ಉದಯರಶ್ಮಿ ದಿನಪತ್ರಿಕೆ
ಚಡಚಣ: ಸಮಾಜದಲ್ಲಿನ ಮೌಢ್ಯಗಳನ್ನು ತಿದ್ದಿ, ಜಾತಿ, ಮತ ಪಂಥಗಳ ಭೇದವನ್ನು ತೊಲಗಿಸಿ ಸಮಾಜದಲ್ಲಿ ಸಮಾನತೆಗೆ ಶ್ರಮಿಸಿದ ವಿಶ್ವಗುರು ಬಸವಣ್ಣನವರು ಮಹಾನ್ ಮಾನವತಾವಾದಿಗಳಾಗಿದ್ದರು ಎಂದು ತಹಶಿಲ್ದಾರ ಸಂಜಯ ಇಂಗಳೆ ಹೇಳಿದರು.
ಪಟ್ಟಣದ ಬಸವೇಶ್ವರ ವೃತ್ತದಲ್ಲಿ ಬಸವೇಶ್ವರ ಸೇವಾ ಸಮೀತಿ ಆಶ್ರಯದಲ್ಲಿ ಸೋಮವಾರ ಆಯೋಜಿಸಲಾದ ಬಸವಣ್ಣನವರ 893 ನೇ ಜಯಂತಿ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ಹಾವಿನಾಳದ ಚರಂತಿಮಠದ ವಿಜಯ ಮಹಾಂತೇಶ ಸ್ವಾಮೀಜಿ ಮಾತನಾಡಿ, ಹನ್ನೆರಡನೇ ಶತಮಾನದಲ್ಲಿ ಬಸವಣ್ಣನವರು ಕಟ್ಟಿದ ವಿಶ್ವದ ಮೊದಲು ಸಂಸತ್ತು ಎಂದು ಹೆಸರಾದ ಅನುಭವ ಮಂಟಪ ಕಾಯಕಯೋಗವನ್ನು ಪ್ರತಿಪಾದಿಸಿ, ಶರಣ ಶರಣೆಯರು ನೀಡಿದ ಚಿಂತನೆಗಳು, ವಚನಗಳು ಮನುಕುಲಕ್ಕೆ ಸರ್ವಕಾಲಿಕ ದಾರಿ ದೀಪವಾಗಿವೆ ಎಂದರು.
ಸಾನಿಧ್ಯ ವಹಿಸಿದ ಸ್ಥಳಿಯ ವಿರಕ್ತಮಠದ ಷಡಕ್ಷರಿ ಸ್ವಾಮೀಜಿ ಆಶಿರ್ವಚನ ನೀಡಿದರು
ಕಾರ್ಯಕ್ರಮದಲ್ಲಿ ತಾ.ಪಂ. ಕಾರ್ಯ ನಿರ್ವಾಹಕ ಅಧಿಕಾರಿ ಅಶೊಕ ರಾಠೋಡ, ಪ.ಪಂ. ಮಾಜಿ ಅಧ್ಯಕ್ಷ ಬಾಬುಗೌಡ ಪಾಟೀಲ, ಚಡಚಣ ಮಂಡಲ ಬಿಜೆಪಿ ಅಧ್ಯಕ್ಷ ಕಾಂತುಗೌಡ ಪಾಟೀಲ, ಮುಖಂಡರಾದ ದೇವೇಂದ್ರಪ್ಪ ಪಾಟೀಲ, ಸೋಮು ಬಡಿಗೇರ, ಭೀಮಾಶಂಕರ ಆಲಕುಂಟೆ, ಎಂ.ಆರ್.ಹಿಟ್ನಳ್ಳಿ, ಮೊನಪ್ಪ ಬಡಿಗೇರ,ವಿ ಶ್ವನಾಥ ಪಾಟೀಲ, ಪ್ರಭಾಕರ ನಿರಾಳೆ, ರಾಜು ಡೋಣಗಾಂವ, ಕಾಸು ಮುಂಡೊಡಗಿ, ಅಶೋಕ ಕುಲಕರ್ಣಿ, ಮಹಾದೇವ ಯಂಕಂಚಿ, ಪ.ಪಂ. ಸದಸ್ಯರಾದ ರಾಜು ಕೋಳಿ, ಪ್ರಕಾಶಗೌಡ ಪಾಟೀಲ, ಬಾಲಾಜಿ ಗಾಡಿವಡ್ಡರ, ಚೇತನ ನಿರಾಳೆ ಸೇರಿದಂತೆ ಗ್ರಾಮಸ್ಥರು ಇದ್ದರು.

