ಮೋರಟಗಿ ರೇವಣಸಿದ್ಧೇಶ್ವರ ಸಿದ್ಧರಾಮೇಶ್ವರ ಜಾತ್ರಾ ಮಹೋತ್ಸವ ಉದ್ಘಾಟನೆ
ಮೋರಟಗಿ: ಅಕ್ಷರ ಜ್ಞಾನದ ಜೊತೆಯಲ್ಲಿ ಭಾರತೀಯ ಸಂಸ್ಕೃತಿ ಸಂಸ್ಕಾರ ಮುಖ್ಯ ಎಂದು ಹೇಳಿದರು.
ಸ್ಥಳೀಯ ರೇವಣಸಿದ್ಧೇಶ್ವರ ಸಿದ್ಧರಾಮೇಶ್ವರ ಜಾತ್ರಾ ಮಹೋತ್ಸವದ ಕಾರ್ಯಕ್ರಮದಲ್ಲಿ ಸಸಿಗೆ ನೀರು ಎರೆಯುವ ಮೂಲಕ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅವರು, ಬೆಳೆಯುವ ಮಕ್ಕಳ ಭವಿಷ್ಯ ಬರೆಯುವುದು ಪಾಲಕರ ಕರ್ತವ್ಯ. ಎಂಎಲ್ಎ, ಎಂಪಿ, ಡಿಸಿ, ಡಾಕ್ಪರ, ಇಂಜನೀಯರ ಹೀಗೆ ಹಲವು ಕನಸುಗಳನ್ನು ಮಕ್ಕಳ ಮೂಲಕ ಬೆಳಸುವುದು ತಪ್ಪಲ್ಲ. ಜೊತೆಯಲ್ಲಿ ಸಂಸ್ಕಾರ ಕಲಿಸುವುದು ಅಷ್ಠೆ ಮುಖ್ಯ. ತಂದೆ ತಾಯಿ ಅಕ್ಕ ತಂಗಿ ಅಣ್ಣ ತಮ್ಮ ಬಂಧು ಬಳಗ ಗಂಡ ಹೆಂಡತಿ ಎಂಬ ಅನೋನ್ಯತೆಯ ಮಹತ್ವ, ದೇವಸ್ಥಾನ, ಭಕ್ತಿ, ಸಂಪ್ರದಾಯ, ಆಚಾರ, ಪದ್ಧತಿ ಮುಂದುವರೆಸುವ ಜ್ಞಾನ ತುಂಬುವ ಕರ್ತವ್ಯ ಹಿರಿಯರದ್ದು ಎಂದ ಅವರು ನಾನು ಶಾಸಕನಾಗಲು ತಾವುಗಳು ಕಾರಣ. ನಿಮ್ಮಿಂದ ನಾನು. ನನ್ನಿಂದ ಮುಂಬರುವ ದಿನ ಮಾನಗಳಲ್ಲಿ ಗ್ರಾಮದ ಅಭಿವೃದ್ದಿಯ ಕೆಲಸಗಳನ್ನು ಪ್ರಾಮಾಣಿಕವಾಗಿ ಮಾಡುವೆ ಎಂದು ಹೇಳಿದರು.
ಮೋರಟಗಿ ಗ್ರಾಮದ ಬಹುದಿನಗಳ ಕನಸು ಶ್ರೀ ಸಿದ್ಧರಾಮೇಶ್ವರ ಕಲ್ಯಾಣ ಮಂಟಪದ ಅಡಿಗಲ್ಲು ಸಮಾರಂಭ ಅತಿ ಶೀಘ್ರದಲ್ಲಿ ನೆರವೇರಿಸಿ, ಸರಕಾರದ ಅನುದಾನ ಕಲ್ಪಿಸುವ ದಿಶೆಯಲ್ಲಿ ಹೆಜ್ಜೆ ಇಟ್ಟಿರುವೆ. ಆದಷ್ಟು ಬೇಗ ಕಲ್ಯಾಣ ಮಂಟಪದ ಕೆಲಸ ಪ್ರಾರಂಭಕ್ಕೆ ಚಾಲನೆ ನೀಡುವೆ ಎಂದರು.
ಕಡಕೋಳದ ರುದ್ರಮುನಿ ಶಿವಾಚಾರ್ಯರು, ಹೂವಿನಳ್ಳಿಯ ಗುರುಲಿಂಗಯ್ಯ ಸ್ವಾಮಿ, ಹಿರಿಯರಾದ ನಿಂಗನಗೌಡ ಪಾಟೀಲ, ಎನ್.ಆರ್.ತಿವಾರಿ, ಅರವಿಂದ ಹಂಗರಗಿ, ರವಿಕಾಂತ ನಡುವಿನಕೆರಿ, ಇಸೂಫ್ ಮುಲ್ಲಾ, ಚನ್ನಬಸು ದುದ್ದಗಿ, ಭೂತಾಳಿ ವಸ್ತಾರಿ, ಬಂದೇನಮಾಜ ಕಣ್ಣಿ, ಈರಣ್ಣ ವಿಶ್ವಕರ್ಮ, ಅನೀಲಗೌಡ ಪಾಟೀಲ, ಶ್ರೀಶೈಲ ಮಂದೇವಾಲಿ, ಹರೀಶ ಗಡಗಿ, ಶರಣಪ್ಪ ಅಣಬಸ್ಟಿ, ಸೇರಿದಂತೆ ಹಲವರು ಇದ್ದರು.

