ಸಿಂದಗಿ: ಅಧಿಕಾರವಿಲ್ಲದೇ ಸಮಾಜ ಸೇವೆ ಮಾಡುತ್ತಿರುವ ಏಕೈಕ ಸಂಸ್ಥೆ ಎಂದರೆ ಅದು ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಎಂದು ಶಾಸಕ ಅಶೋಕ ಮನಗೂಳಿ ಹೇಳಿದರು.
ಪಟ್ಟಣದ ಶ್ರೀ ಕ್ಷೇತ್ರ ಧರ್ಮಸ್ಥಳದ ಗ್ರಾಮಾಭಿವೃದ್ಧಿ ಯೋಜನೆ ಬಿ.ಸಿ ಟ್ರಸ್ಟ್ (ರಿ) ಸಿಂದಗಿ ಘಟಕದ ಕಛೇರಿಯಲ್ಲಿ ಹಮ್ಮಿಕೊಂಡ ಆರೋಗ್ಯ ರಕ್ಷಾ ಕಾರ್ಯಕ್ರಮದಡಿಯಲ್ಲಿ ಚೆಕ್ ವಿತರಣೆ ಹಾಗೂ ಅಂಗವಿಕಲರಿಗೆ ಸಲಕರಣೆಯ ಜನಮಂಗಲ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಅವರು, ಮಹಿಳೆಯರನ್ನು ಸಬಲೀಕರಣಗೊಳಿಸುವ ನಿಟ್ಟಿನಲ್ಲಿ ಈ ಸಂಸ್ಥೆಯು ಕಾರ್ಯನಿರ್ವಹಿಸುತ್ತಿರುವುದು ಶ್ಲಾಘನೀಯ. ಮಹಿಳೆಯರನ್ನು ಆರ್ಥಿಕವಾಗಿ, ಸಮಾಜಿಕವಾಗಿ, ಶೈಕ್ಷಣಿಕವಾಗಿ ಹಾಗೂ ರಾಜಕೀಯವಾಗಿ ಅರಿವು ಮೂಡಿಸುವ ಕಾರ್ಯ ಮಾಡುತ್ತಿದೆ ಎಂದರು.
ಈ ವೇಳೆ ಕ್ಷೇತ್ರ ಯೋಜನಾಧಿಕಾರಿ ಗಿರೀಶಕುಮಾರ ಪ್ರಾಸ್ತಾವಿಕವಾಗಿ ಮಾತನಾಡಿ, ಯೋಜನೆಯ ಬ್ಯಾಂಕಿನ ಬಿ.ಸಿ ಸ್ವ-ಸಹಾಯ ಸಂಘದ ಮಹಿಳೆಯರಿಗೆ ಪ್ರಗತಿನಿಧಿ ನೀಡುವ ಮೂಲಕ ಸಾಮಾನ್ಯ ಮಹಿಳೆಯರನ್ನು ಹಣಕಾಸಿನ/ಬ್ಯಾಂಕಿನ ವ್ಯವಹಾರದಲ್ಲಿ ತೊಡಗಿಕೊಳ್ಳುವಂತೆ ಮಾಡಿತು. ಹಾಗೂ ಯೋಜನೆಯ ಕಾರ್ಯಕ್ರಮಗಳಾದ ಆರೋಗ್ಯ ವಿಮೆ, ಸಾಲದ ಭದ್ರತೆಯ ಪ್ರಗತಿ ರಕ್ಷಾ ಕವಚ, ಅಂಗವಿಕಲರಿಗೆ ಸಲಕರಣೆಯ ಜನಮಂಗಲ ಕಾರ್ಯಕ್ರಮ, ಸಂಘದ ಪಾಲುದಾರ ಬಂಧುಗಳ ಮಕ್ಕಳಿಗೆ ತಾಂತ್ರಿಕ ಶಿಕ್ಷಣಕ್ಕಾಗಿ ಸುಜ್ಞಾನನಿಧಿ ಎಂಬ ಸ್ಕಾಲರ್ಶಿಪ್, ಅತೀ ಕಡು ಬಡವ ನಿರಾಶ್ರಿತರಿಗೆ ಮನೆ, ಹಾಗೂ ನಿರ್ಗತಿಕರಿಗೆ ಮಾಸಿಕ ವೇತನ, ಮಾಸಾಶನ ಹಾಗೂ ಸರ್ಕಾರಿ ಅಥವಾ ಅನುದಾನಿತ ಶಾಲೆಗಳಲ್ಲಿ ಶಿಕ್ಷಕರ ಕೊರತೆಯನ್ನು ಸರಿದುಗಿಸುವ ಜ್ಞಾನದೀಪ ಶಿಕ್ಷರನ್ನು ಒದಗಿಸುವುದು ಸೌಲಭ್ಯವನ್ನು ಒದಗಿಸುತ್ತದೆ ಎಂದರು.
ಕಾರ್ಯಕ್ರಮದಲ್ಲಿ ಕಛೇರಿ ಆಡಳಿತ ಸಹಾಯಕ ಪ್ರಬಂಧಕ ದಾನೇಶ್, ಕಛೇರಿ ಸಹಾಯಕ ಶಿವಾನಂದ ಕಲ್ಲೋಳ್ಳಿ, ಶಿವಶಂಕರ ಹಡಪದ, ಪ್ರಕಾಶ ಸಜ್ಜನ, ಬಸವರಾಜ, ಮರೆಪ್ಪ ಸಿಂದಗಿ ಹಾಗೂ ಆರೋಗ್ಯ ರಕ್ಷಾ ಫಲಾನುಭವಿಗಳು ಸೇರಿದಂತೆ ಸಂಘದ ಸದಸ್ಯರು ಭಾಗವಹಿಸಿದ್ದರು.
Subscribe to Updates
Get the latest creative news from FooBar about art, design and business.
Related Posts
Add A Comment

