ಉದಯರಶ್ಮಿ ದಿನಪತ್ರಿಕೆ
ಚಿಮ್ಮಡ: ಕನ್ನಡ ಚಲನಚಿತ್ರರಂಗದ ಅಪ್ಪು, ಕರ್ನಾಟಕ ರತ್ನ ದಿ; ಪವರ್ಸ್ಟಾರ ಪುನೀತರಾಜಕುಮಾರ ರವರ ೫೧ನೇ ಜನ್ಮದಿನಾಚರಣೆಯನ್ನು ಅವರ ಅಭಿಮಾನಿ ಬಳಗದವರಿಂದ ಸಂಭ್ರಮದಿಂದ ಆಚರಿಸಲಾಯಿತು.
ಚಿಮ್ಮಡ ಗ್ರಾಮದ ಬಸ್ ನಿಲ್ದಾಣದ ಆವರಣದಲ್ಲಿ ಮಂಗಳವಾರ ಮುಂಜಾನೆ ಪುನಿತ್ ಅಭಿಮಾನಿಗಳಾದ ಶ್ರೀಶೈಲ ಬಗನಾಳ, ಮುಸ್ತಾಕ ಯಾದವಾಡರವರಿಂದ ಆಯೋಜಿಸಲಾಗಿದ್ದ ಜನ್ಮದಿನಾಚರಣೆ ಕಾರ್ಯಕ್ರಮಕ್ಕೆ ಸ್ಥಳಿಯ ರಘುನಾಥ ಪ್ರೀಯ ಸಾಧು ಮಹಾರಾಜರ ಮಠದ ಶ್ರೀ ಜನಾರ್ಧನ ಮಹಾರಾಜರು ಕೇಕ್ ಕತ್ತರಿಸುವ ಮೂಲಕ ಚಾಲನೆ ನೀಡಿದರು.
ನಂತರ ನೂರಾರು ಜನರಿಗೆ ಸಿಹಿ, ತಂಪು ಶರಬತ್ ವಿತರಿಸಲಾಯಿತು. ಸಾಯಂಕಾಲ ದೀಪ ಬೆಳಗುವ ಮೂಲಕ ಗೌರವ ಸಲ್ಲಿಸಲಾಯಿತು. ಗ್ರಾಪಂ. ಮಾಜಿ ಅಧ್ಯಕ್ಷ ಶಂಕರ ಬಟಕುರ್ಕಿ, ಗುರುಪಾದ ಉರಭಿನವರ, ಬಸವರಾಜ ಮಮದಾಪೂರ, ಪೀರಸಾಬ ನದಾಫ, ಸಿದ್ದು ಯಮಗರಣಿ ಸೇರಿದಂತೆ ನೂರಾರು ಜನ ಅಭಿಮಾನಿ ಬಳಗದ ಸದಸ್ಯರು ಉಪಸ್ಥಿತರಿದ್ದರು.

