ಯುವ ಭಾರತ ಸಂಸ್ಥಾಪಕ ಅಧ್ಯಕ್ಷ ಹಾಗೂ ವುಶು ಸಂಸ್ಥೆ ಅಧ್ಯಕ್ಷ ಉಮೇಶ ಕಾರಜೋಳ ಅಭಿಮತ
ಉದಯರಶ್ಮಿ ದಿನಪತ್ರಿಕೆ
ವಿಜಯಪುರ: ಆತ್ಮರಕ್ಷಣೆ, ಶಿಸ್ತು, ಏಕಾಗ್ರತೆ ಮೂಡಿಸುವಲ್ಲಿ ವುಶು ಬಹುಮುಖ್ಯವಾದ ಕ್ರೀಡೆಯಾಗಿದೆ ಎಂದು ಯುವ ಭಾರತ ಸಂಸ್ಥಾಪಕ ಅಧ್ಯಕ್ಷ ಹಾಗೂ ವುಶು ಸಂಸ್ಥೆ ಅಧ್ಯಕ್ಷ ಉಮೇಶ ಕಾರಜೋಳ ಹೇಳಿದರು.
ವಿಜಯಪುರದ ಡಾ.ಬಿ.ಆರ್. ಅಂಬೇಡ್ಕರ ಒಳಾಂಗಣ ಕ್ರೀಡಾಂಗಣದಲ್ಲಿ ಜಿಲ್ಲಾ ವುಶು ಸಂಸ್ಥೆ, ಶ್ರೀಮತಿ ಮೀನಾಕ್ಷಿ ಕಲ್ಲೂರ ಮಹಿಳಾ ಮಹಾವಿದ್ಯಾಲಯದ ಸಹಯೋಗದಲ್ಲಿ ಆಯೋಜಿಸಲಾಗಿದ್ದ ಖೇಲೋ ಇಂಡಿಯಾ ಅಸ್ಮಿತಾ ಮಹಿಳಾ ವುಶು ಕ್ರೀಡಾಕೂಟಕ್ಕೆ ವಿದ್ಯುಕ್ತವಾಗಿ ಚಾಲನೆ ನೀಡಿ ಮಾತನಾಡಿದ ಅವರು, ವುಶು ಇಂದು ಪ್ರಪಂಚದಾದ್ಯಂತ ಜನಪ್ರಿಯತೆ ಪಡೆದುಕೊಂಡಿದೆ, ವಿಜಯಪುರ ಭಾಗದಲ್ಲಿಯೂ ಈ ಕ್ರೀಡೆಯಲ್ಲಿ ಅನೇಕರು ಪರಿಣಿತರಾಗಿದ್ದಾರೆ, ಹೀಗಾಗಿ ಅವರಿಗೆ ಪ್ರೋತ್ಸಾಹದ ವೇದಿಕೆ ಕಲ್ಪಿಸಬೇಕಿದೆ, ಈ ಪ್ರೋತ್ಸಾಹದ ವೇದಿಕೆ ಕಲ್ಪಿಸುವುದರಿಂದ ಅವರು ಈ ಕ್ರೀಡೆಯಲ್ಲಿ ಪಾರಂಗತವಾಗಲು ಸಾಧ್ಯವಾಗುತ್ತದೆ, ನಮ್ಮ ಕ್ರೀಡಾ ಪ್ರತಿಭೆಗಳು ರಾಷ್ಟç, ಅಂತಾರಾಷ್ಟ್ರೀಯ ಮಟ್ಟದಲ್ಲಿ ಮಿಂಚಬೇಕು ಎಂದು ಕರೆ ನೀಡಿದರು.
ಭಾರತದಲ್ಲಿ ವುಶು ಕ್ರೀಡೆಯನ್ನು ಉತ್ತೇಜಿಸುವ ನಿಟ್ಟಿನಲ್ಲಿ ಹಲವಾರು ಕಡೆಗಳಲ್ಲಿ ಈ ಕ್ರೀಡಾಕೂಟ ಆಯೋಜಿಸಲಾಗುತ್ತಿದೆ ಎಂದರು.
ಮುಖ್ಯ ಅತಿಥಿಯಾಗಿದ್ದ ಆಂತರಿಕ ಭದ್ರತಾ ವಿಭಾಗದ ಪೊಲೀಸ್ ಅಧಿಕಾರಿ ಶಕೀಲ್ ಪಿಂಜಾರ ಮಾತನಾಡಿ, ಮಹಿಳೆಯರು ಆತ್ಮರಕ್ಷಣೆಯ ಕಲೆಗಳಾದ ಕರಾಟೆ, ವುಶು ಮೊದಲಾದವುಗಳ ಬಗ್ಗೆ ಆಸಕ್ತಿ ವಹಿಸಬೇಕು, ಈ ಕ್ರೀಡೆಗಳು ಬದುಕಿನಲ್ಲಿ ಹೊಸ ಭರವಸೆಯನ್ನು ಮೂಡಿಸುತ್ತವೆ ಎಂದರು.
ಈ ಸಂದರ್ಬದಲ್ಲಿ ರಾಜಶೇಖರ ದೈವಾಡಿ, ಶ್ರೀಮತಿ ಆರತಿ ಪಾಟೀಲ, ಅಶೋಕ ಡಿ ಮೋಕಾಶಿ, ರವಿ ಎಸ್ ಕಲ್ಲೂರ, ಭರತರಾಜ ದೇಸಾಯಿ, ಅನೀಲಕುಮಾರ ಪೂಜಾರಿ, ಶಂಕರ ಸಾನಪ್ಪ, ಶ್ರೀದೇವಿ ಡೆಂಗಿ, ವಿಜಯಲಕ್ಷ್ಮೀ ಪಾಟೀಲ, ಮಲಕಪ್ಪ ಮೊಸಲಗಿ, ಬಸವರಾಜ ಹಚಡದ, ಮೊದಲಾದವರು ಉಪಸ್ಥಿತರಿದ್ದರು.

