ಬಿ.ಎಲ್.ಡಿ.ಇ ಸಂಸ್ಥೆಯ ನೂತನ ಕಲಾ ಮಹಾವಿದ್ಯಾಲಯ ತಿಕೋಟಾ ಕಾಲೇಜಿನಲ್ಲಿ ವಿಶೇಷ ಉಪನ್ಯಾಸ & ಕ್ರೀಡಾ ದಿನಾಚರಣೆ | ಡಾ.ಸುನಿತಾ ಬಿ. ಜಾಧವ ಸಲಹೆ
ಉದಯರಶ್ಮಿ ದಿನಪತ್ರಿಕೆ
ತಿಕೋಟಾ: ಭಾರತದ ಪುರಾತನ ಸಾಮುದಾಯಿಕ ಸಂಸ್ಕೃತಿಯನ್ನು ಇಂದಿನ ಡಿಜಿಟಲ್ ಯುಗವು ಬದಲು ಮಾಡುತ್ತಿರುವುದರ ಇತಿಮಿತಿಗಳನ್ನು ಅಳತೆ ಮಾಡುವುದು ಕಷ್ಟಸಾಧ್ಯ ಎಂದು ಮುದ್ದೇಬಿಹಾಳ ಎಮ್.ಜಿ.ವಿ.ಸಿ ಕಾಲೇಜಿನ ಸಮಾಜಶಾಸ್ತ್ರ ವಿಭಾಗದ ಮುಖ್ಯಸ್ಥೆ ಡಾ.ಸುನಿತಾ ಬಿ. ಜಾಧವ ಹೇಳಿದರು.
ಬಿ. ಎಲ್. ಡಿ. ಇ ಸಂಸ್ಥೆಯ ತಿಕೋಟಾ ಪಟ್ಟಣದ ನೂತನ ಕಲಾ ಮಹಾವಿದ್ಯಾಲಯದಲ್ಲಿ ಶನಿವಾರ ಐಕ್ಯೂಎಸಿ ಹಾಗೂ ಸಮಾಜಶಾಸ್ತ್ರ ವಿಭಾಗದ ವತಿಯಿಂದ ಆಯೋಜಿಸಿದ್ದ ವಿಶೇಷ ಉಪನ್ಯಾಸ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ಇವತ್ತಿನ ತಂತ್ರಜ್ಞಾನ ತಕ್ಷಣದ ಸಂಪರ್ಕ ಒದಗಿಸಿ ಜಗತ್ತಿನ ಯಾವುದೇ ಮೂಲೆಯಲ್ಲಿರುವವರನ್ನು ಕ್ಷಣಾರ್ಧದಲ್ಲಿ ಸಂಪರ್ಕಿಸಲು ಅನುವು ಮಾಡಿದೆ. ಭೌಗೋಳಿಕ ದೂರವು ಈಗ ಸಂಬಂಧಗಳಿಗೆ ಅಡ್ಡಿಯಾಗಿ ಉಳಿದಿಲ್ಲ. ನಿರಂತರ ವಾಟ್ಸಾಪ್, ಇನ್ಸ್ಟಾಗ್ರಾಮ್ ಮೂಲಕ ಸಂಪರ್ಕದಲ್ಲಿರಲು ಸಾಧ್ಯವಾಗಿದೆ. ಸಂಬಂಧಗಳ ಸ್ವರೂಪದಲ್ಲಿ ಮುಖಾಮುಖಿ ಭೇಟಿಯಾಗದಿದ್ದರೂ ಆನ್ಲೈನ್ನಲ್ಲಿ ಆಪ್ತ ಗೆಳೆಯರಾಗುತ್ತಿದ್ದಾರುವುದು ಒಳ್ಳೆಯ ಬೆಳವಣಿಗೆ. ಸೈಬರ್ ಸಂಸ್ಕೃತಿಯು ಮಾನವ ಸಂಬಂಧಗಳನ್ನು ಹತ್ತಿರ ತಂದಿದ್ದರೂ, ಅವುಗಳ ನಡುವಿನ ಭಾವನಾತ್ಮಕ ಆಳವನ್ನು ಕಡಿಮೆ ಮಾಡಿದೆ. ತಂತ್ರಜ್ಞಾನವನ್ನು ಮಿತವಾಗಿ ಬಳಸಿ, ನೈಜ ಸಂಬಂಧಗಳಿಗೆ ಒತ್ತು ನೀಡುವುದು ಇಂದಿನ ಅಗತ್ಯವಾಗಿದೆ ಎಂದು ಹೇಳಿದರು.
ವಿಭಾಗದ ಮುಖ್ಯಸ್ಥ ಡಾ.ಎಂ.ಬಿ.ಹೂಗಾರ ಪ್ರಾಸ್ತಾವಿಕವಾಗಿ ಮಾತನಾಡಿದರು.
ದೈಹಿಕ ನಿರ್ದೇಶಕ ಬಿ.ಆರ್.ದೇಸಾಯಿ ಮಾಂತ್ರಿಕ ಧ್ಯಾನಚಂದ್ ಅವರ ಕುರಿತು ಮಾತನಾಡಿದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಕಾಲೇಜಿನ ಪ್ರಾಂಶುಪಾಲ ಪ್ರೊ.ಪಿ.ಎಸ್.ತೋಳನೂರ ವಹಿಸಿದ್ದರು.
ಐಕ್ಯೂಎಸಿ ಸಂಯೋಜಕ ಪ್ರೊ.ಬಿ.ಎಸ್.ಬೆಳಗಲಿ, ಸಮಾಜಶಾಸ್ತ್ರ ವಿಭಾಗದ ಮುಖ್ಯಸ್ಥ ಡಾ.ಎಂ.ಬಿ.ಹೂಗಾರ, ಡಾ.ಸುನೀತಾ ಬಿ.ಜಾಧವ, ಇಂಗ್ಲೀಷ ಉಪನ್ಯಾಸಕಿ ಸ್ವಪ್ನಾ ಹಾಲಳ್ಳಿ, ದೈಹಿಕ ಶಿಕ್ಷಣ ವಿಭಾಗದ ನಿರ್ದೇಶಕ ಬಿ.ಆರ್.ದೇಸಾಯಿ, ಪ್ರಾಧ್ಯಾಪಕ ವೃಂದ, ಬೋಧಕೇತರ ಸಿಬ್ಬಂದಿ ಹಾಗೂ ವಿದ್ಯಾರ್ಥಿಗಳು ಭಾಗವಹಿಸಿದ್ದರು.
ಪ್ರಿಯಾ ದಡೇಕರ ಸಂಗಡಿಗರು ಪ್ರಾರ್ಥಿಸಿದರು, ವಿದ್ಯಾರ್ಥಿನಿ ತೇಜು ಖೋತ ನಿರೂಪಿಸಿ, ವಂದಿಸಿದರು.

