ಬಸವನಬಾಗೇವಾಡಿ: ಬಸವೇಶ್ವರ ಜನ್ಮಸ್ಥಳ ಬಸವನಬಾಗೇವಾಡಿಯಲ್ಲಿ ಎರಡು ದಿನಗಳ ಕಾಲ ಹಮ್ಮಿಕೊಂಡಿದ್ದ ರಾಜ್ಯ ಮಟ್ಟದ ೨೦ ನೇ ನಗೆ ಸಮ್ಮೇಳನದಲ್ಲಿ ಹಿಂದಿನ-ಇಂದಿನ-ಮುಂದಿನ ನಗುವಿನ ಕುರಿತು ಹೆಚ್ಚು ಚರ್ಚೆಯಾಗದೇ ಸಂಘಟಕರು ಸನ್ಮಾನಕ್ಕೆ ಹೆಚ್ಚು ಒತ್ತು ಕೊಟ್ಟಿರುವುದು ನಮಗೆ ನಿರಾಶೆ ಉಂಟು ಮಾಡಿದೆ ಎಂದು ಬೆಂಗಳೂರಿನಿಂದ ಆಗಮಿಸಿದ್ದ ಹಿರಿಯ ಜೀವಿ, ಸಮ್ಮೇಳನದ ಪ್ರತಿನಿಧಿ, ನಿವೃತ್ತ ಖಾದಿಗ್ರಾಮೋದ್ಯೋಗ ನೌಕರ ಸುರೇಶ ಕಲಘಟ್ಟಗಿ ಹೇಳಿದರು.
ಅವರು ಭಾನುವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ರಾಜ್ಯದಲ್ಲಿ ನಗೆಕೂಟ ೧೯೯೮ ರಲ್ಲಿ ಸ್ಥಾಪನೆಯಾದಗಿನಿಂದಲೂ ನಾನು ನಗೆಕೂಟದ ಸದಸ್ಯನಾಗಿದ್ದೇನೆ. ರಾಜ್ಯದ ವಿವಿಧೆಡೆಗಳಲ್ಲಿ ಪ್ರತಿ ವರ್ಷ ನಡೆಯುವ ನಗೆ ಸಮ್ಮೇಳನಕ್ಕೆ ನಿರಂತರವಾಗಿ ಹೋಗುತ್ತಿದ್ದೇನೆ. ಬಸವೇಶ್ವರ ಜನ್ಮಸ್ಥಳದಲ್ಲಿ ನಡೆಯುವ ಈ ರಾಜ್ಯ ಸಮ್ಮೇಳನಕ್ಕೆ ಬರುವ ಮೂಲಕ ಬಸವ ಜನ್ಮಸ್ಥಳ ನೋಡುವ ಜೊತೆಗೆ ನಗೆ ಕುರಿತ ಚಿಂತನ-ಮಂಥನದಲ್ಲಿ ಭಾಗವಹಿಸಲು ಉತ್ಸಾಹದಿಂದ ಬಂದಿದ್ದೆ. ಈ ಸಮ್ಮೇಳನದಲ್ಲಿ ಶೇ. ೩೦ ರಷ್ಟು ಮಾತ್ರ ನಗೆಗೆ ಒತ್ತು ನೀಡಲಾಗಿತ್ತು. ನಾನು ಮೂಲತಃ ಧಾರವಾಡದವನು. ನಾನು ೬೦ ವರ್ಷದಿಂದ ಬೆಂಗಳೂರಿನಲ್ಲಿದ್ದೇನೆ. ರಾಜ್ಯದಲ್ಲಿ ಸು. ೨೦೦ ನಗೆಕೂಟಗಳಿವೆ. ದೇಶದಲ್ಲಿ ಮದನ ಕಟಾರಿಯಾ ಎಂಬುವವರು ಮೊದಲು ಮುಂಬಯಿಯಲ್ಲಿ ನಗೆಕೂಟವನ್ನು ಹುಟ್ಟುಹಾಕಿದರು. ಬೆಂಗಳೂರಿನ ಜಯನಗರದಲ್ಲಿರುವ ಮಾಧವನ ಪಾರ್ಕಿನಲ್ಲಿ ಮೊದಲು ನಗೆಕೂಟ ಆರಂಭವಾಯಿತು. ನಮ್ಮ ಕತ್ರಿಗುಪ್ ಪ್ರದೇಶದಲ್ಲಿ ಪ್ರತಿನಿತ್ಯ ಬೆಳಗ್ಗೆ ನಗೆಕೂಟದ ಎಲ್ಲ ಸದಸ್ಯರು ಕೂಡಿಕೊಂಡು ನಗೆಕೂಟವನ್ನು ನಿರಂತರವಾಗಿ ನಡೆಸಿಕೊಂಡು ಬರುತ್ತಿದ್ದೇವೆ. ನಗೆಕೂಟದಿಂದ ಆರೋಗ್ಯ ವೃದ್ಧಿಯಾಗುವ ಜೊತೆಗೆ ಸಂಬಂಧಗಳು ವೃದ್ಧಿಯಾಗುತ್ತವೆ. ನಮ್ಮ ಕೂಟದಲ್ಲಿ ಹೆಚ್ಚಾಗಿ ಹಿರಿಯರು ಇದ್ದಾರೆ. ಕೂಟದ ಪ್ರತಿಯೊಬ್ಬರ ಕಾರ್ಯಕ್ರಮದಲ್ಲಿ ಎಲ್ಲರೂ ಭಾಗಿಯಾಗುವ ಮೂಲಕ ಜೀವನವನ್ನು ಸಂತಸವಾಗಿ ಕಳೆಯುತ್ತಿದ್ದೇವೆ. ನಮ್ಮ ಕೂಟದಿಂದ ಸಾಮಾಜಿಕ ಕಾರ್ಯಗಳನ್ನು ಹಮ್ಮಿಕೊಳ್ಳುವ ಮೂಲಕ ಜನರಲ್ಲಿ ಜಾಗೃತಿ ಮೂಡಿಸಲಾಗುತ್ತಿದೆ. ನಗೆಕೂಟದಿಂದ ಜನರಲ್ಲಿ ಬಾಂಧವ್ಯ ವೃದ್ಧಿಯಾಗುತ್ತದೆ ಎಂದು ಅಭಿಪ್ರಾಯ ಪಟ್ಟರು.
Subscribe to Updates
Get the latest creative news from FooBar about art, design and business.
Related Posts
Add A Comment

