ಮುದ್ದೇಬಿಹಾಳ: ಬೆಳೆ ಉತ್ಪಾದನಾ ತಂತ್ರಜ್ಞಾನಗಳ ಜೊತೆ ಪೀಡೆ, ಪೋಷಕಾಂಶ ನಿರ್ವಹಣೆಯಲ್ಲಿ ವೈಜ್ಞಾನಿಕತೆಯನ್ನು ಅಳವಡಿಸಿ ಕೈಗೊಳ್ಳಲಾಗುವ ಬೇಸಾಯ ಪದ್ಧತಿಗಳಿಂದ ಅಧಿಕ ಇಳುವರಿ ಪಡೆಯುವ ಮೂಲಕ ಆದಾಯ ಹೆಚ್ಚಿಸಿಕೊಳ್ಳಲು ರೈತರಿಗೆ ಸಾಧ್ಯವಾಗಲಿದೆ ಎಂದು ಪರಪ್ಪ ಮಾಸ್ತರ ಸಾವಯವ ಕೃಷಿ ವಿದ್ಯಾಪೀಠದ ಅಧ್ಯಕ್ಷ ಅರವಿಂದ ಕೊಪ್ಪ ಹೇಳಿದರು.
ತಾಲೂಕಿನ ಬಸರಕೋಡ ಗ್ರಾಮದ ಶ್ರೀಮಂತ ಶ್ರೀ ಶ್ರೀಶೈಲ ಸೂಳಿಭಾವಿಯವರ ತೋಟದಲ್ಲಿ ಯುನೈಟೆಡ್ ಫಾಸ್ಫರಸ್ ಲಿಮಿಟೆಡ್ ಕಂಪನಿಯವರು ಏರ್ಪಡಿಸಿದ್ದ ಮೆಕ್ಕೆಜೋಳ ಬೆಳೆ ಪ್ರಾತ್ಯಕ್ಷಿಕೆಯನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಮನುಷ್ಯನ ಆರೋಗ್ಯ ದೃಷ್ಠಿಯಿಂದಲೂ ಉತ್ತಮ ಆಹಾರ ಉತ್ಪನ್ನವಾಗಿ ಕಂಡು ಬರುವ ಮೆಕ್ಕೆಜೋಳ ಬೆಳೆ ಪ್ರದೇಶ ವಿಸ್ತರಣೆ ಇರುವ ಅವಕಾಶವನ್ನು ರೈತರು ಸದುಪಯೋಗ ಪಡಿಸಿಕೊಳ್ಳಬೇಕು. ಪಶು ಸಂಗೋಪನೆಯಲ್ಲಿ ಮುಖ್ಯ ಆಹಾರವಾಗಿ ಪರಿಗಣಿಸಲಾಗುತ್ತಿರುವ ಮೆಕ್ಕೆಜೋಳ ಬೆಳಯಲ್ಲಿ ಇಳುವರಿ ಅಧಿಕಗೊಳಿಸುವ ತಾಂತ್ರಿಕತೆಯ ನೆರವು ಪಡೆಯಲು ರೈತರು ಮುಂದಾಗಬೇಕೆಂದು ಕರೆ ನೀಡಿದರು.
ಅಧ್ಯಕ್ಷತೆ ವಹಿಸಿದ್ದ ಬಸರಕೋಡ ಮಂಡಳ ಪಂಚಾಯತ ಮಾಜಿ ಪ್ರಧಾನ ಶ್ರೀಶೈಲ ಸೂಳಿಭಾವಿ ಮಾತನಾಡಿದರು.
ಅತಿಥಿ ಉಪನ್ಯಾಸ ನೀಡಿದ ಯುಪಿಎಲ್ ಕಂಪನಿ ನೋಡಲ ಅಧಿಕಾರಿ ಮಂಜುನಾಥ ಮಾತನಾಡಿದರು.
ಕಂಪನಿಯ ತಾಲೂಕು ವಿತರಕ ಪದಕಿ, ದಾಸೋಹಿ ಸಮಗ್ರ ಕೃಷಿಕರ ಆತ್ಮ ಸ್ವಸಹಾಯ ಗುಂಪಿನ ಅಧ್ಯಕ್ಷ ಮುತ್ತು ಮೆಣಸಿನಕಾಯಿ, ಪ್ರಗತಿಪರ ರೈತ ಅಶೋಕ ಬಿರಾದಾರ ಉಪಸ್ಥಿತರಿದ್ದರು. ಅಂಬರೀಶ ಮೆಣಸಿನಕಾಯಿ ಸ್ವಾಗತಿಸಿ ಪ್ರಾಸ್ತಾವಿಕ ಮಾತುಗಳನ್ನಾಡಿದರು. ಚನ್ನಬಸಪ್ಪ ಯಾಳವಾರ ಕಾರ್ಯಕ್ರಮ ನಿರೂಪಿಸಿದರು. ಕೊನೆಯಲ್ಲಿ ಪ್ರಭು ಸೂಳಿಭಾವಿ ವಂದಿಸಿದರು.
ಇದೇ ಸಂದರ್ಭದಲ್ಲಿ ಆಯ್ಕೆ ಮಾಡಲಾಗಿದ್ದ ಗುಂಟೆ ಜಾಗದಲ್ಲಿ ಬೆಳೆ ಕಟಾವು ಮಾಡಿ ನೆರೆದ ರೈತರ ಸಮ್ಮುಖದಲ್ಲಿ ರಾಶಿ ಮಾಡಿ ಇಳುವರಿ ಲೆಕ್ಕವನ್ನು ಪ್ರಾತ್ಯಕ್ಷಿಕೆ ಮೂಲಕ ಪ್ರದರ್ಶಿಸಲಾಯಿತು.
Subscribe to Updates
Get the latest creative news from FooBar about art, design and business.
Related Posts
Add A Comment

