ಉದಯರಶ್ಮಿ ದಿನಪತ್ರಿಕೆ
ಕೆಂಭಾವಿ: ಪರಸ್ಪರ ಸಹಕಾರ, ಸಹಬಾಳ್ವೆ, ಸೌಹಾರ್ದತೆ, ಸಹೋದರತ್ವದ ಪರಿಕಲ್ಪನೆಯ ರಕ್ಷಾ ಬಂಧನ ಹಬ್ಬ, ಸ್ನೇಹಯದ, ಸ್ವಾಭಿಮಾನದ, ಸಂರಕ್ಷಣೆಯ ಸಂಕೇತ ಎಂದು ಯುವ ನಾಯಕ ಆದಿತ್ಯಗೌಡ ಎಸ್ ಪೋಲಿಸ್ ಪಾಟೀಲ್ ಹೇಳಿದರು.
ಪಟ್ಟಣದ ಹಿರೇಮಠ ಸಂಸ್ಥಾನದಲ್ಲಿ ಶ್ರೀಗುರು ಕಾಂತೇಶ್ವರ ಜನಕಲ್ಯಾಣ ಸೇವಾ ಪ್ರತಿಷ್ಠಾನ ಹಾಗೂ ವಿವೇಕ ಜಾಗೃತ ಬಳಗ, ಸಹಜ ಸ್ಥಿತಿಯೋಗ ಬಂಧುಗಳು ಶ್ರೀ ರವಿಶಂಕರ ಗುರೂಜಿ ಸತ್ಸಂಗಿಗಳು ಸಂಯುಕ್ತಾಶ್ರಯದಲ್ಲಿ ಶುಕ್ರವಾರ ಸಂಜೆ ಹಮ್ಮಿಕೊಂಡಿದ್ದ ಮಾಸಿಕ ಹುಣ್ಣಿಮೆಯ ಶಿವಾನುಭವ ಗೋಷ್ಠಿ ಮತ್ತು ರಕ್ಷಾ ಬಂಧನ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಅವರು ರಕ್ಷಾ ಬಂಧನ ಹಬ್ಬ ಸಾಂಸ್ಕೃತಿಕ ಹಾಗೂ ಸಾಂಪ್ರದಾಯಿಕ ಪರಂಪರೆಯ ಪ್ರತೀಕ ಎಂದವರು, ಭ್ರಾತೃತ್ವದ ಬೆಸುಗೆ, ಆದರ್ಶಗಳ ಅಪ್ಪುಗೆ, ಮಾನವೀಯ ಮೌಲ್ಯಗಳಿಗೆ ಮೇಲ್ಪಂಕ್ತಿ ಹಾಕಿಕೊಟ್ಟು ಪ್ರಾಗೈತಿಹಾಸಿಕ ಹಬ್ಬವೇ ರಕ್ಷಾಬಂಧನ ಎಂದರು.
ಸಾಹಿತಿಗಳಾದ ನಿಂಗನಗೌಡ ದೇಸಾಯಿ ಹಾಗೂ ಶರಣಯ್ಯ ಸ್ವಾಮಿ ಹಿರೇಮಠ, ಜಿಲ್ಲಾ ಕಾಂಗ್ರೆಸ್ ಉಪಾಧ್ಯಕ್ಷ ಮಹಿಪಾಲರಡ್ಡಿ ಡಿಗ್ಗಾವಿ, ಮಾಜಿ ಪುರಸಭೆ ಸದಸ್ಯೆ ಉಮಾದೇವಿ ಎಚ್ ಪಾಟೀಲ್ ಕಾರ್ಯಕ್ರಮ ಉದ್ದೇಶಿಸಿ ಮಾತನಾಡಿ ರಕ್ಷಾ ಬಂಧನ ಹಬ್ಬದ ಐತಿಹಾಸಿಕ ಹಿನ್ನೆಲೆಯ ಮೇಲೆ ಬೆಳಕು ಚೆಲ್ಲಿದರು.
ಚನ್ನಬಸವ ಶಿವಾಚಾರ್ಯರು ಸಾನ್ನಿಧ್ಯ ವಹಿಸಿ ಆಶೀರ್ವಚನ ನೀಡಿದ ಅವರು ಸದ್ಭಕ್ತರಾದ ರಮೇಶ ಸೋನ್ನದ ಹಾಗೂ ಗುಡದಯ್ಯ ದಾವಣಗೆರೆಯವರು ಎಲ್ಲರನ್ನೂ ಒಂದುಗೂಡಿಸುವ ಮೂಲಕ ಪ್ರತಿ ವರ್ಷವೂ ರಕ್ಷಾ ಬಂಧನ ಹಬ್ಬವನ್ನು ಅರ್ಥಪೂರ್ಣವಾಗಿ ಶ್ರೀಮಠದಲ್ಲಿ ಜರುಗುವ ಮಾಸಿಕ ಹುಣ್ಣಿಮೆಯ ಸತ್ಸಂಗದಲ್ಲಿ ಆಚರಿಸಿಕೊಂಡು ಬರುತ್ತಿರುವ ಕಾರ್ಯ ಸ್ತುತ್ಯಾರ್ಹ ಎಂದರು.
ಇದೇ ವೇಳೆ ಅಮರನಾಥ ಯಾತ್ರಾರ್ಥಿಗಳಾದ ಶರಣು ಹುಜರತಿ, ಮಹೇಶ ಹೂಗಾರ, ಅನಿಲ್ ಗುತ್ತೇದಾರ, ವಿಜಯ ಹೆಳವರು, ಭವಾನಿ ಶಂಕರ, ಕೃಷ್ಣಪ್ಪ ಮಲ್ಲಿಬಾವಿ, ಶಿವಕುಮಾರ ಹೆಳವರ, ಮಹಮ್ಮದ್ ಹನೀಫ್ ಇವರುಗಳನ್ನು ಸನ್ಮಾನಿಸಿ ಗೌರವಿಸಲಾಯಿತು.
ಪ್ರಮುಖರಾದ ಹಳ್ಳೇಪ್ಪಗೌಡ ಪಾಟೀಲ್, ಡಾ ಎ ಜಿ ಹಿರೇಮಠ, ನವೀನ್, ನರಸಿಂಹ ವಡ್ಡೆ, ಶಿವನಂದಯ್ಯ ಸ್ವಾಮಿ, ಚನ್ನಬಸವ, ಎಚ್ ಆರ್ ಬಡಿಗೇರ, ಮಲ್ಲನಗೌಡ ಪಾಟೀಲ್, ಪರಶುರಾಮ ನಾರಾಯಣಕರ್, ಹಣ್ಮಂತ ಶಹಾಪುರ, ವೀರಣ್ಣ ಕಲಿಕೇರಿ, ಇಲಿಯಾಸ್ ಪಟೇಲ್, ಅಭಿಷೇಕ ಪಾಟೀಲ್, ಉಪನ್ಯಾಸಕರಾದ ಲೋಕೇಶ, ಸಣ್ಣ ವೀರೇಶ, ಯಲ್ಲಾಲಿಂಗ, ಸೇರಿದಂತೆ ಅನೇಕರಿದ್ದರು.
ಸಿದ್ದಲಿಂಗಸ್ವಾಮಿ ಚಿಂಚೋಳಿ ಇವರಿಂದ ಸಂಗೀತ ಕಾರ್ಯಕ್ರಮ ಮೂಡಿ ಬಂತು, ಡಾ ಯಂಕನಗೌಡ ಪಾಟೀಲ್ ನಿರೂಪಿಸಿ, ವಂದಿಸಿದರು

