ಉದಯರಶ್ಮಿ ದಿನಪತ್ರಿಕೆ
ಇಂಡಿ: ಹಳೆಯ ಕಾಲದಲ್ಲಿ ಮಹಿಳೆಯರಿಗೆ ಶಿಕ್ಷಣ ಉದ್ಯೋಗ ಮತ್ತು ನಿರ್ಧಾರಗಳಲ್ಲಿ ಭಾಗವಹಿಸುವ ಅವಕಾಶ ಕಡಿಮೆ ಇತ್ತು. ಆದರೆ ಮಹಿಳೆಯರು ಶಿಕ್ಷಣ ರಾಜಕೀಯ ವಿಜ್ಞಾನ ಕ್ರೀಡೆ ಮತ್ತು ಉದ್ಯಮ ಸೇರಿದಂತೆ ಎಲ್ಲ ಕ್ಷೇತ್ರಗಳಲ್ಲಿ ದೊಡ್ಡ ಸಾಧನೆ ಮಾಡುತ್ತಿದ್ದಾರೆ ಎಂದು ಒಡಲ ಧ್ವನಿ ಮಹಿಳಾ ಒಕ್ಕೂಟದ ಅಧ್ಯಕ್ಷೆ ಡಾ. ಭುವನೇಶ್ವರಿ ಕಾಂಬಳೆ ಹೇಳಿದರು.
ನಗರದ ಬಾಬು ಜಗಜೀವನರಾಮ ಭವನದಲ್ಲಿ ಬುಧವಾರ ದೀಪಾಲಯ ಸಂಸ್ಥೆ ಹಾಗೂ ಸ್ವಸಹಾಯ ಸಂಘಗಳ ಒಕ್ಕೂಟಗಳ ಸಂಯುಕ್ತ ಆಶ್ರಯದಲ್ಲಿ ನಡೆದ ಮಹಿಳಾ ದಿನಾಚರಣೆ ಕಾರ್ಯಕ್ರಮದಲ್ಲಿ ಮಾತನಾಡಿದರು.
ಸಹೋದರಿ ಇವಿಲನ್ ಬೆನಿಸ್ ಮಾತನಾಡಿ ಮಹಿಳೆ ಎಂದರೆ ಕೇವಲ ಮನೆಯ ಜವಾಬ್ದಾರಿ ಮಾತ್ರವಲ್ಲ ಅವರು ತಾಯಿ ಶಿಕ್ಷಕಿ ನಾಯಕಿ ಮತ್ತು ಸಮಾಜ ನಿರ್ಮಾಣದ ಶಕ್ತಿ ಆದ್ದರಿಂಸ ಮಹಿಳೆಯರಿಗೆ ಸಮಾನ ಹಕ್ಕುಗಳು ಶಿಕ್ಷಣ ಗೌರವ ನೀಡುವದು ನಮ್ಮ ಪ್ರತಿಯೊಬ್ಬರ ಕರ್ತವ್ಯ ಎಂದರು.
ಸಹಾಯಕ ಗುರುಗಳು ಸಂತ ಅನ್ನಮ್ಮನವರ ದೇವಾಲಯ ವಿಜಯಪುರದ ಸ್ವಾಮಿ ಜೋನ್ ಕ್ರಾಸ್ತಾ, ದೀಪಾಲಯ ಸಂಸ್ಥೆ ನಿರ್ದೇಸಕಿ ಜೆಸಿಂತ ಮಚಾದೊ, ತಾಪಂ ಇಒ ಭೀಮಾಶಂಕರ ಕನ್ನೂರ, ದೇವಕಿ ಧುಮಕನಾಳ, ಏಸುಬಾಯಿ ಮೇಲಿನಕೇರಿ, ಭಿಮಾಶಂಕರ ಹರಳಯ್ಯ, ಕೆನರಾ ಬ್ಯಾಂಕಿನ ಬಂತೇಜಿ ಉಪಾಧ್ಯ, ಶಾರದಾ ಮಸಳಿ ಮಾತನಾಡಿದರು.
ವೇದಿಕೆಯ ಮೇಲೆ ಹಿಲಾರಿಯಾ ಪಿಂಟು, ಸುನಿತಾ ಸಾಲೋಟಗಿ, ಮಹಾದೇವಿ ಚನ್ನಿರಪ್ಪಗೋಳ, ಸಿದ್ದಮ್ಮ ಗುಣಕಿ, ಜಯಶ್ರೀ ಅಂಬಾರೆ, ಸವಿತಾ ಚವ್ಹಾಣ, ಯಲ್ಲವ್ವ ಮಾದರ ರಾಧಾ ನಿಂಬಾಳಕರ ಮತ್ತಿತರಿದ್ದರು.

