ವಿಜಯಪುರ: ನಗರದ ಸಾರಿಪುತ್ರ ಭೋಧಿಮ್ಮ ಬುದ್ಧ ವಿಹಾರದಲ್ಲಿ ಡಿ. ೬ರಿಂದ ೮ರವರೆಗೆ ಬೆಳಿಗ್ಗೆ ೧೦ ರಿಂದ ರಾತ್ರಿ ೯ ಗಂಟೆವರೆಗೆ ವಿಶ್ವರತ್ನ ಡಾ. ಬಿ.ಆರ್. ಅಂಬೇಡ್ಕರ್ ಅವರ ೬೭ನೇ ಮಹಾಪರಿನಿರ್ವಾಣ ದಿನದ ನಿಮಿತ್ಯ ಅಪರೂಪದ ಛಾಯಾಚಿತ್ರಗಳ ಪ್ರದರ್ಶನ ಮತ್ತು ನುಡಿನಮನ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ ಎಂದು ನಗರದ ಬೌದ್ಧವಿಹಾರ ನಿರ್ಮಾಣ ಸಮಿತಿ ಅಧ್ಯಕ್ಷ ರಾಜಶೇಖರ ಯಡಹಳ್ಳಿ ಹೇಳಿದ್ದಾರೆ.
ನಗರದ ಖಾಸಗಿ ಹೊಟೆಲನಲ್ಲಿ ಶನಿವಾರ ಸುದ್ಧಿಗೋಷ್ಠಿಯನ್ನುದ್ದೇಶಿಸಿ ಅವರು ಮಾತನಾಡಿದರು.
ನಿಪ್ಪಾಣಿಯ ದೀಪಕ ಆಕಾರಾಮ ಮಥಾಳೆ ಮತ್ತು ನಂದಕುಮಾರ ಆಕಾರಾಮ ಮಥಾಳೆ ಅವರು ಸಂಗ್ರಹಿಸಿರುವ ಅಪರೂಪದ ಛಾಯಾಚಿತ್ರಗಳ ಪ್ರದರ್ಶನ ಇದಾಗಿದೆ. ಡಿ.೬ರಂದು ಸಂಜೆ ೬ಗಂಟೆಗೆ ಡಾ.ಅಂಬೇಡ್ಕರ ಅವರ ನುಡಿನಮನ ಕಾರ್ಯಕ್ರಮವೂ ಜರುಗಲಿದೆ. ಕಾರಣ ಜಿಲ್ಲೆಯ ಡಾ. ಬಾಬಾಸಾಹೇಬ ಅಂಬೇಡ್ಕರ ಅನುಯಾಯಿಗಳು, ಪ್ರಗತಿಪರ ಚಿಂತಕರು, ಬುದ್ಧನುಯಾಯಿಗಳು ಈ ಛಾಯಾಚಿತ್ರಗಳ ಪ್ರದರ್ಶನ ಮತ್ತು ನುಡಿನಮನ ಕಾರ್ಯಕ್ರಮಕ್ಕೆ ಅಧಿಕ ಸಂಖ್ಯೆಯಲ್ಲಿ ಆಗಮಿಸಬೇಕೆಂದು ರಾಜಶೇಖರ ಯಡಹಳ್ಳಿ ಕೋರಿದ್ದಾರೆ.
ಬೌದ್ಧವಿಹಾರ ನಿರ್ಮಾಣ ಸಮಿತಿ ಉಪಾಧ್ಯಕ್ಷ ಶಶಿಕಾತ ಹೊನವಾಡಕರ, ಪ್ರಧಾನ ಕಾರ್ಯದರ್ಶಿ ನಾಗರಾಜ ಲಂಬು, ಹಿರಿಯ ಪತ್ರಕರ್ತ ಅನೀಲ ಹೋಸಮನಿ, ಇನಾಮದಾರ, ಹಳ್ಳದಮನಿ, ಬ್ಯಾಳಿ, ರಮೇಶ ಯಡಹಳ್ಳಿ, ಲಿಂಬಾಳ್ಕರ, ರಾಜೇಶ ತೊರವಿ ಸೇರಿದಂತೆ ಬೌದ್ಧ ವಿಹಾರ ನಿರ್ಮಾಣ ಸಮಿತಿ ನಿರ್ದೇಶಕರು ಹಾಗೂ ಸಲಹಾ ಸಮಿತಿ ಸದಸ್ಯರಿದ್ದರು.
Subscribe to Updates
Get the latest creative news from FooBar about art, design and business.
Related Posts
Add A Comment

