ಪ.ಜಾ-ಪ.ಪಂಗಡ ತಾಲೂಕಾ ಮಟ್ಟದ ನೌಕರರ ಸಮಾವೇಶದಲ್ಲಿ ಶಾಸಕ ಯಶವಂತರಾಯಗೌಡ ಅಭಿಮತ
ಉದಯರಶ್ಮಿ ದಿನಪತ್ರಿಕೆ
ಇಂಡಿ: ನೌಕರರು ಸಮರ್ಪಣಾ ಭಾವದಿಂದ ಕೆಲಸ ನಿರ್ವಹಿಸಿದರೆ ದೇಶಕ್ಕೆ ಒಳ್ಳೆಯದಾಗುತ್ತದೆ. ಪ.ಜಾ , ಪ.ಪಂಗಡ ನೌಕರರ ಬಡ್ತಿಯಲ್ಲಿ ಕಾಂಗ್ರೆಸ್ ಸರಕಾರ ಹೆಚ್ಚು ಸಹಾಯ ಮಾಡಿದೆ ಎಂದು ಶಾಸಕ ಯಶವಂತರಾಯಗೌಡ ಪಾಟೀಲರು ಹೇಳಿದರು.
ನಗರದ ಗುರುಭವನದಲ್ಲಿ ರಾಜ್ಯ ಪ.ಜಾ, ಪ ಪಂಗಡ ಸಮನ್ವಯ ಸಮಿತಿ ಇಂಡಿ ತಾಲೂಕಾ ಶಾಖೆ ಹಮ್ಮಿಕೊಂಡ ತಾಲೂಕಾ ಮಟ್ಟದ ನೌಕರರ ಸಮಾವೇಶಹಾಗೂ ನೂತನವಾಗಿ ಆಯ್ಕೆಯಾದ ಪದಾಧಿಕಾರಿಗಳಿಗೆ ಅಭಿನಂದನೆ ಮತ್ತು ನಿವೃತ್ತ ನೌಕರರಿಗೆ ಗೌರವ ಸನ್ಮಾನ ಕಾರ್ಯಕ್ರಮದಲ್ಲಿ ಮಾತನಾಡಿದರು.
ಮೇಲು ಕೀಳು ಎಂಬ ಭಾವನೆ ಬದಿಗಿಟ್ಟು ಸೈದ್ದಾಂತುಕ ವೈಚಾರಿಕ ಚಿಂತನೆ ಇಟ್ಟುಕೊಂಡು ಬದುಕು ಸಾಗಿಸಬೇಕು. ಬುದ್ದ ಬಸವ ಅಂಬೇಡಕರ ತತ್ವಗಳ ಆಶಯದಂತೆ ಆಡಳಿತ ನಡೆಸಿ ಸರ್ವರನ್ನು ಪ್ರೀತಿಸುವ ಗುಣ ಹೊಂದಬೇಕು ಎಂದರು.
ತಾಲೂಕಾ ಅಧ್ಯಕ್ಷ ಬಿ.ಎಂ.ವಠಾರ, ರಾಜ್ಯಾಧ್ಯಕ್ಷ ಡಿ.ಶಿವಶಂಕರ, ಉಪಾಧ್ಯಕ್ಷ ಆರ್ ಮೋಹನ, ರಾಜ್ಯ ಪ್ರಧಾನ ಕಾರ್ಯದರ್ಶಿ ಡಾ. ವಿಜಯಕುಮಾರ, ಎಂ.ಬಿ.ಶಿವಕುಮಾರ, ಜಿಲ್ಲಾದ್ಯಕ್ಷ ಬಿ.ಎಚ್.ನಾಡಗೀರಿ ಮಾತನಾಡಿದರು.
ಎಸ್.ಆರ್.ನಡಗಡ್ಡಿ, ತಾಲೂಕಾ ನೌಕರರ ಸಂಘದ ಅಧ್ಯಕ್ಷ ಬಸವರಾಜ ರಾಹೂರ, ಎಸ್.ವಿ.ಹರಳಯ್ಯ, ಬುದ್ದವ್ವ ಕಾಳೆ, ಎ.ಎಸ್.ಪಾಟೀಲ, ಡಿ.ಸಿ.ಹರಿಜನ, ಪ್ರಶಾಂತ ಕಾಳೆ ಡಾ. ಕಾಂತು ಇಂಡಿ, ವಿ.ಜಿ.ಕಲ್ಮನಿ, ನಿಜಣ್ಣಾ ಕಾಳೆ, ಹುಚ್ಚಪ್ಪ ಶಿವಶರಣ, ವಿಜಯಕುಮಾರ ಪೋಳ, ಉಮೇಶ ಭಜಂತ್ರಿ, ಸದಾನಂದ ಈರನಕೇರಿ, ಸುಭಾಸ ಲಮಾಣಿ, ಪಿ.ಬಿ.ಪುಜಾರಿ, ದತ್ತು ದೇವರಮನಿ, ಎಸ್.ಎನ್.ಕೋಳಿ, ದುಂಡಪ್ಪ ಹರಿಜನ, ಚಂದ್ರು ರಾಠೋಡ, ಮಂಜುನಾಥ ನಾಯ್ಕೋಡಿ, ಚಂದ್ರಕಲಾ ಕಾಳೆ, ಚೌಡಮ್ಮ ತೊರವಿ ಮತ್ತಿತರಿದ್ದರು.

