ಬಸವನಬಾಗೇವಾಡಿ: ಸಹಜ ನಗೆ ಆರೋಗ್ಯಕರವಾಗುವ ಜೊತೆಗೆ ಮನಸ್ಸಿನ ಒತ್ತಡ ಕಡಿಮೆ ಮಾಡುತ್ತದೆ. ಈ ನಿಟ್ಟಿನಲ್ಲಿ ಪ್ರತಿಯೊಬ್ಬರೂ ಸಹಜ ನಗೆಯನ್ನು ರೂಢಿ ಮಾಡಿಕೊಳ್ಳುವುದು ಉತ್ತಮ ಎಂದು ಕರ್ನಾಟಕ ರಾಜ್ಯೋತ್ಸವ ಪುರಸ್ಕ್ರತ ಮಕ್ಕಳ ಸಾಹಿತಿ ಪ.ಗು.ಸಿದ್ದಾಪೂರ ಹೇಳಿದರು.
ಪಟ್ಟಣದ ಬಸವ ಭವನದಲ್ಲಿ ಕರ್ನಾಟಕ ರಾಜ್ಯ ನಗೆಯೋಗ ಕೂಟಗಳ ಒಕ್ಕೂಟ ಹಾಗೂ ಸ್ಥಳೀಯ ಬಸವೇಶ್ವರ ನಗೆಯೋಗ ಕೂಟದ ಸಹಯೋಗದಲ್ಲಿ ಎರಡು ದಿನಗಳ ಕಾಲ ಹಮ್ಮಿಕೊಂಡಿರುವ ರಾಜ್ಯ ಮಟ್ಟದ ೨೦ ನೇ ನಗೆ ಸಮ್ಮೇಳನದಲ್ಲಿ ಸನ್ಮಾನ ಸ್ವೀಕರಿಸಿದ ನಂತರ ಮಾತನಾಡಿದ ಅವರು, ಹೃದಯದಿಂದ ಬರುವುದೇ ನಿಜವಾದ ನಗೆ. ನಗೆಯಲ್ಲಿ ವ್ಯಂಗ್ಯ ನಗೆ, ಕುಹಕ ನಗೆ, ಅಪಹಾಸ್ಯ ನಗೆ ಉಂಟು. ಇವು ಇನ್ನೊಬ್ಬರಿಗೆ ನೋವು ಉಂಟು ಮಾಡುತ್ತವೆ. ಇಂತಹ ನಗೆ ಯಾರೂ ರೂಢಿಸಿಕೊಳ್ಳದೇ ಆರೋಗ್ಯಕರವಾದ ಸಹಜ ನಗೆ ರೂಢಿಸಿಕೊಂಡರೆ ಆರೋಗ್ಯದಿಂದ ಇರಲು ಸಾಧ್ಯ. ರಾಜರ ಕಾಲದಲ್ಲಿ ಕಲಾವಿದರೊಂದಿಗೆ ಹಾಸ್ಯ ಕಲಾವಿದರಿಗೂ ರಾಜಾಶ್ರಯ ನೀಡುತ್ತಿದ್ದರು ಎಂದ ಅವರು, ನಗೆಯಲ್ಲಿ ಹೊಗೆ ಇರಬಾರದು. ಇದು ಪ್ರತಿಯೊಬ್ಬರಲ್ಲಿ ಹಗೆ ಉಂಟು ಮಾಡುತ್ತದೆ. ಉತ್ತಮ ಆರೋಗ್ಯ ಜೀವನಕ್ಕೆ ನಗೆ ಸಂಜೀವಿನಿ ಇದ್ದಂತೆ ಎಂದರು.
ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ಹಾಸಿಂಪೀರ ಮಾತನಾಡಿ, ಡಿವಿಜಿಯವರು ನಗುವುದು ಸಹಜ ಧರ್ಮ, ನಗಿಸುವುದು ಪರಧರ್ಮ ಎಂದು ಹೇಳುವ ಮೂಲಕ ನಗೆಯ ಮಹತ್ವದ ಕುರಿತು ಹೇಳಿದ್ದನ್ನು ನೋಡುತ್ತೇವೆ. ನಕ್ಕು ನಗಿಸುವದು ದೊಡ್ಡ ಗುಣವನ್ನು ನಾವೆಲ್ಲರೂ ಬೆಳೆಸಿಕೊಳ್ಳಬೇಕು. ನಾಟಕ, ಸಿನಿಮಾಗಳಲ್ಲಿಯೂ ಹಾಸ್ಯ ಸನ್ನಿವೇಶ ಇರದೇ ಹೋದರೆ ಅದು ಯಶಸ್ವಿಯಾಗುವುದಿಲ್ಲ ಎಂಬುವದನ್ನು ನಾವು ನೋಡುತ್ತೇವೆ. ಯಾವುದೇ ಉದ್ಯೋಗ ಮಾಡುತ್ತಿದ್ದರೂ ಅವರ ಜೀವನದಲ್ಲಿ ನಗೆ ತುಂಬಾ ಮಹತ್ವ ಪಾತ್ರ ವಹಿಸುತ್ತದೆ.
ಹಾಸ್ಯ ಸಾಹಿತ್ಯವೂ ಕನ್ನಡ ಸಾಹಿತ್ಯದ ಅವಿಭಾಜ್ಯ ಅಂಗವಾಗಿದೆ. ಹಾಸ್ಯ ಸಾಹಿತ್ಯವು ಮನಸ್ಸಿಗೆ ಉಲ್ಲಾಸ ನೀಡುತ್ತದೆ. ನಗೆಗೆ ಯಾವುದೇ ಜಾತಿ, ಬೇಧ-ಭಾವ, ತಾರತಮ್ಯವಿಲ್ಲ ಎಂದರು.
ಶಿಕ್ಷಕ, ಸಾಹಿತಿ ಅಶೋಕ ಹಂಚಲಿ ಮಾತನಾಡಿದರು.
ಸಾನಿಧ್ಯ ವಹಿಸಿದ್ದ ಸಿದ್ದಲಿಂಗ ಸ್ವಾಮೀಜಿ, ಸಮ್ಮೇಳನ ಉದ್ಘಾಟಿಸಿದ ರಾಜ್ಯ ಸಹಕಾರ ಮಹಾಮಂಡಳ ನಿರ್ದೇಶಕ ಈರಣ್ಣ ಪಟ್ಟಣಶೆಟ್ಟಿ ಮಾತನಾಡಿದರು.
ಅಧ್ಯಕ್ಷತೆಯನ್ನು ರಾಜ್ಯ ನಗೆಯೋಗಕೂಟದ ಅಧ್ಯಕ್ಷ ಪ್ರೊ.ಪಿ.ಸದಾಶಿವ ವಹಿಸಿದ್ದರು.
ವೇದಿಕೆಯಲ್ಲಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಸುರೇಶ ಹಾರಿವಾಳ, ವಿಮಾ ಸಹಕಾರ ಮಹಾಮಂಡಳ ಅಧ್ಯಕ್ಷ ಶಿವನಗೌಡ ಬಿರಾದಾರ, ರಾಜ್ಯ ನಗೆಯೋಗ ಕೂಟಗಳ ಒಕ್ಕೂಟದ ಕಾರ್ಯದರ್ಶಿ ಬಿ.ಎಸ್.ರಾಜೇಶ್ವರ, ಪಾರ್ವತಿ ಶೆಟ್ಟಿ, ಡಾ.ದೇವಾತ ಶ್ರೀನಿವಾಸ, ಎಪಿಎಂಸಿ ಮಾಜಿ ಅಧ್ಯಕ್ಷ ಶೇಖರ ಗೊಳಸಂಗಿ, ಬಸವೇಶ್ವರ ದೇವಾಲಯ ಅಂತರಾಷ್ಟ್ರೀಯ ಶಾಲೆಯ ಮೇಲು ಉಸ್ತುವಾರಿ ಸಮಿತಿ ಅಧ್ಯಕ್ಷ ಭರತ ಅಗರವಾಲ, ಪಂಚಮಸಾಲಿ ಸಮಾಜ ತಾಲೂಕಾಧ್ಯಕ್ಷ ಬಸವರಾಜ ಗೊಳಸಂಗಿ, ಮುಖಂಡರಾದ ಬಸವರಾಜ ಕೋಟಿ, ರವಿ ಚಿಕ್ಕೊಂಡ, ಕಸಾಪ ತಾಲೂಕಾಧ್ಯಕ್ಷ ಶಿವಾನಂದ ಡೋಣೂರ, ವರ್ತಕ ವಿಠ್ಠಲ ಪತ್ತಾರ, ಬಸವೇಶ್ವರ ನಗೆಯೋಗ ಕೂಟ ಅಧ್ಯಕ್ಷ ಬಸವರಾಜ ಮೇಟಿ, ಸರ್ಕಾರಿ ನೌಕರರ ಸಂಘದ ತಾಲೂಕಾಧ್ಯಕ್ಷ ಶಿವಾನಂದ ಮಂಗಾನವರ, ಕೆ.ಜಿ.ಮಲ್ಲಿಕಾರ್ಜುನ, ಪರಮಶಿವಯ್ಯ, ಆರ್.ಆರ್. ಕಲ್ಲೂರ, ನಳಿನಾಕ್ಷಿ, ಸುಮಾ ಮೂಲಿಮನಿ, ವೀಣಾ ಪೂಜಾರಿ, ಮಹಾದೇವಿ ಬಿರಾದಾರ, ಪಿ.ಜಿ.ಕುಲಕರ್ಣಿ ಇತರರು ಇದ್ದರು.
Subscribe to Updates
Get the latest creative news from FooBar about art, design and business.
Related Posts
Add A Comment

