ಉದಯರಶ್ಮಿ ದಿನಪತ್ರಿಕೆ
ಆಲಮೇಲ: ಇತ್ತೀಚೆಗೆ ಆಲಮೇಲ ತಾಲ್ಲೂಕು ಬಣಜಿಗ ಸಮಾಜದ ಕ್ಷೇಮಾಭಿವೃದ್ಧಿ ಸಂಘದ ಆಶ್ರಯದಲ್ಲಿ ನಡೆದ ಪದಗ್ರಹಣ ಹಾಗೂ ಪ್ರತಿಭಾ ಪುರಸ್ಕಾರ ಸಮಾರಂಭದ ಯಶಸ್ಸಿಗೆ ಅಭಿನಂದನಾ ಸಮಾರಂಭವು ಆಲಮೇಲ ತಾಲ್ಲೂಕಿನ ಅಲ್ಲೊಳ್ಳಿ ಹಿರೇಮಠದಲ್ಲಿ ಆ.23ರಂದು ನಡೆಯಿತು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಶಿವಕುಮಾರ ಗುಂದಗಿ ಮಾತನಾಡಿ, ಸಮಾಜದಲ್ಲಿ ಆರ್ಥಿಕವಾಗಿ ಹಿಂದುಳಿದ ಕುಟುಂಬಗಳನ್ನು ಗುರುತಿಸಿ, ಅವರ ಮಕ್ಕಳಿಗೆ ಗುಣಮಟ್ಟದ ಶಿಕ್ಷಣ ದೊರಕಿಸುವ ನಿಟ್ಟಿನಲ್ಲಿ ನೆರವು ನೀಡಬೇಕು. ಪ್ರತಿಭಾವಂತ ವಿದ್ಯಾರ್ಥಿಗಳನ್ನು ಪ್ರೋತ್ಸಾಹಿಸುವುದು ಸೇರಿದಂತೆ ಇನ್ನಷ್ಟು ಸಮಾಜಮುಖಿ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಬೇಕು ಎಂದು ಸಲಹೆ ನೀಡಿದರು.
ಘಟಕದ ಪ್ರಧಾನ ಕಾರ್ಯದರ್ಶಿ ರವೀಂದ್ರ ವಾರದ ಅವರು, ಇತ್ತೀಚೆಗೆ ನಡೆದ ಸಮಾವೇಶಕ್ಕೆ ಸಂಗ್ರಹವಾದ ದೇಣಿಗೆ ಹಾಗೂ ಖರ್ಚು–ವೆಚ್ಚಗಳ ವಿವರಗಳನ್ನು ಸಭೆಯಲ್ಲಿ ಮಂಡಿಸಿದರು.
ಶಿವಶರಣ ಗುಂದಗಿ ಸ್ವಾಗತಿಸಿ ಪ್ರಾಸ್ತಾವಿಕವಾಗಿ ಮಾತನಾಡಿದರು. ಸಮಾರಂಭದಲ್ಲಿ ಸಿದ್ದಪ್ಪ ಉಪ್ಪಿನ, ಶಿವಲಿಂಗಪ್ಪ ಗುಂದಗಿ, ಬಸವರಾಜ ಗುಣಾರಿ, ಶಿವಾನಂದ ಅಷ್ಟಗಿ, ಕಾಶಿನಾಥ ಸುಂಟಿ, ಘಟಕದ ಗೌರವಾಧ್ಯಕ್ಷ ಶರಣಪ್ಪ ಗುಬ್ಬೇವಾಡ, ರೇವಣಸಿದ್ದ ಮಸಳಿ ಹಾಗೂ ತಾಲ್ಲೂಕು ಅಧ್ಯಕ್ಷ ಸಿದ್ದಲಿಂಗ ಸುಬೇದಾರ ಉಪಸ್ಥಿತರಿದ್ದರು.

