ಉದಯರಶ್ಮಿ ದಿನಪತ್ರಿಕೆ
ಸಿಂದಗಿ: ರಾಂಪುರ ಬೆನಕೋಟಗಿ, ಮಲಘಾಣ ಸೇರುವ ರಸ್ತೆಗೆ ರೂ.೨ಕೋಟಿ ಅನುದಾನ ಮಂಜೂರು ಮಾಡಲಾಗಿದೆ. ಅತೀ ಶೀಘ್ರದಲ್ಲಿಯೇ ಭೂಮಿ ಪೂಜೆ ಮಾಡಲಾಗುವುದು. ರಾಂಪುರ ಸಿಂದಗಿ ಪ್ರಮುಖ ರಸ್ತೆ ಸುಧಾರಣೆಗೆ ರೂ.೪ಕೋಟಿ ಅನುದಾನ ಮೀಸಲಿಡಲಾಗಿದೆ ಎಂದು ಶಾಸಕ ಅಶೋಕ ಹೇಳಿದರು.
ತಾಲೂಕಿನ ರಾಂಪುರ ಪಿಎ ಗ್ರಾಮದ ಆರೂಢ ಸಂಗನಬಸವೇಶ್ವರ ಮಠದಲ್ಲಿ ಸಿಂದಗಿ ಲೋಕೋಪಯೋಗಿ ಇಲಾಖೆಯ ೨೦೨೫-೨೬ನೆಯ ಸಾಲಿನ ಮುಖ್ಯಮಂತ್ರಿ ಮೂಲ ಸೌಕರ್ಯ ಅಭಿವೃದ್ಧಿ ಯೋಜನೆ ಅಡಿಯಲ್ಲಿ ರೂ.೨೫ಲಕ್ಷ ಸಮುದಾಯ ಭವನ ನಿರ್ಮಾಣ ಭೂಮಿ ಪೂಜೆ ಸಮಾರಂಭ ನೆರವೇರಿಸಿ ಮಾತನಾಡಿದ ಅವರು, ವಿರೋಧ ಪಕ್ಷದವರು ಟೀಕೆ ಟಿಪ್ಪಣಿಗಳನ್ನು ಮಾಡುತ್ತಾರೆ ಅದಕ್ಕೆ ಕಿವಿಗೋಡದೆ ನಾನು ಅಭಿವೃದ್ಧಿಗೆ ಮೊದಲ ಆದ್ಯತೆ ನೀಡುತ್ತಾ ಹೋಗುತ್ತೇನೆ. ಅಭಿವೃದ್ಧಿಯೇ ನನ್ನ ಮೂಲ ಮಂತ್ರ. ಸಿಕ್ಕ ಅವಕಾಶವನ್ನು ಸರಿಯಾದ ರೀತಿಯಲ್ಲಿ ಸದ್ಭಳಕೆ ಮಾಡಿಕೊಂಡು ಪ್ರಾಮಾಣಿಕವಾಗಿ ಜನರ ಸೇವೆ ಮಾಡುತ್ತೇನೆ. ಗ್ಯಾರಂಟಿಯಿಂದಾಗಿ ರಾಜ್ಯ ಸರಕಾರದಲ್ಲಿ ಹಣವಿಲ್ಲ ಎಂದು ಬೊಬ್ಬೆ ಹೊಡೆಯುವ ವಿರೋಧ ಪಕ್ಷದವರಿಗೆ ಒಂದು ಬಾರಿ ಸಿಂದಗಿ ಸುತ್ತಿ ನೋಡಲಿ ಎಂದರು.
ಕಾರ್ಯಕ್ರಮದ ಸಾನಿಧ್ಯವನ್ನು ಶ್ರೀಮಠ ನಿತ್ಯಾನಂದ ಮಹಾರಾಜರು ವಹಿಸಿದ್ದರು. ಕಸಾಪ ಜಿಲ್ಲಾಧ್ಯಕ್ಷ ಹಾಸಿಂಪೀರ ವಾಲಿಕಾರ, ತಾಲೂಕಾಧ್ಯಕ್ಷ ವಾಯ್.ಸಿ.ಮಯೂರ, ಕುಮಾರ ದೇಸಾಯಿ, ಗುರುಗೌಡ ಬಿರಾದಾರ , ಡಾ.ಮಹಾಂತೇಶ ಹಿರೇಮಠ, ಅಮಿರಂಜಾನ ಮುಜಾವರ, ನಾಗೇಶ ಪತ್ತಾರ, ಶಶಿ ಗಾಯಕವಾಡ, ರಮೇಶ ಭಂಟನೂರ, ಗುರಣ್ಣ ಹುಮನಾಬಾದ, ಶಶಿಕಲಾ ಅಂಗಡಿ, ಶೇಕಪ್ಪ ಅಂಗಡಿ, ಕುಪೇಂದ್ರಗೌಡ ಬಿರಾದಾರ, ಅನಿಲಕುಮಾರ ದೊಡಮನಿ, ವಿಜಯ ಚವ್ಹಾಣ, ಶರಣಪ್ಪ ವಾರದ, ಶಿವಬಸವ ಅಂಗಡಿ, ಪುಟ್ಟು ದೇಸಾಯಿ, ಮಹೇಶ ಸಾವಳಸಂಗ, ಮಹಾಂತೇಶ ಪೂಜಾರಿ, ಈರಯ್ಯ ಹಿರೇಮಠ, ಅಪ್ಪು ರಾಠೋಡ, ಈರಣ್ಣ ನಾಯ್ಕೋಡಿ ಸೇರಿದಂತೆ ಶ್ರೀಮಠದ ಭಕ್ತರು ಇದ್ದರು.

