ತಾಳಿಕೋಟಿ: ಭಾರತದ ಎಲ್ಲ ಪ್ರಜೆಗಳಿಗೆ ಸಾಮಾಜಿಕ ಸಮಾನತೆ ಆರ್ಥಿಕ ಭದ್ರತೆ ಮತ್ತು ರಾಜಕೀಯ ಸ್ವಾತಂತ್ರ್ಯವನ್ನು ಕೊಡುವ ಉದ್ದೇಶದೊಂದಿಗೆ ಡಾ.ಬಾಬಾ ಸಾಹೇಬ್ ಅಂಬೇಡ್ಕರ್ ಅವರ ಅಂತಃಕರಣದಿಂದ ರೂಪಿತವಾದ ಭಾರತದ ಸಂವಿಧಾನ ಇಡೀ ವಿಶ್ವಕ್ಕೆ ಮಾದರಿಯಾಗಿದೆ ಎಂದು ದಲಿತ ಯುವ ಮುಖಂಡ ಜೈ ಭೀಮ ಮುತ್ತಗಿ ಹೇಳಿದರು.
ರವಿವಾರ ಪಟ್ಟಣದ ಅಂಬೇಡ್ಕರ್ ವೃತ್ತದಲ್ಲಿರುವ ಉದ್ಯಾನವನದಲ್ಲಿ ಸಮಾಜ ಕಲ್ಯಾಣ ಇಲಾಖೆ. ತಾಲೂಕ ಆಡಳಿತ ಹಾಗೂ ಪುರಸಭೆಯ ಸಹಯೋಗದಲ್ಲಿ ಸಂವಿಧಾನ ದಿನದ ಅಂಗವಾಗಿ ಹಮ್ಮಿಕೊಂಡ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು. ಸಂವಿಧಾನ ನಮಗೆ ಸರಳವಾಗಿ ಸಿಕ್ಕಿದ್ದಲ್ಲ ಇದರ ಹಿಂದೆ ಬಾಬಾಸಾಹೇಬರ ತ್ಯಾಗ ಮತ್ತು ಪರಿಶ್ರಮ ಅಡಗಿದೆ ಬಾಬಾ ಸಾಹೇಬರು ಯಾವ ಕಾರಣಕ್ಕೂ ಸಂವಿಧಾನ ರಚನಾ ಸಮಿತಿಯಲ್ಲಿ ಬರಬಾರದೆಂದು ಕೆಲವು ಪಟ್ಟ ಭದ್ರ ಹಿತಾಸಕ್ತಿಗಳು ವ್ಯವಸ್ಥಿತವಾದ ಷಡ್ಯಂತರ ನಡೆಸಿದರು ತಮ್ಮ ಅಗಾಧವಾದ ಜ್ಞಾನ ಹಾಗೂ ದೂರದೃಷ್ಟಿ ಗುಣದಿಂದ ಬಾಬಾ ಸಾಹೇಬರು ಸಂವಿಧಾನ ರಚನಾ ಸಮಿತಿಗೆ ಆಯ್ಕೆಯಾದರು 5000 ವರ್ಷಗಳಿಂದ ನಿರಂತರವಾಗಿ ನಡೆಯುತ್ತಾ ಬಂದಿರುವ ಶೋಷಣೆಯನ್ನು ಕೇವಲ ಐವತ್ತು ವರ್ಷಗಳಲ್ಲಿ ನಿರ್ಮೂಲೆ ಮಾಡಿದ ಕೀರ್ತಿ ಅವರಿಗೆ ಸಲ್ಲುತ್ತದೆ ಇಂಥಹ ಮಹಾನ್ ದಾರ್ಶನಿಕನನ್ನು ಸ್ಮರಿಸುವಂತಹ ಕೆಲಸ ಆಗಬೇಕಾಗಿದೆ ಅವರ ಆಸೆ ಈಡೇರಬೇಕಾದರೆ ಪ್ರತಿಯೊಬ್ಬರೂ ಅವರು ಕೊಟ್ಟು ಹೋದ ಈ ಮಹಾನ್ ಗ್ರಂಥದ ಅನುಸರಣೆಯನ್ನುಮಾಡುವುದು ಅಗತ್ಯವಾಗಿದೆ ಎಂದರು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ ತಹಶೀಲ್ದಾರ್ ಕೀರ್ತಿ ಚಾಲಕ್ ಅವರು ಡಾ. ಬಿ. ಆರ್. ಅಂಬೇಡ್ಕರ್ ಅವರ ಮೂರ್ತಿಗೆ ಪೂಜೆಯನ್ನು ಸಲ್ಲಿಸಿ ಪುಷ್ಪಾರ್ಚನೆ ಮಾಡಿ ನಂತರ ಎಲ್ಲರಿಗೂ ಸಂವಿಧಾನದ ಪ್ರತಿಜ್ಞ ವಿಧಿಯನ್ನು ಬೋಧಿಸಿದರು. ಸಮಾಜ ಕಲ್ಯಾಣ ಇಲಾಖೆಯ ಎನ್. ವಿ.ಕೋರಿ ಸ್ವಾಗತಿಸಿದರು.
ಕಾರ್ಯಕ್ರಮದಲ್ಲಿ ಪುರಸಭೆ ಮುಖ್ಯ ಅಧಿಕಾರಿ ಮಹೇಶ ಜಾಧವ. ನಿವೃತ್ತ ಪೊಲೀಸ್ ವರಿಷ್ಟಾಧಿಕಾರಿ ಎಸ್. ಬಿ. ಕಟ್ಟಿಮನಿ. ದಲಿತ ಮುಖಂಡ ಮುತ್ತಪ್ಪ ಚಮಲಾಪೂರ. ಪುರಸಭೆ ಸದಸ್ಯ ಪರಶುರಾಮ ತಂಗಡಗಿ. ಮಹೇಶ್ ಚಲವಾದಿ. ಗೋಪಾಲ ಕಟ್ಟಿಮನಿ. ಬಸ್ಸು ಕಟ್ಟಿಮನಿ. ಶಫೀಕ್ ಇನಾಮದಾರ. ಅಬೂಬಕರ ಲಾಹೋರಿ. ನದೀಮ ಕಡು. ಸಿಆರ್ಪಿಗಳಾದ ರಾಜು ವಿಜಾಪೂರ. ಲಕ್ಷ್ಮಣ ಬಾಗೇವಾಡಿ. ಬಾಲಾಜಿ ವಿಜಾಪುರ್ ಇಬ್ರಾಹಿಂ ಆಲ ಮೇಲ. ಬಿ ಆರ್ ಪಿ ಕಾಶಿನಾಥ್ ಸಜ್ಜನ. ಸಮಾಜ ಕಲ್ಯಾಣ ಇಲಾಖೆಯ ಎನ್. ವಿ. ಕೋರಿ. ಎಸ್. ಎಂ. ಕಲಬುರ್ಗಿ. ಎಸ್.ಎನ್.ಮಲ್ಲಾಡೆ ನಾಗರಾಜ್ ಗುಡಗುಂಟಿ .ವಿ. ಎನ್. ಮಾಳಗಿ. ಮಂಜುನಾಥ ನರಸಣಗಿ. ನವೀನ್ ಇಜೇರಿ ರಾಮನಗೌಡ ಬಂಟನೂರು ಮತ್ತಿತರರು ಇದ್ದರು.

