ವಿಜಯಪುರ: ಬಾಲಾಜಿ ಸಕ್ಕರೆ ಕಾರ್ಖಾನೆಯವರು ಪೂರ್ಣ ಪ್ರಮಾಣದ ಕಬ್ಬನ್ನು ಸಾಗಾಣೆ ಮಾಡಲು ಆದೇಶ ಮಾಡಬೇಕೆಂದು
ಆಹಾರ ನಾಗರಿಕ ಸರಬರಾಜು ಹಾಗೂ ಗ್ರಾಹಕರ ವ್ಯವಹಾರಗಳ ಇಲಾಖೆ ಉಪ ನಿರ್ದೇಶಕರಿಗೆ ಜಿಲ್ಲೆಯ ಬಸವನ ಬಾಗೇವಾಡಿ ತಾಲೂಕಿನ ಕಾನ್ನಾಳ ಗ್ರಾಮದ ಕಬ್ಬು ಬೆಳೆಗಾರರು ಸೋಮವಾರ ಮನವಿ ಮಾಡಿದ್ದಾರೆ.
ಈ ಸಂದರ್ಭದಲ್ಲಿ ರೈತಸಂಘದ ಜಿಲ್ಲಾ ಪ್ರ.ಕಾರ್ಯದರ್ಶಿ ಅರವಿಂದ ಕುಲಕರ್ಣಿ, ರಾಜಶೇಖರ ಸಜ್ಜನ, ಸಂದರ್ಭದಲ್ಲಿ
ಸಂಗಪ್ಪ ಸಜ್ಜನ ಮೊದಲಾದವರು ಮಾತನಾಡಿ, ಕಾನ್ನಾಳ ಗ್ರಾಮದಲ್ಲಿ ಈ ವರ್ಷವೂ ಕೂಡ ಅಂದಾಜು 150 ರಿಂದ 200 ಎಕರೆ ಪ್ರದೇಶದಲ್ಲಿ ಕಬ್ಬು ಬೆಳೆಯಲಾಗಿದೆ. ಪ್ರತಿವರ್ಷವೂ ಕೂಡ ಹೆಚ್ಚಿನ ಪ್ರಮಾಣದಲ್ಲಿ ಕಬ್ಬು ಬೆಳೆದು ಮುದ್ದೇಬಿಹಾಳದ ಬಾಲಾಜಿ ಸಕ್ಕರೆ ಕಾರ್ಖಾನೆಗೆ ಸಾಗಾಣೆ ಮಾಡುತ್ತೇವೆ. ಈ ಭಾರಿ ಭೀಕರ ಬರಗಾಲದ ನಡುವೆಯು ಕೂಡ ಕಬ್ಬು ಬೆಳೆಯಲಾಗಿದೆ. ಆದರೆ ಈ ವರ್ಷ ಕಾರ್ಖಾನೆಯವರು ಎತ್ತರ ಮಟ್ಟದಲ್ಲಿ ಬೆಳೆದ ಹಾಗೂ ದಪ್ಪಗಿರುವ ಕಬ್ಬನ್ನು ಮಾತ್ರ ಕಾರ್ಖಾನೆಗೆ ತೆಗೆದುಕೊಂಡು ಹೋಗುತ್ತಿದ್ದು ಸ್ವಲ್ಪ ಪ್ರಮಾಣದಲ್ಲಿ ಎತ್ತರದಲ್ಲಿ ಕಡಿಮೆ ಇದ್ದ ಕಬ್ಬನ್ನು ಸಾಗಾಣೆಮಾಡಲು ಹಿಂದೇಟು ಹಾಕುತ್ತಿದ್ದಾರೆ. ಈ ಬಾರಿ ಸಕಾಲಕ್ಕೆ ಮಳೆಯಾಗದೆ ಇರುವುದರಿಂದ ಕಬ್ಬು ಬೆಳೆವಣಿಗೆಯಲ್ಲಿ ಸ್ವಲ್ಪ ಕುಂಠಿತವಾಗಿದೆ. ಇದನ್ನೇ ನೆಪವಾಗಿಟ್ಟುಕೊಂಡು ಕಾರ್ಖಾನೆಯ ಸೂಪರ್ ವೈಸರ್ಗಳು ನೀವು ಸರಿಯಾಗಿ ನೀರು ಉಣಿಸಿ ಎಂದು ನಮಗೆ ಸಲಹೆ ನೀಡುತ್ತಾರೆ. ಮಳೆ ಇಲ್ಲದಿದ್ದರೆ ನೀರು ಉಣಿಸುವುದಾದರೂ ಎಲ್ಲಿಂದ? ಈ ರೀತಿ ಕಾರ್ಖಾನೆಯವರು ಕಬ್ಬು ಬೆಳೆದ ರೈತರಿಗೆ ದಿಕ್ಕು ತಪ್ಪಿಸುತ್ತಿದ್ದಾರೆ. ಮೊದಲೇ ಬರಗಾಲದಿಂದ ತತ್ತರಿಸಿದ ಕಬ್ಬು ಬೆಳೆದ ರೈತರು ಸಂಕಷ್ಟ ಎದುರಿಸುವಂತಾಗಿದೆ. ಇಂತಹ ಗಂಭೀರ ಪರಿಸ್ಥಿತಿಯಲ್ಲಿ ಬಾಲಾಜಿ ಸಕ್ಕರೆ ಕಾರ್ಖಾನೆಯವರು ಕಬ್ಬು ಬೆಳೆದ ರೈತರಿಗೆ ಅನ್ಯಾಯ ಮಾಡುತ್ತಿದ್ದಾರೆ. ಉಳಿದ ಕಬ್ಬನ್ನು ಕೂಡ ಸಾಗಾಣೆ ಮಾಡಲು ಕಟ್ಟುನಿಟ್ಟಿನ ಆದೇಶ ಮಾಡಬೇಕು.ಒಂದು ವೇಳೆ ಸಾಧ್ಯವಾಗದಿದ್ದರೆ ಕಾರ್ಖಾನೆ ವತಿಯಿಂದ ಕಬ್ಬು ಕಟಾವು ಮಶೀನನ್ನು ರೈತರಿಗೆ ಒದಗಿಸಿಕೊಡಬೇಕೆಂದು ಆಗ್ರಹಿಸಿದ್ದಾರೆ.
ಸೋಮೇಶ ನಾಗರೆಡ್ಡಿ, ಶಿವನಗೌಡ ಮೇಟಿ, ಸತೀಶ ಸಜ್ಜನ ಸೇರಿದಂತೆ ಅನೇಕರಿದ್ದರು.
Subscribe to Updates
Get the latest creative news from FooBar about art, design and business.
Related Posts
Add A Comment

