ಅದಮ್ಯ ಚೈತನ್ಯ ಸಂಸ್ಥೆಯ ಪ್ರಮುಖರಾದ ತೇಜಸ್ವಿನಿ ಅನಂತಕುಮಾರ್ ಸಲಹೆ
ಉದಯರಶ್ಮಿ ದಿನಪತ್ರಿಕೆ
ವಿಜಯಪುರ: ಪ್ಲಾಸ್ಟಿಕ್ ಮುಕ್ತ ಅಡುಗೆ ಮನೆ ರೂಪಿಸುವುದು ಮಹಿಳೆಯರ ಸಂಕಲ್ಪವಾಗಬೇಕು ಎಂದು ಅದಮ್ಯ ಚೈತನ್ಯ ಸಂಸ್ಥೆಯ ಪ್ರಮುಖರಾದ ತೇಜಸ್ವಿನಿ ಅನಂತಕುಮಾರ್ ಹೇಳಿದರು.
ವಿಜಯಪುರದ ಶ್ರೀ ಶಿವ ಚಿದಂಬರ ದೇವಾಲಯದಲ್ಲಿ
ಶ್ರೀ ಚಿದಂಬರ ಸೇವಾ ಸಮಿತಿ ನೇತೃತ್ವದಲ್ಲಿ ಶ್ರೀ ಶಿವಚಿದಂಬರ ಮಹಾಸ್ವಾಮಿಯ ಅಪ್ರಕಾಶಿತ ಲೀಲಾಗ್ರಂಥದ ಪಠಣದ ೫೦ ನೇ ವರ್ಷದ ಸುವರ್ಣ
ಮಹೋತ್ಸವ ಅಂಗವಾಗಿ ನಡೆದ ಮಹಿಳಾ ಗೋಷ್ಠಿಯ ಅಧ್ಯಕ್ಷತೆ ವಹಿಸಿ ಅನೇಕ ವಿಷಯಗಳ ಮೇಲೆ ಬೆಳಕು ಚೆಲ್ಲಿದ ಅವರು, ಪ್ಲಾಸ್ಟಿಕ್ ನಿಸರ್ಗಕ್ಕೆ ಅತ್ಯಂತ ಅಪಾಯಕಾರಿ, ಪ್ಲಾಸ್ಟಿಕ ತನ್ನ ವಿಷಕಾರಿ ಅಂಶವನ್ನು ಹೊರ ಸೂಸುತ್ತಲೇ ಇರುತ್ತದೆ, ಪ್ಲಾಸ್ಟಿಕ್ ಒಂದು ಅಪಾಯಕಾರಿ ಅಂಶ, ಹೀಗಾಗಿ ಪ್ಲಾಸ್ಟಿಕ್ ಮುಕ್ತ ಸಮಾಜ ನಿರ್ಮಾಣ ಪ್ರತಿಯೊಬ್ಬರ ಸಂಕಲ್ಪವಾಗಬೇಕು, ಈ ಕಾರ್ಯ ಯಶಸ್ವಿಯಾಗಲು ಮೊದಲು ನಮ್ಮ ಅಡುಗೆ ಮನೆ ಪ್ಲಾಸ್ಟಿಕ್ ಮುಕ್ತವಾಗಬೇಕು, ಈ ಕಾರ್ಯ ಸಾಧ್ಯವಾಗಬೇಕಾಗಿರುವುದು ಮಹಿಳೆಯರಿಂದ ಎಂದರು.
ಮಹಿಳೆ ಒಂದು ಶ್ರೇಷ್ಠ ಶಕ್ತಿ, ಮಹಿಳೆ ಸವಾಲುಗಳಿಂದ ಹೆದರದೇ ಅವುಗಳನ್ನು ಸಮರ್ಥವಾಗಿ ಎದುರಿಸಿ ಮುನ್ನಡೆಯಬೇಕು ಎಂದರು.
ಮಾಜಿ ಸಚಿವ ಅಪ್ಪಾಸಾಹೇಬ ಪಟ್ಟಣಶೆಟ್ಟಿ ಮಾತನಾಡಿ, ಮಕ್ಕಳಲ್ಲಿ ಸಂಸ್ಕಾರ ಬಿತ್ತುವ ಮಹತ್ತರ ಹೊಣೆಗಾರಿಕೆ ತಾಯಂದಿರ ಮೇಲಿದೆ, ಹೀಗಾಗಿ ಬಾಲ್ಯದಲ್ಲಿಯೇ ಮಕ್ಕಳಿಗೆ ನಮ್ಮ ಪವಿತ್ರ ಹಿಂದೂತ್ವದ ಮೌಲ್ಯಗಳನ್ನು ಮಕ್ಕಳಲ್ಲಿ ಬಿತ್ತುವ ಕಾರ್ಯ ಮಾಡಬೇಕು ಎಂದು ಕರೆ ನೀಡಿದರು.
ಸಿಂದಗಿ ಶ್ರೀ ಭೀಮಾಶಂಕರ ಮಠದ ಶ್ರೀ ಸದಾಶಿವ ಅಪ್ಪಯ್ಯ ಮಹಾಸ್ವಾಮೀಜಿ, ಶ್ರೀ ವಲ್ಲಭ ಸ್ವಾಮೀಜಿ, ಶ್ರೀ ಸದಾನಂದ ಸ್ವಾಮೀಜಿ ಸಾನಿಧ್ಯ ವಹಿಸಿದ್ದರು.
ಶಿಕ್ಷಣ ಹಾಗೂ ಅಧ್ಯಾತ್ಮಿಕತೆ ಎಂಬ ವಿಷಯಗಳ ಕುರಿತು ಡಾ.ರಾಘವೇಂದ್ರ ಕುಲಕರ್ಣಿ ಉಪನ್ಯಾಸ ಮಂಡಿಸಿದರು.
ಬಾಗಲಕೋಟೆ ತೋಟಗಾರಿಕೆ ವಿವಿ ಕುಲಸಚಿವ ಬಾಲಾಜಿ ಕುಲಕರ್ಣಿ ಉಪನ್ಯಾಸ ನೀಡಿದರು.
ಈ ಸಂದರ್ಭದಲ್ಲಿ ಬಿಜೆಪಿ ಜಿಲ್ಲಾಧ್ಯಕ್ಷ ಗುರುಲಿಂಗಪ್ಪ ಅಂಗಡಿ, ಶ್ರೀ ಚಿದಂಬರ ಸೇವಾ ಸಮಿತಿ ಅಧ್ಯಕ್ಷ ಲಕ್ಷ್ಮೀಕಾಂತ ಕುಲಕರ್ಣಿ, ಉಪಾಧ್ಯಕ್ಷ ಅಂಬಾದಾಸ ಜೋಶಿ, ಕಾರ್ಯದರ್ಶಿ ವೇದಮೂರ್ತಿ ವೆಂಕಟೇಶ್ ಭಟ್ ಅಗ್ನಿಹೋತ್ರಿ ವೆಂಕಟೇಶ ಜೋಶಿ, ವಿ.ಸಿ. ಕುಲಕರ್ಣಿ, ಸಿ.ಕೆ. ಕುಲಕರ್ಣಿ, ವಿಜಯ ಜೋಶಿ, ವೆಂಕಟೇಶ ಜೋಶಿ, ಮುಕುಂದ ಹಂಗರಗಿ. ಚಿದಂಬರ ಜೋಶಿ ರೊಳ್ಳಿ ಸುಧೀಂದ್ರ ಕುಲಕರ್ಣಿ ವೆಂಕಟೇಶ್ ಜೋಶಿ ಹಡ್ಲಿಗೇರಿ ಉಪೇಂದ್ರ ದೇಸಾಯಿ ಪಾಲ್ಗೊಂಡಿದ್ದರು.

