ವಿಜಯಪುರ: ನಗರದ ಶಿವಾಜಿ ವೃತ್ತದಲ್ಲಿ ಶ್ರೀ ಗಜಾನನ ಉತ್ಸವ ಮಹಾ ಮಂಡಳ ವತಿಯಿಂದ ಅನ್ನದಾಸೋಹ ಕಾರ್ಯಕ್ರಮ ನಡೆಯಿತು.
ಜ್ಞಾನಯೋಗಾಶ್ರಮದ ಅಧ್ಯಕ್ಷ ಗುರುಗಳಾದ ಬಸವಲಿಂಗ ಸ್ವಾಮೀಜಿ ಪೂಜೆ ಮಾಡುವ ಮೂಲಕ ದಾಸೋಹಕ್ಕೆ ಚಾಲನೆ ನೀಡಿದರು.
ಗಣೇಶ ಭಕ್ತರಿಗಾಗಿ 3 ಕ್ವಿಂಟಾಲ್ ಅನ್ನ, ಒಂದು ಕ್ವಿಂಟ್ವಾಲ್ ಸಜ್ಜಕ ಮಾಡಿಸಲಾಗಿತ್ತು. 3000 ಕ್ಕೂ ಅಧಿಕ ಭಕ್ತಾಧಿಗಳು ಪ್ರಸಾದ ಸೇವನೆ ಮಾಡಿದರು.
ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದ ಬಸವಲಿಂಗ ಸ್ವಾಮೀಜಿ, ಅನ್ನ ದಾಸೋಹ ಕಾರ್ಯಕ್ರಮ ಅಚ್ಚುಕಟ್ಟಾಗಿ ಮಾಡಲಾಗಿದೆ. ವಿಜಯಪುರದ ಶಿವಾಜಿ ವ್ರತ್ತದಲ್ಲಿಯೂ ಇನ್ನು ಮುಂದೆ ಪ್ರತಿ ಸೋಮವಾರ ಅನ್ನದಾಸೋಹ ಹಮ್ಮಿಕೊಂಡದಕ್ಕೆ ಅಭಿನಂದನೆ ಸಲ್ಲಿಸಿದರು. ನಿರಂತರವಾಗಿ ಜ್ಞಾನಯೋಗಾಶ್ರಮದಲ್ಲಿ ಅನ್ನಪ್ರಸಾದ ಇರುತ್ತದೆ. ಇದೀಗ ಶಿವಾಜಿ ವೃತ್ತದಲ್ಲೂ ದಾಸೋಹ ಕಾರ್ಯಕ್ರಮ ಮಾಡುತ್ತಿರುವುದು ಸಂತಸ ತಂದಿದೆ ಎಂದರು. ವಿಜಯಪುರ ಜಿಲ್ಲೆ ದಾಸೋಹಕ್ಕೆ ಹೆಸರುವಾಸಿಯಾಗಿದೆ. ಇಂತಹ ಜಿಲ್ಲೆಯಲ್ಲಿ ಗಜಾನನ ಉತ್ಸವ ಮಹಾಮಂಡಳ ಸಂಸ್ಥಾಪಕ ಅಧ್ಯಕ್ಷರಾದ ಮಾಜಿ ಸಚಿವರಾದ ಅಪ್ಪಾಸಾಹೇಬ್ ಪಟ್ಟಣಶೆಟ್ಟಿ ನೇತೃತ್ವದಲ್ಲಿ ಮಹಾ ಮಂಡಳಿಯವರು ಪ್ರತಿ ಸೋಮವಾರ ದಾಸೋಹ ಹಮ್ಮಿಕೊಂಡಿರುವುದು ಹೆಮ್ಮೆಯ ಸಂಗತಿ ಎಂದರು. ಭಕ್ತಾದಿಗಳು ಅನ್ನ ಪ್ರಸಾದ ಸದುಪಯೋಗ ಪಡೆದುಕೊಳ್ಳಬೇಕು ಎಂದ ಶ್ರೀಗಳು ಸಲಹೆ ನೀಡಿದರು.
ಸಿದ್ದೇಶ್ವರ ಸಹಕಾರಿ ಬ್ಯಾಂಕ್ ನಿರ್ದೇಶಕ ಈರಣ್ಣ ಪಟ್ಟಣಶೆಟ್ಟಿ ಮಾತನಾಡಿದರು.
ಕಾರ್ಯಕ್ರಮದಲ್ಲಿ ಮಾಜಿ ಉಪ ಮೇಯರ್ ಗೋಪಾಲ್ ಘಟಕಾಂಬಳೆ. ಮಾಜಿ ಬಿಡಿಎ ಅಧ್ಯಕ್ಷ ಭೀಮಾಶಂಕರ ಹದನೂರು, ಮಾಜಿ ಪಾಲಿಕೆ ಸದಸ್ಯ ಅಪ್ಪು ಸಜ್ಜನ, ರಮೇಶ ರೇಶ್ಮಿ, ಸಂತೋಷ ಜಾಧವ, ವಿನಾಯಕ ದೈಹಿಂಡೆ, ಕಾಂತು ಸಿಂಧೆ, ಜಗದೀಶ ಮುಚ್ಚಂಡು, ಅನೀಲ್ ಉಪ್ಪಾರ. ನಿಖೀಲ ಮ್ಯಾಗೇರಿ, ಆನಂದ ಮುಚಂಡಿ, ಮಂಜು ಘಾಟಗೆ, ಪ್ರಫುಲ್ ಪವಾರ, ಮಾರುತಿ ಮೋರೆ, ಸನ್ನಿ ಗವಿಮಠ ಸೇರಿದಂತೆ ಮಹಾಮಂಡಳದ ಕಾರ್ಯಕರ್ತರು ಉಪಸ್ಥಿತರಿದ್ದರು.
Subscribe to Updates
Get the latest creative news from FooBar about art, design and business.
Related Posts
Add A Comment

