ಸಿಂದಗಿ: ಪಟ್ಟಣದ ಸಾರಂಗಮಠವು ನಿರಂತರವಾಗಿ ಸಮಾಜಕ್ಕೆ ಮಾದರಿಯಾಗುವ ಮತ್ತು ಸಂದೇಶ ನೀಡುವ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುತ್ತಾ ಬಂದಿದೆ ಎಂದು ಶಾಸಕ ಅಶೋಕ ಮನಗೂಳಿ ಹೇಳಿದರು.
ಭಾನುವಾರದಂದು ಪಟ್ಟಣದ ಸಾರಂಗಮಠದಲ್ಲಿ ಪೂಜ್ಯ ಚನ್ನವೀರ ಸ್ವಾಮೀಜಿ ಪ್ರತಿಷ್ಠಾನ ಸಾರಂಗಮಠ ಸಿಂದಗಿ ವತಿಯಿಂದ ಪೂಜ್ಯ ಶ್ರೀ ಚನ್ನವೀರ ಸ್ವಾಮೀಜಿಗಳ ೧೩೦ನೆಯ ಜಯಂತೋತ್ಸವ ನಿಮಿತ್ಯವಾಗಿ ಹಮ್ಮಿಕೊಂಡ ಶಿವಶರಣೆಯರ ಜೀವನ ವಚನಾಮೃತ ಪ್ರವಚನದಲ್ಲಿ ಶತಮಾನಕಂಡ ಸಿಂದಗಿ ಗಣ್ಯ ವರ್ತಕರಿಗೆ ಹಾಗೂ ಗಣ್ಯ ಹಿರಿಯರಿಗೆ ನಡೆದ ಸನ್ಮಾನ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಸಾರಂಗಮಠವು ಕಳೆದ ೫೦ ವರ್ಷಗಳಿಂದ ವಿವಿಧ ಕ್ಷೇತ್ರದಲ್ಲಿ ಸಾಧನೆ ಮಾಡಿದ ಸಾಧಕರಿಗೆ ಸನ್ಮಾನಿಸಿ ಗೌರವಿಸುತ್ತಿರುವುದು ಹೆಮ್ಮೆಯ ವಿಷಯವಾಗಿದೆ. ಒಂದು ವ್ಯಾಪಾರವನ್ನು ಶತಮಾನದ ಅಂಚಿನವರೆಗೂ ತೆಗೆದುಕೊಂಡು ಹೋಗುವುದು ಎಂದರೆ ಕಷ್ಟ. ಆದರೆ ಸಿಂದಗಿ ನಗರದಲ್ಲಿ ವಾರದ, ಕುಲಕರ್ಣಿ, ಪೋರವಾಲ್, ಕಮತಗಿ ಹಾಗೂ ಗೋಲಾ ಕುಟುಂಬಗಳು ಶತಮಾನ ಕಂಡಿರುವುದು ಶ್ಲಾಘನೀಯ ಎಂದರು.
ಈ ವೇಳೆ ಸನ್ಮಾನ ಸ್ವೀಕರಿಸಿದ ಗಣ್ಯವರ್ತಕ ನೆಹರೂ ಪೋರವಾಲ್ ಮಾತನಾಡಿದರು.
ಬಳಿಕ ಅಶೋಕ ವಾರದ, ಶಿವಪ್ಪಗೌಡ ಬಿರಾದಾರ ಮಾತನಾಡಿದರು.
ಈ ವೇಳೆ ಶತಮಾನ ಕಂಡ ಗಣ್ಯ ವರ್ತಕರಿಗೆ ಹಾಗೂ ಶತಮಾನದ ಅಂಚಿನಲ್ಲಿರುವ ಹಿರಿಯರಿಗೆ ಸನ್ಮಾನಿಸಲಾಯಿತು.
ಇದೇ ಸಂದರ್ಭದಲ್ಲಿ ಸಾರಂಗಮಠದ ಶ್ರೀಗಳಿಗೆ ಡಾ. ಪ್ರಶಾಂತ ಗುಣಾರಿ ಹಾಗೂ ವಾರದ ಕುಟುಂಬದವರಿಂದ ತುಲಾಭಾರ ಸೇವೆ ನಡೆಯಿತು.
ಇದೇ ಸಂದರ್ಭದಲ್ಲಿ ವಚನಕಾರ ಬಿ.ಎನ್.ಪಾಟೀಲ ಇಬ್ರಾಹಿಂಪೂರ, ಸಯ್ಯದಕಾಶೀಮ ಹುಸೇನಿ ದಾದಾಪೀರ ಮಗರಬಿ, ನಾಜುಕಮಾ ಮಕ್ತುಮಸಾ ಮರ್ತುರ, ಬಾಬು ಕಮತಗಿ, ಅಶೋಕ ಅಲ್ಲಾಪುರ, ಎಂ.ಎ ಬಂದಾಳ, ಹೆಚ್.ಟಿ ಕುಲಕರ್ಣಿ, ಸೋಮಶೇಖರ ಜೋಗುರ, ವಿ.ಡಿ. ಪಾಟೀಲ, ಎಸ್.ಎನ್.ಕುಂಬಾರ, ಎಸ್.ಎನ್. ಸಂಗಮ, ರವಿ ಗೋಲಾ, ಎಸ್. ಎಂ. ಬಿರಾದಾರ, ಡಾ. ಶರಣಬಸವ ಜೋಗುರ, ಡಾ. ಅರವಿಂದ ಮನಗೂಳಿ, ಸೋಮನಗೌಡ ಬಿರಾದಾರ್, ಚನ್ನಪ್ಪ ಕತ್ತಿ, ಶಿವಕುಮಾರ ಜೋಗುರ, ಮಹಾನಂದ ಬಮ್ಮಣ್ಣಿ, ಸುಜಾತ ಕಿಣಗಿ, ಮುಕ್ತಾಯಕ್ಕ ಕತ್ತಿ, ನೀಲಾಂಬಿಕಾ ಕತ್ತಿ, ನವೀನ ಶೇಳ್ಳಗಿ ಸೇರಿದಂತೆ ಶ್ರೀಮಠದ ಭಕ್ತರು ಇದ್ದರು.
Subscribe to Updates
Get the latest creative news from FooBar about art, design and business.
Related Posts
Add A Comment

