ಉದಯರಶ್ಮಿ ದಿನಪತ್ರಿಕೆ
ಸಿಂದಗಿ: ಮಕ್ಕಳಲ್ಲಿ ಶಾಲಾ ಸಂಸತ್ತಿನ ಕಲ್ಪನೆಯನ್ನು ಮೂಡಿಸುವುದರಿಂದ ಮಕ್ಕಳಲ್ಲಿ ನಾಯಕತ್ವದ ಗುಣವನ್ನು ಬೆಳೆಸುವಲ್ಲಿ ಸಹಾಯಕವಾಗುತ್ತದೆ ಎಂದು ಸಂಸ್ಥೆಯ ಅಧ್ಯಕ್ಷ ಆರ್.ಡಿ.ಕುಲಕರ್ಣಿ ಹೇಳಿದರು.
ನಗರದ ನಾಗೂರ ಬಡಾವಣೆಯ ವಿದ್ಯಾನಿಕೇತನ ಕನ್ನಡ ಮಾಧ್ಯಮ ಪ್ರಾಥಮಿಕ ಶಾಲೆ ಹಾಗೂ ಪ್ರೇರಣಾ ಆಂಗ್ಲ ಮಾಧ್ಯಮ ಪ್ರಾಥಮಿಕ ಶಾಲೆಗಳ ಸಹಯೋಗದಲ್ಲಿ ಮಕ್ಕಳಲ್ಲಿ ಮತದಾನದ ಜಾಗೃತಿ ಭಾಗವಹಿಸಿ ಮಾತನಾಡಿದ ಅವರು, ಮತದಾನದ ಜಾಗೃತಿ ಮೂಡಿಸುವುದು ಪ್ರತಿಯೊಬ್ಬರ ಕರ್ತವ್ಯ. ಮಕ್ಕಳಲ್ಲಿ ಮತದಾನದ ವಿವಿಧ ಹಂತಗಳನ್ನು ಬಾಲ್ಯದಲ್ಲಿಯೇ ಪರಿಚಯಿಸುವುದರಿಂದ ಮಕ್ಕಳಲ್ಲಿ ಕುತೂಹಲ ಮತ್ತು ಆಸಕ್ತಿಯನ್ನು ಮೂಡಿಸಿದಂತಾಗುತ್ತದೆ ಎಂದರು.
ಇದೇ ಸಂದರ್ಭದಲ್ಲಿ ಸಂಸ್ಥೆಯ ನಿರ್ದೇಶಕ ಪಿ.ಡಿ.ಕುಲಕರ್ಣಿ, ಮುಖ್ಯಗುರುಮಾತೆ ಎಮ್.ಪಿ.ಬುಕ್ಕಾ, ಮಕ್ಕಳೊಂದಿಗೆ ಶಿಕ್ಷಕರು ಒಟ್ಟು ಗೂಡಿ ಮತ ಚಲಾಯಿಸಿದ್ದು ವಿಶೇಷವಾಗಿತ್ತು. ಚುನಾವಣೆಯ ಮತಗಟ್ಟೆಯ ಅಧಿಕಾರಿಗಳಾಗಿ ಶ್ರೀಕಾರ ಪತ್ತಾರ, ವಿಹಾನ ಜೋಶಿ, ಅನನ್ಯ ಬಿರಾದಾರ, ರಚಿತಾ ಇಂಡಿ, ಸಾನ್ವಿ ಇಂಡಿ, ಪುನಿತ ನಾರಾಯಣಕರ ಕಾರ್ಯ ನಿರ್ವಹಿಸಿದರು.
ಶಾಲಾ ಸಂಸತ್ತಿನ ಚುನಾವಣೆಯಲ್ಲಿ ವಿದ್ಯಾರ್ಥಿಗಳಾದ ಶ್ರೀರಕ್ಷಾ ಬಿರಾದಾರ, ಸಾಧನಾ ಚೌಡಿಹಾಳ, ಕೃತಿ ದೇಶಮುಖ, ಪ್ರಗತಿ ಹರನಾಳ, ಕಿರ್ತನ ಪಡಸಾಲಗಿ, ವೈಬವ ಬಾಗಲಕೋಟ, ಮಲ್ಲನಗೌಡ ಪಾಟೀಲ, ಅಂಕುಶ ಸಾತಿಹಾಳ ಸ್ಪರ್ಧಿಸಿ ಮತಯಾಚಿಸಿದರು. ಬೋಧಕ ಸಿಬ್ಬಂದಿಗಳಾದ ಸತೀಶ ಕುಲಕರ್ಣಿ, ಕಿರಣ ಕುಲಕರ್ಣಿ, ಸನತ ಕುಲಕರ್ಣಿ, ಅಲ್ತಾಪ ತಾಂಬೋಳಿ, ಅಕ್ಷಯ ಯಲಗಟ್ಟಿ, ಶ್ರೀಕಾಂತ ಹೂನಳ್ಳಿ, ಎಸ್.ಬಿ.ಕುಂಟೋಜಿ, ಸಂತೋಷ ನಾಯಕ, ಎಸ್.ಎಸ್.ಯಂಕಂಚಿ, ಎಮ್.ಎಮ್.ಜುಮನಾಳ, ಬಿ.ಎಸ್.ಪಾಟೀಲ, ಎಸ್ವ್ಹಿ.ಕಡಣಿ, ಎಮ್.ಜಿ. ದ್ಯಾಮಗೊಂಡ, ವಿ.ಎ.ನಾಯಕ, ಎಸ್.ಡಿ.ನಾಯಕ, ವಿಜಯಲಕ್ಷ್ಮಿ ಅಲಾಳಮಠ, ಸಾವಿತ್ರಿ ವೀರಾಪೂರ, ಎನ್.ಜಿ. ಬಳಗಾನೂರ, ಆರ್.ಎಮ್.ಫಕೀರಪುರ, ಆರ್.ಎಸ್.ಶಿವಸಿಂಪಿಗೇರ, ಎಸ್.ಎಸ್.ಪಾಟೀಲ, ಜಿ.ಎಸ್.ಯಂಕಂಚಿ ಮತ್ತು ಬೋಧಕೇತರ ಸಿಬ್ಬಂದಿಗಳು ಇದ್ದರು.

