ಉದಯರಶ್ಮಿ ದಿನಪತ್ರಿಕೆ
ಜಮಖಂಡಿ: ಇಂದಿನ ಆಧುನಿಕ ಯುಗದಲ್ಲಿ ಮಹಿಳೆಯರು ಎಲ್ಲಾ ರಂಗದಲ್ಲಿ ಮುಂದೆ ಬಂದಿದ್ದಾರೆ. ಸಮಾಜದಲ್ಲಿ ಅವರ ಪಾತ್ರ ತುಂಬಾ ಮಹತ್ವದಾಗಿದೆ. ಪ್ರತಿಯೊಂದು ಕ್ಷೇತ್ರದಲ್ಲಿ ಮಹಿಳೆಯರು ಧೈರ್ಯದಿಂದ ಮುಂದೆ ಬರಬೇಕು ಎಂದು ಜಮಖಂಡಿಯ ಸಿಡಿಪಿಒ ಆನಂದ ಪಿ. ಹೇಳಿದರು.
ನಗರದ ಅಂಜುಮನ್ ಶಾದಿ ಮಹಲ್ ಗಲಗಲಿ ಆರ್ಸಿಯಲ್ಲಿ ಹಮ್ಮಿಕೊಂಡಿದ್ದ ಕಾರ್ಮೆಲ್ ಆಶಿಷ ಚಾರಿಟೇಬಲ್ ಟ್ರಸ್ಟ್ ಅಡಕುರು ಶಾಖೆ, ಜಮಖಂಡಿಯಲ್ಲಿ ಅಂತರಾಷ್ಟ್ರೀಯ ಮಹಿಳಾ ದಿನಾಚರಣೆಯನ್ನು ಆಚರಿಸಲಾಯಿತು.
ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ನ್ಯಾಯವಾದಿ ಫಾ. ಸುಮನ್ ಬಾಲೂ ಮಾತನಾಡಿ, ಮಹಿಳೆಯರು ಕುಟುಂಬದ ಜವಾಬ್ದಾರಿಯನ್ನು ನಿರ್ವಹಿಸುವುದರ ಜೊತೆಗೆ ಸಮಾಜದಲ್ಲಿ ಮಹತ್ವದ ಪಾತ್ರವನ್ನು ವಹಿಸುತ್ತಿದ್ದಾರೆ ಎಂದು ಹೇಳಿದರು.
ಫಾ.ಪೀಟರ್ ಆಶೀರ್ವಾದ ಮಾತನಾಡಿ, ಮಹಿಳಾ ಸ್ವಸಹಾಯ ಗುಂಪುಗಳು ಆರ್ಥಿಕ ಹಾಗೂ ಸಾಮಾಜಿಕ ಪ್ರಗತಿಯನ್ನು ಸಾಧಿಸುತ್ತಿರುವುದನ್ನು ಕಂಡು ಮೆಚ್ಚುಗೆಯ ಮಾತುಗಳನ್ನು ಆಡಿದರು, ವೇದಿಕೆಯ ಮೇಲಿದ್ದ ಅತಿಥಿಗಳು ಮಹಿಳಾ ಸಬಲೀಕರಣದ ಕುರಿತು ಮಾತನಾಡಿದರು.
ಜಮಖಂಡಿ ತಾಲೂಕಿನ ವಿವಿಧ ಗ್ರಾಮಗಳ 54 ಸ್ವಸಹಾಯ ಗುಂಪುಗಳ ಪ್ರತಿನಿಧಿಗಳು, ಸದಸ್ಯರು ಸೇರಿ ಸುಮಾರು 500 ಹೆಚ್ಚು ಮಹಿಳೆಯರು ಭಾಗವಹಿಸಿದರು.ಮಹಿಳೆಯರ ಸಾಂಸ್ಕೃತಿಕ ನೃತ್ಯ ಕಾರ್ಯಕ್ರಮಗಳು ಕಾರ್ಯಕ್ರಮಕ್ಕೆ ವಿಶೇಷ ಕಳೆ ತಂದವು. ಈ ಒಂದು ಕಾರ್ಯಕ್ರಮದ ಅಧ್ಯಕ್ಷತೆಯನ್ನು ರೇಷ್ಮಾ ಕಾಂಬಳೆ ವಹಿಸಿದ್ದರು, ಸುಮಿತ್ರಾ ಅಂತೋನಿ, ಡಾಕ್ಟರ್ ಮಾಣಿಕ್ಯ, ಶೋಭಾ ಬಿಳ್ಳೂರ್, ದೊರೆತಿ ಆಶಾದೀಪ, ಮಂಜುನಾಥ್ ಹಾದಿಮನಿ, ಮುತ್ತಪ್ಪ ಹರಿಜನ್, ಸಿಸ್ಟರ್ ಸಿಬಿ ಫಿಲಪ ವೇದಿಕೆ ಮೇಲಿದ್ದರು,ಸಿಸ್ಟರ್ ಜಯಾ ಪ್ರಾರಂಭಿಕ ಭಾಷಣ ಮಾಡಿದರು.
ಸುಮಿತ್ರಾ ಬೋರಗಿ ನಿರೂಪಣೆ ಮಾಡಿದರು, ಪ್ರೀತಿ ಕಾಂಬಳೆ ವಾರ್ಷಿಕ ವರದಿ ವಾಚಿಸಿದರು ಮತ್ತು ತೇಜಸ್ವಿನಿ ಸ್ವಾಗತಿಸಿದರು.

