ಬಸವನಬಾಗೇವಾಡಿ: ದೇವರು ನಮಗೆ ಚೆಂದವಾದ ಬದುಕು ನೀಡಿದ್ದಾನೆ. ಈ ಚೆಂದವಾದ ಬದುಕಿನಲ್ಲಿ ಯಾರು ದಾನ ಮಾಡುತ್ತಾರೋ ಅವರು ಅಳಿದು ಹೋದರೂ ಅವರ ಬದುಕು ಸಮಾಜದಲ್ಲಿ ಅಜರಾಮರವಾಗಿರುತ್ತದೆ. ಇದುವೇ ದಾನದ ಶ್ರೇಷ್ಠತೆ ಎಂದು ತಾಳಿಕೋಟಿ ಖಾಸ್ಗತೇಶ್ವರ ಮಠದ ಸಿದ್ದಲಿಂಗ ದೇವರು ಹೇಳಿದರು.
ಪಟ್ಟಣದ ವಿರಕ್ತಮಠದ ಶಿವಾನುಭವ ಮಂಟಪದಲ್ಲಿ ನಂದಿ ಸಾಹಿತ್ಯ ವೇದಿಕೆಯು ಭಾನುವಾರ ಹಮ್ಮಿಕೊಂಡಿದ್ದ ಸ್ಥಳೀಯ ಐತಿಹಾಸಿಕ ಬಸವೇಶ್ವರ ದೇವಾಲಯ ಜೀಣೋದ್ಧಾರಕ್ಕೆ ೬೫ ವರ್ಷಗಳ ಹಿಂದೆ ದೇಣಿಗೆ ನೀಡಿದ ಮಹಾದಾನಿಗಳ ಸ್ಮರಣೆ ಹಾಗೂ ಅವರ ವಂಶಜರಿಗೆ ಸನ್ಮಾನ ಸಮಾರಂಭದ ಸಾನಿಧ್ಯ ವಹಿಸಿ ಮಾತನಾಡಿದ ಅವರು, ತಮ್ಮೊಳಗೆ ಇರುವ ಅಂಶವನ್ನು ಸಮಾಜಕ್ಕೆ ನೀಡುವವರು ನಿಜವಾಗಿ ದೊಡ್ಡವರು. ಪ್ರತಿಯೊಬ್ಬರಿಗೆ ಸಮಾಜಕ್ಕೆ ಏನಾದರೂ ಕೊಡಬೇಕೆಂಬ ಭಾವ ಇರಬೇಕು. ಕೊಡುವ ಭಕ್ತಿ ದೊಡ್ಡದ್ದು. ಸಮಾಜಕ್ಕೆ ದಾನ ನೀಡಿರುವ ಅನೇಕ ದಾನಿಗಳ ಹೆಸರು ನಾಡಿನಲ್ಲಿ ಅಜರಾಮರವಾಗಿವೆ. ೬೫ ವರ್ಷಗಳ ಹಿಂದೆ ಬಸವೇಶ್ವರ ದೇವಾಲಯಕ್ಕೆ ದಾನ ನೀಡಿದ ಮಹನೀಯರ ವಂಶಜರನ್ನು ಆಹ್ವಾನಿಸಿ ಅವರಿಗೆ ಗೌರವ ಸಲ್ಲಿಸುವ ಕಾರ್ಯ ಮಾಡುತ್ತಿರುವ ನಂದಿ ಸಾಹಿತ್ಯ ವೇದಿಕೆಯ ಕಾರ್ಯ ಸಾರ್ಥಕತೆಯಿಂದ ಕೂಡಿದೆ. ಸಮಾಜದಲ್ಲಿ ಎಲ್ಲರೂ ಮನಸ್ಸುಗಳನ್ನು ಜೋಡಿಸುವ ಕಾರ್ಯ ಮಾಡಬೇಕಿದೆ. ಈ ಸಾಹಿತ್ಯ ವೇದಿಕೆಯಿಂದ ನಿರಂತರವಾಗಿ ಸಾಮಾಜಿಕ ಕಾರ್ಯಗಳು ನಡೆಯುವಂತಾಗಲಿ ಎಂದರು.
ಸಮಾರಂಭ ಉದ್ಘಾಟಿಸಿದ ಸಾಹಿತಿ ಶಂಕರ ಬೈಚಬಾಳ ಮಾತನಾಡಿದರು.
ಅಧ್ಯಕ್ಷತೆ ವಹಿಸಿದ್ದ ಪಿಎಲ್ಡಿ ಬ್ಯಾಂಕಿನ ಅಧ್ಯಕ್ಷ ಈರಣ್ಣ ಪಟ್ಟಣಶೆಟ್ಟಿ ಮಾತನಾಡಿದರು.
ನಂದಿ ಸಾಹಿತ್ಯ ವೇದಿಕೆಯ ಅಧ್ಯಕ್ಷ ಮಹಾಂತೇಶ ಸಂಗಮ ಮಾತನಾಡಿ, ವೇದಿಕೆಯ ಎಲ್ಲ ಪದಾಧಿಕಾರಿಗಳ ಸಹಕಾರದೊಂದಿಗೆ ಈ ಸಮಾರಂಭ ಆಯೋಜಿಸಲಾಗಿದೆ ಎಂದರು.
ಸಾನಿಧ್ಯ ವಹಿಸಿದ್ದ ವಿರಕ್ತಮಠದ ಸಿದ್ದಲಿಂಗ ಸ್ವಾಮೀಜಿ, ಸನ್ಮಾನ ಸ್ವೀಕರಿಸಿದ ಪರವಾಗಿ ಡಾ.ರಾಜೇಂದ್ರ ಬಸರೀಗಿಡದ ಮಾತನಾಡಿದರು.
ವೇದಿಕೆಯಲ್ಲಿ ವೇದಿಕೆಯ ಸದಸ್ಯ ಪಿ.ಎ.ಓಲೇಕಾರ ಇದ್ದರು. ಬಸವೇಶ್ವರ ದೇವಾಲಯ ಜೀರ್ಣೋದ್ಧಾರಕ್ಕೆ ದೇಣಿಗೆ ನೀಡಿದ ಮಹನೀಯರ ವಂಶಜರಾದ ಲಿಂ.ಮಲ್ಲಪ್ಪ ಸಿಂಹಾಸನ ಅವರ ಮರಿ ಮೊಮ್ಮಗ ಪರುತಪ್ಪ ಸಿಂಹಾಸನ, ಜೋಳದರಾಶಿ ದೊಡ್ಡನಗೌಡರ ತಮ್ಮನ ಮಗ ಜೋಳದರಾಶಿ ಪಂಪನಗೌಡರ, ಬಸರೀಗಿಡದ ವೀರಪ್ಪನವರ ಮೊಮ್ಮಗ ಡಾ.ರಾಜೇಂದ್ರ ಬಸರೀಗಿಡದ, ಬ್ಯಾಕೋಡರವರ ಮರಿ ಮೊಮ್ಮಗ ಶಶಾಂಕ ಬ್ಯಾಕೋಡ, ಗುರುಬಸಯ್ಯ ವಸದ ಅವರ ಮಗ ಶಿವಾನಂದ ವಸದ ಅವರಿಗೆ ವೇದಿಕೆಯಿಂದ ಸನ್ಮಾನಿಸಲಾಯಿತು.
ಗೀತಾ ಘೋರ್ಪಡೆ ಪ್ರಾರ್ಥಿಸಿದರು. ಶಿವು ಮಡಿಕೇಶ್ವರ ಸ್ವಾಗತಿಸಿದರು. ಡಾ.ಮುರಗೇಶ ಸಂಗಮ ನಿರೂಪಿಸಿದರು. ಪಿ.ಜಿ.ಕುಲಕರ್ಣಿ ವಂದಿಸಿದರು.
Subscribe to Updates
Get the latest creative news from FooBar about art, design and business.
ದಾನ ದಾನಿಗಳನ್ನು ಅಜರಾಮರನನ್ನಾಗಿಸುತ್ತದೆ :ಸಿದ್ದಲಿಂಗ ಶ್ರೀ
Related Posts
Add A Comment

