ಇಂಡಿ: ಹೆಲ್ಮೆಟ್ ಹಾಕದ ವಕೀಲರ ಮೇಲೆ ಪೊಲೀಸರು ನಡೆಸಿದ ಹಲ್ಲೆ ಖಂಡಿಸಿ ವಕೀಲರು ನಗರದಲ್ಲಿ ಬುಧವಾರ ಪ್ರತಿಭಟನೆ ನಡೆಸಿದರು.
ಪಟ್ಟಣದ ನ್ಯಾಯಾಲಯದ ಆವರಣದಿಂದ ಪ್ರತಿಭಟನೆ ಪ್ರಾರಂಭಿಸಿದ ಅವರು, ಹೃದಯ ಭಾಗದ ಬಸವೇಶ್ವರ ವೃತದಲ್ಲಿ ಸುಮಾರು 5 ನಿಮಿಷಗಳ ಕಾಲ ರಸ್ತೆ ತಡೆದು ಪೋಲಿಸರ ವಿರುದ್ಧ ಧಿಕ್ಕಾರ ಹೇಳಿ, ಆಕ್ರೋಶ ವ್ಯಕ್ತಪಡಿಸಿದರು.
ತದನಂತರ ತಾಲೂಕು ಆಡಳಿತ ಸೌಧಕ್ಕೆ ತೆರಳಿ ಉಪವಿಭಾಗ ಅಧಿಕಾರಿ ಅಬೀದ್ ಗದ್ಯಾಳ ಅವರಿಗೆ ನ್ಯಾಯವಾದಿಗಳ ಸಂಘದ ಅಧ್ಯಕ್ಷ ಪಿ.ಬಿ ಪಾಟೀಲ್ ಹಾಗೂ ಹಿರಿಯ ನ್ಯಾಯವಾದಿಗಳು ಸೇರಿ ಮನವಿ ಸಲ್ಲಿಸಿದರು.
ಈ ಸಂದರ್ಭದಲ್ಲಿ ನ್ಯಾಯವಾದಿ ಸೋಮು ನಿಂಬರಗಿಮಠ, ಜೆ.ಬಿ. ಬೇನೂರ ಮಾತನಾಡಿ, ಇಡೀ ದೇಶದ ಕಾನೂನು ಸುವ್ಯವಸ್ಥಿತ ಕಾಪಾಡಿಕೊಂಡು ಹೋಗುವುದರಲ್ಲಿ ನ್ಯಾಯವಾದಿಗಳು ಪ್ರಥಮರು, ಸಮಾಜದಲ್ಲಿ ಶಾಂತಿ, ಸುವ್ಯವಸ್ಥಿತ ರಕ್ಷಣೆ ಮಾಡಬೇಕಾಗಿದ್ದ ಪೋಲಿಸರು ನ್ಯಾಯವಾದಿಗಳ ಮೇಲೆ ಹಲ್ಲೆ ಮಾಡುವ ಪ್ರವೃತ್ತಿ ಬೆಳೆಸಿಕೊಂಡಿದ್ದು ಬೇಜಾರಿನ ಸಂಗತಿ. ಕಳೆದ ಎರಡು ದಿನಗಳ ಹಿಂದೆ
ಚಿಕ್ಕಮಂಗಳೂರು ನ್ಯಾಯವಾದಿ ಪ್ರೀತಮ್ ಎನ್ ಟಿ ಹೆಲ್ಮೆಟ್ ಧರಿಸಿಲ್ಲ ಎಂಬ ಕಾರಣಕ್ಕೆ ಪೋಲಿಸರು ಅವರ ಮೇಲೆ ಹಲ್ಲೆ ನಡೆಸಿ, ದೌರ್ಜನ್ಯ ಎಸಗಿ ಅಮಾನುಷ ನಡೆದುಕೊಂಡಿದ್ದು ಖಂಡನೀಯ. ಈ ಕುರಿತು ಅಲ್ಲಿನ ನ್ಯಾಯವಾದಿಗಳು ಪ್ರತಿಭಟನೆಗೆ ಮುಂದಾದಾಗ ಅಲ್ಲಿನ ಪೋಲಿಸ್ ಇಲಾಖೆ ಅಧಿಕಾರಿಗಳು ಕಾರಣವಿಲ್ಲದೆ ಅನೇಕ ನ್ಯಾಯವಾದಿಗಳ ಮೇಲೆ ಮೂರು ಪ್ರಕರಣ ದಾಖಲಿಸುವ ಮೂಲಕ ಸಂವಿಧಾನ ವಿರೋಧಿ ನೀತಿ ಪ್ರದರ್ಶನ ಮಾಡಿದ್ದಾರೆ. ಇಂತಹ ಪೋಲಿಸರ ಮೇಲೆ ತುರ್ತು ಕಾನೂನು ಕ್ರಮ ಜರುಗಿಸಬೇಕು. ಒಂದು ವೇಳೆ ನಿರ್ಲಕ್ಷ್ಯ ವಹಿಸಿದ್ರೆ ರಾಜ್ಯಾದ್ಯಂತ ಉಗ್ರವಾದ ಪ್ರತಿಭಟನೆ ಮಾಡಲಾಗುತ್ತದೆ ಎಂದು ಎಚ್ಚರಿಸಿದರು.
ಈ ಸಂದರ್ಭದಲ್ಲಿ ನ್ಯಾಯವಾದಿ ಸಂಘದ ತಾಲೂಕು ಅಧ್ಯಕ್ಷ ಪಿ.ಬಿ ಪಾಟೀಲ್, ಕಾರ್ಯದರ್ಶಿ ಎಸ್ ಆರ್ ಬಿರಾದಾರ, ನ್ಯಾಯವಾದಿ ಸಿದ್ದರಾಮ ಬೂದಿಹಾಳ, ಎಮ್ ಸಿ ಬಿರಾದಾರ, ಎಸ್ ಎಲ್ ನಿಂಬರಗಿ ಮಠ, ಪಿ.ಜಿ ನಾಡಗೌಡ, ಜೆ ಕೆ ಕಾಂಬಳೆ, ಪಿ.ಎಮ್ ಮೂರಮನ, ನಾಡಪುರೋಹಿತ, ವಾಯ್ ಎಸ್ ಪೂಜಾರಿ, ಎ ಜಿ ಜೋಶಿ, ಎಮ್ ಎಸ್ ತೇಲಿ, ಬಿ ಕೆ ಮಸಳಿ, ಎ ಎಮ್ ಬಿರಾದಾರ, ಬಿ.ಬಿ ಬಿರಾದಾರ, ಎಸ್.ಆರ್ ಮುಜಗೊಂಡ, ಎಸ್ ಜಿ ವಾಲಿಕಾರ, ಎಸ್ ಬಳವಂತಿ, ಜಿ ವಿ ಪಾಟೀಲ್, ಎಸ್ ವಿ ಪಾಟೀಲ್, ಎಸ್ ಎಸ್ ಪಾಟೀಲ್, ಎಮ್ ಪಿ ಕುಲಕರ್ಣಿ, ಸಿ ಎಸ್ ನಾಡಗೌಡ, ಜೆ ಬಿ ಬೇನೂರ, ಅಶೋಕ ದೊತ್ರೆ, ಜೆ. ಬಿ ಬಾಗವಾನ, ಯಲ್ಲಪ್ಪ ಜಮಾದಾರ, ವಾಯ್ ಎಸ್ ಪೂಜಾರಿ ಉಪಸ್ಥಿತರಿದ್ದರು.
Subscribe to Updates
Get the latest creative news from FooBar about art, design and business.
Related Posts
Add A Comment

