ದೇವರ ಹಿಪ್ಪರಗಿ: ಸಿದ್ದೇಶ್ವರ ಶ್ರೀಗಳ ಆಸೆಯಂತೆ ರೈತರಿಗಾಗಿ ನನ್ನ ಐದು ವರ್ಷದ ಅಧಿಕಾರ ಅವಧಿಯಲ್ಲಿ ಕ್ಷೇತ್ರದ ಸಾವಿರಾರು ಎಕರೆ ನೀರಾವರಿ ಮಾಡುವುದಕ್ಕಾಗಿ ನೂರಾರು ಕೋಟಿ ಅನುದಾನ ತಂದು ನೀರಾವರಿ ಕಾಮಗಾರಿಗಳು ಮಾಡಿರುವುದು ನನಗೆ ತೃಪ್ತಿಯಿದೆ ಎಂದು ಮಾಜಿ ಶಾಸಕ ಸೋಮನಗೌಡ ಪಾಟೀಲ ಸಾಸನೂರ ಹೇಳಿದರು.
ಮತಕ್ಷೇತ್ರದ ಚಿಕ್ಕರೋಗಿ ಗ್ರಾಮದಲ್ಲಿ ಮಂಗಳವಾರದಂದು ಗಂಗಾ ಪೂಜೆ ಹಾಗೂ ಬ್ರಿಜ್, ಕಮ್ ಬಾಂದಾರು ಲೋಕಾರ್ಪಣಾ ಸಮಾರಂಭ ಉದ್ಘಾಟಿಸಿ ಮಾತನಾಡಿದ ಅವರು, ರಾಜಕಾರಣಿಗಳಿಗೆ ಅಧಿಕಾರ ಶಾಶ್ವತ ಅಲ್ಲ, ಅಧಿಕಾರ ಅವಧಿಯಲ್ಲಿ ಮಾಡಿರುವ ಕಾಮಗಾರಿಗಳು ಕ್ಷೇತ್ರದ ಜನಸಾಮಾನ್ಯರಿಗೆ ಸಮರ್ಪಕವಾಗಿ ತಲುಪುವಂತಾಗಬೇಕು. ಇನ್ನು ಕೆಲವು ನೀರಾವರಿ ಕಾಮಗಾರಿಗಳು ಪೂರ್ಣಗೊಳ್ಳಬೇಕಾದರೆ ಈಗಿನ ಶಾಸಕರು ಸರ್ಕಾರದ ಮೇಲೆ ಒತ್ತಡ ತಂದು ಇನ್ನಷ್ಟು ಅನುದಾನ ಬಿಡುಗಡೆಗೊಳಿಸಿ ಇನ್ನುಳಿದ ಕಾಮಗಾರಿಗಳು ಪೂರ್ಣಗೊಳಿಸಿ ಕ್ಷೇತ್ರದ ರೈತರಿಗೆ ಅನುಕೂಲ ಮಾಡಿಕೊಡಬೇಕು. ಅದಕ್ಕಾಗಿ ನನ್ನ ಸಲಹೆ, ಸಹಕಾರ ಈಗಿನ ಶಾಸಕರಿಗೆ ಕೊಡುತ್ತೇನೆ. ನನ್ನ ಅಧಿಕಾರ ಅವಧಿಯಲ್ಲಿ ಆದ ಕಾಮಗಾರಿ ಈಗ ನನ್ನಿಂದಲೇ ಲೋಕಾರ್ಪಣೆ ಮಾಡಿಸಿ ನನಗೆ ಚಿಕ್ಕರೂಗಿ ಗ್ರಾಮದ ರೈತರಿಗೆ ನಾನು ಚಿರಋಣಿಯಾಗಿರುತ್ತೇನೆ. ಕ್ಷೇತ್ರದ ಜನರ ಸಮಸ್ಯೆಗೆ ನಾನು ಸದಾ ಸ್ಪಂದಿಸುತ್ತೇನೆ ಎಂದು ಹೇಳಿದರು.
ಬಿಜೆಪಿ ಜಿಲ್ಲಾ ಮುಖಂಡ ರಮೇಶ ಮಸಬಿನಾಳ. ಗ್ರಾಮದ ಹಿರಿಯರಾದ ಎಬಿ ಕುಂಡಗೋಳಿ. ಮಾತನಾಡಿದರು.
ಸಮಾರಂಭದಲ್ಲಿ ಗ್ರಾಮದ ಮುಖಂಡರಾದ ನಾಗಣ್ಣ ಮುಳುಜಿ. ಶಾಂತಪ್ಪ ಬಾಗಲಕೋಟೆ. ಎಮ್ ಡಿ ಕಣಮೇಶ್ವರ. ಹಣಮಂತ ಕುಂಬಾರ. ಸಿದ್ದಾರ್ಥ ಮೊಳಸಾವಳಗಿ. ಸೋಮಣ್ಣ ಬಾಗಲಕೋಟ. ಅಪ್ಪಸಾಹಬ ಸಾಹೂ. ಬಸವರಾಜ ಕುಂಬಾರ. ವಿಠಲಗೌಡ ಬಿರಾದಾರ. ಶಂಕರಗೌಡ ಪಾಟೀಲ. ರುದ್ರಗೌಡ ಚೌದರಿ. ಸೇರಿದಂತೆ ಚಿಕ್ಕರೋಗಿ ಕಡ್ಲೆವಾಡ ಗ್ರಾಮದ ಹಿರಿಯರು ಇದ್ದರು.
Subscribe to Updates
Get the latest creative news from FooBar about art, design and business.
Related Posts
Add A Comment

