ಬಸವನಬಾಗೇವಾಡಿ: ತಾಲೂಕು ಗ್ರಾಮ ಸಹಾಯಕರ ಸಂಘದವರು ಬೆಳಗಾವಿಯಲ್ಲಿ ಹಮ್ಮಿಕೊಂಡಿರುವ ಮುಷ್ಕರದಲ್ಲಿ ಭಾಗವಹಿಸಲು ಕೇಂದ್ರ ಸ್ಥಾನ ಬಿಡುಗಡೆಗೆ ಅನುಮತಿ ನೀಡುವಂತೆ ತಹಸೀಲ್ದಾರ ವೈ.ಎಸ್.ಸೋಮನಕಟ್ಟಿ ಅವರಿಗೆ ಶುಕ್ರವಾರ ಮನವಿ ಸಲ್ಲಿಸಿದರು.
ಅವರು ಸಲ್ಲಿಸಿದ ಮನವಿಯಲ್ಲಿ ಕಂದಾಯ ಇಲಾಖೆಯಲ್ಲಿ ಸುಮಾರು ೪೬ ವರ್ಷಗಳಿಂದ ಸೇವೆ ಸಲ್ಲಿಸುತ್ತಿರುವ ೧೦,೪೫೦ ಗ್ರಾಮ ಸಹಾಯಕರನ್ನು ಡಿ ದರ್ಜೆ ನೌಕರರೆಂದು ಪರಿಗಣಿಸಿ ಸೇವೆಯನ್ನು ಖಾಯಂಗೊಳಿಸಬೇಕೆಂದು ಮತ್ತು ಸೇವಾ ಭದ್ರತೆ ನೀಡಬೇಕೆಂದು ಡಿ.೧೧ ರಂದು ಕರ್ನಾಟಕ ರಾಜ್ಯ ಸರ್ಕಾರ ಕಂದಾಯ ಇಲಾಖೆಯ ಗ್ರಾಮ ಸಹಾಯಕರ ಸಂಘದ ರಾಜ್ಯಾಧ್ಯಕ್ಷರ ಕರೆಯ ಮೇರೆಗೆ ಬೆಳಗಾವಿಯ ಕಿತ್ತೂರು ವೀರರಾಣಿ ಚನ್ನಮ್ಮ ಅರಮನೆ ಮೈದಾನದಿಂದ ಪಾದಯಾತ್ರೆ ಮೂಲಕ ಬೆಳಗಾವಿಯ ಸುವರ್ಣ ಸೌಧದವರೆಗೆ ತಲುಪಿದ ನಂತರ ಡಿ.೧೨ ರಿಂದ ಸುವರ್ಣ ಸೌಧದ ಮುಂಭಾಗ ಅನಿರ್ದಿಷ್ಟಾವಧಿ ಮುಷ್ಕರ ನಡೆಯಲಿದೆ. ಈ ಮುಷ್ಕರದಲ್ಲಿ ತಾಲೂಕಿನ ೩೦ ಗ್ರಾಮ ಸಹಾಯಕರು ಭಾಗವಹಿಸಲಿದ್ದೇವೆ. ಅದಕ್ಕಾಗಿ ನಾವು ಕೇಂದ್ರ ಸ್ಥಾನವನ್ನು ಬಿಡಲು ತಹಸೀಲ್ದಾರರು ನಮಗೆ ಅನುಮತಿ ನೀಡಬೇಕೆಂದು ಮನವಿ ಮಾಡಿಕೊಳ್ಳುತ್ತೇವೆ ಎಂದು ತಿಳಿಸಲಾಗಿದೆ.
ಮನವಿ ಪತ್ರಕ್ಕೆ ಸಂಘದ ರಾಜ್ಯ ಸಂಘಟನಾ ಕಾರ್ಯದರ್ಶಿ ಅಲ್ಲಾಭಕ್ಷ ಕೊರಬು, ತಾಲೂಕು ಗೌರವಾಧ್ಯಕ್ಷ ವಿಠ್ಠಲ ಹುಲ್ಲೂರ, ತಾಲೂಕು ಉಪಾಧ್ಯಕ್ಷ ಯಲಗೂರದಪ್ಪ ದಳವಾಯಿ, ತಾಲೂಕು ಕಾರ್ಯದರ್ಶಿ ಶಬ್ಬೀರ ಇನಾಮದಾರ, ತಾಲೂಕು ಖಜಾಂಚಿ ಶ್ರೀಶೈಲ ಕೊಟ್ಲಿ, ತಾಲೂಕು ಸಂಘಟನಾ ಕಾರ್ಯದರ್ಶಿ ಅಕ್ಬರ ವಾಲೀಕಾರ ಸಹಿ ಮಾಡಿದ್ದಾರೆ.
Subscribe to Updates
Get the latest creative news from FooBar about art, design and business.
ಕೇಂದ್ರ ಸ್ಥಾನ ಬಿಡುಗಡೆಗೆ ಅನುಮತಿ ಕೋರಿ ಗ್ರಾಮ ಸಹಾಯಕರ ಮನವಿ
Related Posts
Add A Comment

