಿಸದಿದ್ದಲ್ಲಿ ರಾಜ್ಯದ ಅನುದಾನ ರಹಿತ ಶಾಲೆಗಳ ಸಂಘ ಬೆಂಗಳೂರಿನಲ್ಲಿ ಸತ್ಯಾಗೃಹಕ್ಕೆ ಇಳಿಯುವುದು ಅನಿವಾರ್ಯ ಎಂದರು.
ರಾಜ್ಯ ಜಂಟಿ ಕಾರ್ಯದರ್ಶಿ ವಿನಯ ಪಾಟೀಲ, ಎಸ್.ಎಚ್.ದಾಸರ, ಅಶೋಕ ವಡ್ಡರ ಇದ್ದರು.

