ಉದಯರಶ್ಮಿ ದಿನಪತ್ರಿಕೆ
ಸಿಂದಗಿ: ಶಿಕ್ಷಕ ವೃತ್ತಿ ಪವಿತ್ರ ವೃತಿ ಶಿಕ್ಷಕರಾದವರು ಸ್ವಾರ್ಥಕ್ಕಿಂತ ಪರಾರ್ಥಕ್ಕಾಗಿ ಶ್ರಮಿಸಬೇಕು ಎಂದು ಪ ಪೂ ಶಿಕ್ಷಣ ಇಲಾಖೆಯ ಉಪನರ್ದೇಶಕ ಕೆ ಎಸ್ ಉಪ್ಪಾರ ಹೇಳಿದರು
ಅವರು ಪಟ್ಟಣದ ಪಿ ಇ ಎಸ್ ಶಿಕ್ಷಣ ಸಂಸ್ಥೆ ಹಾಗೂ ಲಯನ್ಸ್ ಕ್ಲಬ್ ಸಿಂದಗಿ ಇವರ ಸಂಯುಕ್ತಾಶ್ರಯದಲ್ಲಿ ಹಮ್ಮಿಕೊಂಡಿರುವ ಶಿಕ್ಷಕರ ದಿನಾಚರಣೆಯನ್ನು ಉದ್ದೇಶಿಸಿ ಮಾತನಾಡಿದ ಅವರು, ಆದರ್ಶ ಶಿಕ್ಷರಾಗಬೇಕಾದವರು ಮೊದಲು ಉತ್ತಮ ಆದರ್ಶ ಗುಣಗಳಿಂದ ವಿದ್ಯಾದಾನ ಮಾಡಿ ಮಾದರಿ ಶಿಕ್ಷರಾಗಬೇಕು ಅಂದಾಗ ಮಾತ್ರ ಆದರ್ಶ ಶಿಕ್ಷರಾಗಲು ಸಾಧ್ಯ ಎಂದರು.
ಇದೇ ಸಂದರ್ಭದಲ್ಲಿ ವಿವಿಧ ತಾಲೂಕಿನಿಂದ ಆಯ್ದ ಸುಮಾರು ೧೦ ಕ್ಕೂ ಅಧಿಕ ಪ್ರೌಢಶಾಲಾ ಶಿಕ್ಷರಿಗೆ “ಆದರ್ಶ ಶಿಕ್ಷಕ” ಪ್ರಶಸ್ತಿಯನ್ನು ನೀಡಿ ಗೌರವಿಸಲಾಯಿತು.
ಲಯನ್ಸ್ ಕ್ಲಬ್ ಜಿಲ್ಲಾ ಗವ್ಹರ್ನರ ಬೆಲಗವಿಯ ರಾಜಶೇಖರ ಹಿರೇಮಠ ಸಮಾರಂಭ ಉದ್ದೇಶಿಸಿ ಮಾತನಾಡಿದರು.
ಆದರ್ಶ ಶಿಕ್ಷಕ ಗೌರವಕ್ಕೆ ಭಾಜನಾರಾದ ಶಿಕ್ಷಕ ಎ ಎಸ್ ವಾಲಿಕಾರ, ಪ್ರಶಸ್ತಿಗಳಿಗಾಗಿ ಲಾಭಿ ನಡೆಸುವ ಇಂದಿನ ದಿನಮಾನದಲ್ಲಿ ನಮ್ಮನ್ನು ಗುರುತಿಸಿ “ಆದರ್ಶ ಶಿಕ್ಷಕ “ ಪುರಸ್ಕಾರ ನೀಡಿದ್ದು ಲಯನ್ಸ್ ಕ್ಲಬ್ ಹಾಗೂ ಪಿ ಇ ಎಸ್ ಸಂಸ್ಥೆಯ ಕಾರ್ಯ ಶ್ಲಾಘನೀಯ ಎಂದರು.
ವಿಜಯಪುರದ ಅಂಜುಮನ್ ಪಿ.ಯು. ಕಾಲೇಜಿನ ಉಪನ್ಯಾಸಕ ಹಾಗು ಹಾಕಿ ಕೋಚ್ ಎಸ್.ಕೆ. ಇನಾಮದಾರ, ಉಪನ್ಯಾಸಕ ಎಂ.ಎನ್. ಅಜ್ಜಪ್ಪ ಕಾರ್ಯಕ್ರಮ ಉದ್ದೇಶಿಸಿ ಮಾತನಾಡಿದರು.
ಸಿಂದಗಿ ತಾಲೂಕಾ ಲಯನ್ಸ್ ಕ್ಲಬ್ ಅಧ್ಯಕ್ಷ ಎಂ.ಜೆ.ಎಫ್. ಲಾ. ಅಂಬರೀಶ ಬಿರಾದಾರ ಅಧ್ಯಕ್ಷತೆ ವಹಿಸಿದ್ದರು. ಪಿ.ಇ.ಎಸ್. ಸಂಸ್ಥೆಯ ಕಾರ್ಯದರ್ಶಿ ಲಾ. ಬಿ.ಪಿ. ಕರ್ಜಗಿ, ಲಯನ್ಸ್ ಕ್ಲಬ್ ಕಾರ್ಯದರ್ಶಿ ಲಾ. ಆಯ್.ಬಿ. ಬಿರಾದಾರ, ಎಂ.ಜೆ.ಎಫ್. ಕೆ.ಎಚ್. ಸೋಮಾಪೂರ, ಲಾ. ಎಸ್.ಎಸ್. ಪಾಟೀಲ, ಲಾ. ರಾಚಪ್ಪ ವಾರದ ಲಾ.ಎಸ್.ಬಿ. ಚಾಗಶೆಟ್ಟಿ, ಲಾ. ಮುತ್ತು ಮುಂಡೇವಾಡಗಿ, ಶ್ರೀಮತಿ ಅರ್ಪಿತಾ ಅ. ಬಿರಾದಾರ, ಪ್ರಾಚಾರ್ಯರಾದ ಆರ್.ಎಸ್. ಧರಿಗೊಂಡ, ಜಿ.ಎಸ್. ಕಡಣಿ ಉಪಸ್ಥಿತರಿದ್ದರು.
ಲಯನ್ ಖಜಾಂಚಿಗಳಾದ ಲಾ. ಆರ್.ಎಂ. ಪಾಟೀಲ ಕಾರ್ಯಕ್ರಮ ನಿರೂಪಣೆ ಮಾಡಿದರು.

