Close Menu
  • ಮುಖಪುಟ
  • (ರಾಜ್ಯ ) ಜಿಲ್ಲೆ
  • ವಿಶೇಷ ಲೇಖನ
  • ಸಾಹಿತ್ಯ
  • ಆರೋಗ್ಯ
  • ಚಿಂತನ
  • ಪ್ರೇಮಲೋಕ
  • ದಿನಪತ್ರಿಕೆ
  • ಸಂಪರ್ಕಿಸಿ

Subscribe to Updates

Get the latest creative news from FooBar about art, design and business.

What's Hot

2028ಕ್ಕೆ ರಾಜ್ಯದಲ್ಲಿ ಬಿಜೆಪಿ ಅಧಿಕಾರಕ್ಕೆ :ವಿಜಯೇಂದ್ರ ಸಿಎಂ

ಬಿಸಿಲು ತಣಿಸಲು ಎಳನೀರು, ಕಲ್ಲಂಗಡಿಗೆ ಮೊರೆ ಹೋದ ಜನತೆ

ಸರ್ಕಾರಿ ಆಸ್ಪತ್ರೆಗಳಲ್ಲಿ ಎಚ್‌ಪಿವಿ ಲಸಿಕೆ ಲಭ್ಯ :ಡಾ.ಮುಕುಂದ

Facebook X (Twitter) Instagram
  • ಮುಖಪುಟ
  • (ರಾಜ್ಯ ) ಜಿಲ್ಲೆ
  • ವಿಶೇಷ ಲೇಖನ
  • ಸಾಹಿತ್ಯ
  • ಆರೋಗ್ಯ
  • ಚಿಂತನ
  • ಪ್ರೇಮಲೋಕ
  • ದಿನಪತ್ರಿಕೆ
  • ಸಂಪರ್ಕಿಸಿ
Facebook X (Twitter) Instagram YouTube WhatsApp
udayarashminews.comudayarashminews.com
  • ಮುಖಪುಟ
  • (ರಾಜ್ಯ ) ಜಿಲ್ಲೆ
  • ವಿಶೇಷ ಲೇಖನ
  • ಸಾಹಿತ್ಯ
  • ಆರೋಗ್ಯ
  • ಚಿಂತನ
  • ಪ್ರೇಮಲೋಕ
  • ದಿನಪತ್ರಿಕೆ
  • ಸಂಪರ್ಕಿಸಿ
udayarashminews.comudayarashminews.com
Home»(ರಾಜ್ಯ ) ಜಿಲ್ಲೆ»ಬಂಗಾರದಂತ ಭೂಮಿ ಮಾರಾಟ ಮಾಡಬೇಡಿ
(ರಾಜ್ಯ ) ಜಿಲ್ಲೆ

ಬಂಗಾರದಂತ ಭೂಮಿ ಮಾರಾಟ ಮಾಡಬೇಡಿ

By Updated:No Comments3 Mins Read
Facebook Twitter Pinterest LinkedIn Telegram WhatsApp
Share
Facebook Twitter LinkedIn Email Telegram WhatsApp

ಬೃಹತ್, ಮಧ್ಯಮ ಕೈಗಾರಿಕೆ, ಮೂಲಸೌಕರ್ಯ ಅಭಿವೃದ್ಧಿ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಡಾ. ಎಂ.ಬಿ. ಪಾಟೀಲ ರೈತರಿಗೆ ಮನವಿ

ಉದಯರಶ್ಮಿ ದಿನಪತ್ರಿಕೆ

ವಿಜಯಪುರ: ಈ ಭಾಗದ ಭೂಮಿ ಬಂಗಾರವಿದ್ದಂತೆ. ಅದನ್ನು ಯಾರೂ ಮಾರಾಟ ಮಾಡಬಾರದು ಎಂದು ಬೃಹತ್ ಮತ್ತು ಮಧ್ಯಮ ಕೈಗಾರಿಕೆ, ಮೂಲಸೌಲಭ್ಯ ಅಭಿವೃದ್ಧಿ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಎಂ. ಬಿ. ಪಾಟೀಲ ಅವರು ಹೇಳಿದರು.
ಶನಿವಾರ ತಿಕೋಟಾ ತಾಲೂಕಿನ ರಾಂಪೂರ ಗ್ರಾಮದ ಸರ್ಕಾರಿ ಕನ್ನಡ ಗಂಡು ಮಕ್ಕಳ ಶಾಲಾ ಆವರಣದಲ್ಲಿ ನೂತನ ಅಂಗನವಾಡಿ ಕಟ್ಡಡ, ಕ್ರೀಡಾ ಸಲಕರಣೆ, ಎಪಿಎಂಸಿ ಗೋದಾಮು ಉದ್ಘಾಟನೆ ಹಾಗೂ ಚಂದ್ರಗಿರಿ ಘಟಿವಾಳೇಶ್ವರ ದೇವಸ್ಥಾನ ಜೀರ್ಣೋದ್ಧಾರ ಮತ್ತು ವಿವಿಧ ಕಟ್ಟಡ ಶಂಕುಸ್ಥಾಪನೆಯ ಕಾರ್ಯಕ್ರಮದ ಸಸಿಗೆ ನೀರು ಉಣಿಸುವದರ ಮೂಲಕ ಉದ್ಘಾಟಿಸಿ ಅವರು ಮಾತನಾಡಿದರು.
ಕುಡಿಯಲು ನೀರಿನ ಕೊರತೆ ಇದ್ದ ಈ ಭಾಗದಲ್ಲಿ ಕಳೆದ ಒಂದು ದಶಕದಲ್ಲಿ ನೀರಾವರಿಯಿಂದಾಗಿ ಅಂತರ್ಜಲ ವೃದ್ಧಿಯಾಗಿದೆ. ರೈತರು ಕೃಷಿ, ತೋಟಗಾರಿಕೆಯಲ್ಲಿ ತೊಡಗುವ ಮೂಲಕ ಆರ್ಥಿಕವಾಗಿ ಸದೃಢರಾಗುತ್ತಿದ್ದಾರೆ. ಈಗ ಬಾಬಾನಗರ ಬಳಿ ಜಲಾಶಯ ಕಟ್ಟಲಾಗುವುದು. ಇದರಿಂದ ಈಗಾಗಲೇ ಹೆಚ್ಚಾಗಿರುವ ಭೂಮಿಯ ಬೆಲೆ ಮತ್ತಷ್ಟು ಹೆಚ್ಚಾಗಲಿದೆ. ಬಂಗಾರ ಖರೀದಿ ಮಾಡಬಹುದು. ಆದರೆ, ಭೂಮಿ ಮಾರಾಟ ಮಾಡಿದರೆ ಮತ್ತೆ ಖರೀದಿಸಲು ಸಾಧ್ಯವಿಲ್ಲ. ಹೀಗಾಗಿ ರೈತರು ತಮ್ಮ ಅಮೂಲ್ಯವಾದ ಭೂಮಿಯನ್ನು ಮಾರಾಟ ಮಾಡಬಾರದು ಎಂದು ಸಚಿವರು ರೈತರಿಗೆ ಕಿವಿಮಾತು ಹೇಳಿದರು.
ಇಲ್ಲಿನ ಮಠದ ಜೀರ್ಣೋದ್ಧಾರ ಬಹಳ ದಿನಗಳ ಬೇಡಿಕೆಯಾಗಿತ್ತು. ಗ್ರಾಮದ ಸಾರ್ವಜನಿಕರ ಆಸೆಯಂತೆ ೨೦ ಲಕ್ಷ ರೂ. ವೆಚ್ಚದಲ್ಲಿ ಜೀರ್ಣೋದ್ಧಾರಕ್ಕಾಗಿ ಕ್ರಮ ವಹಿಸಲಾಗುವುದು.ಮಠದ ಹತ್ತಿರ ೨೦೨೫-೨೬ನೇ ಸಾಲಿನ ವಾರ್ಷಕ ಕ್ರಿಯಾ ಯೋಜನೆಯಡಿಲ್ಲಿ ಸುಮಾರು ೨೦.೫೫ ಲಕ್ಷ ರೂ.ವೆಚ್ಚದಲ್ಲಿ ನಿರ್ಮಾಣವಾಗಿರುವ ಗೋದಾಮು ಈ ಗೋದಾಮು ಅನ್ಯ ಕರ್ತವ್ಯಕ್ಕೂ ಬಳಸಿಕೊಳ್ಳಬಹುದಾಗಿದೆ ಎಂದು ಅವರು ಹೇಳಿದರು. ಸುಸಜ್ಜಿತಗವಾದ ಅಂಗನವಾಡಿ ಕಟ್ಟಡ ನಿರ್ಮಿಸಲಾಗಿದ್ದು, ಜಪಾನಿನ ಕ್ರೋನ್ಸ್ ಕಂಪನಿಯವರು ಸಿಎಸ್.ಆರ್ ಅನುದಾನದಡಿ ಆಟದ ಮೈದಾನ ನಿರ್ಮಾಣ ಮಕ್ಕಳಿಗಾಗಿ ಕ್ರೀಡಾ ಸಲಕರಣೆ ನಿಡಿದ್ದಾರೆ. ಮತಕ್ಷೇತ್ರದ ಎಲ್ಲ ಸರಕಾರಿ ಶಾಲೆಗಳಲ್ಲಿ ಸಿಎಸ್‌ಆರ್ ಅನುದಾನದಲ್ಲಿ ಕ್ರೀಡಾ ಸಲಕರಣೆ, ಕಟ್ಟಡ ನಿರ್ಮಾಣಕ್ಕೆ ಆದ್ಯತೆ ನೀಡಲಾಗಿದೆ ಎಂದು ಸಚಿವ ಎಂ. ಬಿ. ಪಾಟೀಲ ಹೇಳಿದರು.
ನೀರು ಕೊಟ್ಟ ಎಂ.ಬಿ. ಪಾಟೀಲರನ್ನು ನೆನಪಿಟ್ಟುಕೊಳ್ಳುವುದು ನಿಮ್ಮ ಜವಾಬ್ದಾರಿ. ೩೬೦೦ ಕೋಟಿ ರೂ. ನೀಡಿ, ತುಬಚಿ-ಬಬಲೇಶ್ವರ ಏತ ನೀರಾವರಿ ಯೋಜನೆಯಡಿ ಅತೀ ಎತ್ತರದ ಪ್ರದೇಶಕ್ಕೆ ನೀರು ಕೊಟ್ಟಿದ್ದೇನೆ. ಎಲ್ಲರ ಆಶೀರ್ವಾದದಿಂದ ನೀರು ಕೊಟ್ಟಿದ್ದೇವೆ. ನೀರು ಕೊಟ್ಟಿದ್ದನ್ನು ಒಂದೆರೆಡು ದಿನ ನೆನಪಿನಲ್ಲಿಟ್ಟಿಕೊಳ್ಳುವುದಲ್ಲ. ಅದನ್ನು ಸಾವಿರಾರು ವರ್ಷಗಳ ಕಾಲ ನೆನಪಿನಲ್ಲಿಟ್ಟುಕೊಳ್ಳುವಂಥದ್ದು ಎಂದರು.
ನಾಲ್ಕೈದು ಜಿಲ್ಲೆಗಳ ಅನುದಾನ ತಿಕೋಟಾ ತಾಲೂಕಿಗೆ ತಂದ ಹಿರಿಮೆ
ಈ ಬಾಗದಲ್ಲಿ ನೀರಾವರಿ ಒಳಪಟ್ಟಿದ್ದರಿಂದ ಈಗ ಎಲ್ಲ ಸಮೃದ್ಧಿಯಾಗಿದೆ ನಾಲ್ಕೈದು ಜಿಲ್ಲೆಗಳಿಗೆ ಕೊಡುವ ಅನುದಾನವನ್ನು ಕೇವಲ ತಿಕೋಟಾ ತಾಲೂಕಿಗೆ ಕೊಡಿಸಿದ್ದೇನೆ. ಜೊತೆಗೆ ಎರಡು ಮಿನಿ ವಿಧಾನಸೌಧವನ್ನು ಕೊಡಿಸಿದ್ದೇನೆ ಎಂದ ಅವರು, ತನ್ಮೂಲಕ ಈ ಭಾಗದ ರೈತರಿಗೂ ಸಾಕಷ್ಟು ಸಮೃದ್ದಿಯಾಗಿದ್ದಾರೆ ಎಂದು ಹೇಳಿದರು.
ಶ್ರೀಗುರು ಘಟಿವಾಳೇಶ್ವರ ಮಠದ ಶ್ರೀ ವಿದ್ಯಾನಂದ ಓಂಕಾರಯ್ಯ ಪೂಜಾರಿ, ಕಾರ್ಯಕ್ರಮದಲ್ಲಿ ಆಶಿರ್ವವಚನ ನೀಡಿರು.
ಈ ಸಂದರ್ಭದಲ್ಲಿ ಶ್ರೀಗಳಾದ ನಿಜಗುಣಯ್ಯ ಚಂದ್ರಯ್ಯ ಹಿರೇಮಠ, ತಾಲೂಕು ಗ್ಯಾರಂಟಿ ಯೋಜನೆಗಳ ಅನುಷ್ಠಾನ ಸಮಿತಿ ಅಧ್ಯಕ್ಷ ಗುರುಗೌಡ ದಾಶ್ಯಾಳ, ತಹಸೀಲ್ದಾರ್ ಸುರೇಶ ಚವಲರ, ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಉಪನಿರ್ದೇಶಕ ಕೆ. ಕೆ. ಚವ್ಹಾಣ, ಸಿಡಿಪಿಓ ಎಸ್. ಸಿ. ಮ್ಯಾಗೇರಿ, ತಾಪಂ ಇಒ ಬಸವಂತರಾಯಗೌಡ ಬಿರಾದಾರ, ಎಪಿಎಂಸಿ ಜಂಟಿ ನಿರ್ದೇಶಕ ಅಲ್ಲಾಭಕ್ಷ, ತಾಪಂ ಮಾಜಿ ಅಧ್ಯಕ್ಷ ಸಿದ್ದು ಬೆಳಗಾವಿ, ಮುಖಂಡರಾದ ಭಾಗೀರಥಿ ತೇಲಿ, ಶ್ರೀಶೈಲ ತುಳಜನ್ನವರ, ಸಾಹೇಬಗೌಡ ಕೆಂಪವಾಡ, ರಾಜು ಬೀಳೂರ, ಬಸವರಾಜ ಬೀಳೂರ, ಮಲ್ಲಪ್ಪ ಹೊನವಾಡ, ವಿಜಯಾನಂದ ಹಿರೇಮಠ, ಗ್ರಾಮದ ಹಿರಿಯರು, ಮುಖಂಡರು, ಮಹಿಳೆಯರು, ಯುವಕರು, ಮಕ್ಕಳು ಉಪಸ್ಥಿತರಿದ್ದರು.

ರೈತರಿಂದ ಸಚಿವರಿಗೆ ಸನ್ಮಾನ

ತಿಕೋಟಾ ಬಾಗದಲ್ಲಿ ಸರ್ಕಾರವು ಜಲಸಂಗ್ರಹಾಲಯ ಮಂಜೂರಾತಿ ನೀಡಿದ ಹಿನ್ನೆಲೆಯಲ್ಲಿ ತಿಕೋಟಾದ ಬಸವೇಶ್ವರ ವೃತ್ತದಲ್ಲಿ ರೈತರು ಆಯೋಜಿಸಿದ ಸನ್ಮಾನ ಸಮಾರಂಭ ಕಾರ್ಯಕ್ರಮ ಮಾತನಾಡಿದ ಸಚಿವರು ತಿಕೋಟಾ ತಾಲೂಕಿನಲ್ಲಿ ನಿರಂತರವಾಗಿ ನೀರು ಲಭಿಸುವ ಹಿನ್ನೆಲೆಯಲ್ಲಿ ಬಾಬನಗರ ಗ್ರಾಮದ ಸಮೀಪದಲ್ಲಿರುವ ಸುಮಾರು ೨೨೮.೦೦ ಹೆಕ್ಟೇರ್ (೫೬೩.೦೦ ಏಕರ್) ಸರ್ಕಾರಿ ಭೂಮಿಯನ್ನು ಗುರುತಿಸಲಾಗಿದ್ದು, ಸಂಗ್ರಹಣಾ ಜಲಾಶಯ ನಿರ್ಮಾಣಕ್ಕೆ ಈಗಾಗಲೇ ಮಂಜೂರಾತಿ ದೊರತಿದ್ದು ಆ ಜಲಾಶಯದಲ್ಲಿ  ಸುಮಾರು  ೦.೬೭೨ ಖಿಒಅ ವರೆಗೆ ಸಾಮರ್ಥ್ಯ ಹೊಂದಿರುವ ಒಂದು ಸಂಗ್ರಹಣಾ ಜಲಾಶಯವನ್ನು ನಿರ್ಮಿಸಲು ಕ್ರಮ ವಹಿಸಲಾಗುತ್ತಿದೆ. ಮುಂದಿನ ದಿನಗಳಲ್ಲಿ ಭೂಮಿ ಪೂಜೆಗೆ ನೆರವೇರಿಸಿ ಸುಮಾರು ಎರಡುವರೆ ವರ್ಷಗಳಲ್ಲಿ ಜಲ ಸಂಗ್ರಹಾಲಯವನ್ನು ಲೊಕಾರ್ಪಣೆಗೊಳಿಸಲಾಗುವುದು. ಅದು ಅಲ್ಲದೆ ಮುಂದಿನ ದಿನಗಳಲ್ಲಿ ಸುಮಾರು ೧೫೬ ಹಳ್ಳಗಳಿಗೆ ನೀರು ತುಂಬಿಸಲು ಕೂಡ ಕ್ರಮ ವಹಿಸಲಾಗುವುದು ಎಂದು ಅವರು ಹೇಳಿದರು. 
ಈ ಸಂದರ್ಭದಲ್ಲಿ ರಾಮಸಿಂಗ್ ಸಾಹುಕಾರ ಮಸಳಿ, ಜುಗುನು ಮಹಾರಾಜ, ಸೋಮನಾಥ ಬಾಗಲಕೋಟ, ಆರ್.ಜಿ ತಾಜಪುರ, ಅಲ್ತಾಪ ಬಾಗವಾನ, ವಕೀಲರಾದ ಮೆಂಡೆಗಾರ,ಗುದಗೆನ್ನವರ ಯಾಕುಬ ಜತ್ತಿ, ಮಧುಕರ ಜಾಧವ, ರಾಘವೇಂದ್ರ ಕುಲಕರ್ಣಿ, ಡಿ.ಕೆ ಚವ್ಹಾಣ, ಅರ್ಜುನ ರಾಠೋಡ, ಶ್ರೀಮತಿ ಬಾಗೀರಥಿ ತೇಲಿ, ಮಲ್ಲು ಲೋಣಿ,ಈರಣಗೌಡ ರುದ್ರಗೌಡ, ಗುರು ಮಾಳಿ, ಬಸಯ್ಯ ವಿಭೂತಿ, ರಾಮು ದೇಸಾಯಿ, ಸಿದ್ದು ಡಂಗನವರ, ಸಿದ್ದನಗೌಡ ರುದ್ರಗೌಡ, ಬಸವರಾಜ ನಿಡೋಣಿ, ಪ್ರಶಾಂತ ಝಂಡೆ ಹಾಗೂ ಇತರರು ಉಪಸ್ಥಿತರಿದ್ದರು.
BIJAPUR NEWS bjp public public news udaya rashmi Udayarashmi today newspaper udayarashminews.com
Share. Facebook Twitter Pinterest Email Telegram WhatsApp
  • Website

Related Posts

2028ಕ್ಕೆ ರಾಜ್ಯದಲ್ಲಿ ಬಿಜೆಪಿ ಅಧಿಕಾರಕ್ಕೆ :ವಿಜಯೇಂದ್ರ ಸಿಎಂ

ಬಿಸಿಲು ತಣಿಸಲು ಎಳನೀರು, ಕಲ್ಲಂಗಡಿಗೆ ಮೊರೆ ಹೋದ ಜನತೆ

ಸರ್ಕಾರಿ ಆಸ್ಪತ್ರೆಗಳಲ್ಲಿ ಎಚ್‌ಪಿವಿ ಲಸಿಕೆ ಲಭ್ಯ :ಡಾ.ಮುಕುಂದ

ಮಕ್ಕಳಿಗೆ ಸಂಸ್ಕಾರಯುತ ಶಿಕ್ಷಣ ನೀಡಿ :ಮಹಾಲಿಂಗ ಶ್ರೀ

Add A Comment

Leave A Reply Cancel Reply

Categories
  • (ರಾಜ್ಯ ) ಜಿಲ್ಲೆ
  • Uncategorized
  • ಆರೋಗ್ಯ
  • ಇತರೆ
  • ಕಾವ್ಯರಶ್ಮಿ
  • ಚಿಂತನ
  • ದಿನಪತ್ರಿಕೆ
  • ಪುಸ್ತಕ ಪರಿಚಯ
  • ಪ್ರೇಮಲೋಕ
  • ಭಾವರಶ್ಮಿ
  • ರಾಷ್ಚ್ರ
  • ವಿಜಯಪುರ
  • ವಿದ್ಯಾರ್ಥಿ ನಿಧಿ
  • ವಿಶೇಷ ಲೇಖನ
  • ಸಾಹಿತ್ಯ
  • ಸಿನಿಮಾ
  • ಹೊತ್ತಿಗೆ ಹೊರಣ
Recent Posts
  • 2028ಕ್ಕೆ ರಾಜ್ಯದಲ್ಲಿ ಬಿಜೆಪಿ ಅಧಿಕಾರಕ್ಕೆ :ವಿಜಯೇಂದ್ರ ಸಿಎಂ
    In (ರಾಜ್ಯ ) ಜಿಲ್ಲೆ
  • ಬಿಸಿಲು ತಣಿಸಲು ಎಳನೀರು, ಕಲ್ಲಂಗಡಿಗೆ ಮೊರೆ ಹೋದ ಜನತೆ
    In (ರಾಜ್ಯ ) ಜಿಲ್ಲೆ
  • ಸರ್ಕಾರಿ ಆಸ್ಪತ್ರೆಗಳಲ್ಲಿ ಎಚ್‌ಪಿವಿ ಲಸಿಕೆ ಲಭ್ಯ :ಡಾ.ಮುಕುಂದ
    In (ರಾಜ್ಯ ) ಜಿಲ್ಲೆ
  • ಮಕ್ಕಳಿಗೆ ಸಂಸ್ಕಾರಯುತ ಶಿಕ್ಷಣ ನೀಡಿ :ಮಹಾಲಿಂಗ ಶ್ರೀ
    In (ರಾಜ್ಯ ) ಜಿಲ್ಲೆ
  • ನೂತನ ತರಕಾರಿ ಮಾರುಕಟ್ಟೆ ನಿರ್ಮಿಸುವಂತೆ ಆಗ್ರಹಿಸಿ ಮನವಿ
    In (ರಾಜ್ಯ ) ಜಿಲ್ಲೆ
  • ಖೋಖೊ ದೈಹಿಕ ಸದೃಡತೆಯನ್ನು ಉತ್ತೇಜಿಸುವ ಸಾಂಪ್ರದಾಯಿಕ ಕ್ರೀಡೆ
    In (ರಾಜ್ಯ ) ಜಿಲ್ಲೆ
  • ಮಹಿಳೆ ಎಂದರೆ ತನ್ನದೇ ಆದ ಹೆಜ್ಜೆಯಲ್ಲಿ ನಡೆಯುವವಳು :ಭಾಗ್ಯಶ್ರೀ
    In (ರಾಜ್ಯ ) ಜಿಲ್ಲೆ
  • ಪಪೂ ಕಾಲೇಜು ಮಂಜೂರಾತಿಗೆ ಸಚಿವರಿಗೆ ಅಭಿನಂದನೆ
    In (ರಾಜ್ಯ ) ಜಿಲ್ಲೆ
  • ರಾಷ್ಟ್ರೀಯ ಲೋಕ್ ಅದಾಲತ್ :೮೩೯ ಪ್ರಕರಣಗಳು ಇತ್ಯರ್ಥ
    In (ರಾಜ್ಯ ) ಜಿಲ್ಲೆ
  • ಬಂಗಾರದಂತ ಭೂಮಿ ಮಾರಾಟ ಮಾಡಬೇಡಿ
    In (ರಾಜ್ಯ ) ಜಿಲ್ಲೆ
Editors Picks
Top Reviews
udayarashminews.com
Facebook X (Twitter) Instagram Pinterest Vimeo YouTube
  • ಮುಖಪುಟ
  • (ರಾಜ್ಯ ) ಜಿಲ್ಲೆ
  • ವಿಶೇಷ ಲೇಖನ
  • ಸಾಹಿತ್ಯ
  • ಆರೋಗ್ಯ
  • ಚಿಂತನ
  • ಪ್ರೇಮಲೋಕ
  • ದಿನಪತ್ರಿಕೆ
  • ಸಂಪರ್ಕಿಸಿ
© 2026 udayarashminews.com. Designed by udayarashmi news .

Type above and press Enter to search. Press Esc to cancel.