ಉದಯರಶ್ಮಿ ದಿನಪತ್ರಿಕೆ
ಆಲಮೇಲ: ಮಹಿಳೆಯರಿಗೆ ಸಿಕ್ಕ ಸಮಾನ ಅವಕಾಶ ಸರಿಯಾಗಿ ಸದುಪಯೋಗ ಪಡೆದುಕೊಳ್ಳಬೇಕು ಎಂದು ಶಾಸಕರ ಪತ್ನಿ, ಸಿಂದಗಿ ಇನ್ನರವೀಲ್ ಕ್ಲಬ್ ಅದ್ಯಕ್ಷೆ ನಾಗರತ್ನ ಮನಗೂಳಿ ಹೇಳಿದರು.
ಅವರು ಬಾನುವಾರ ಪಟ್ಟಣದ ನಿರ್ಮಲಾಯ ಸಮಾಜ ಸೇವಾ ಸಂಸ್ಥೆ ಹಾಗೂ ಬಾಂದವ್ಯ ಮಹಿಳಾ ಸ್ವಸಹಾಯ ಸಂಘಟನೆ ಒಕ್ಕೂಟದಿಂದ ಹಮ್ಮಿಕೊಂಡ ಅಂತರಾಷ್ಟ್ರೀಯ ಮಹಿಳಾ ದಿನಾಚರಣೆ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.
ಮನೆ ಗೆದ್ದು ಮಾರು ಗೆಲ್ಲು ಎನ್ನುವಂತೆ ಮಹಿಳೆಯರು ಮೊದಲು ಮನೆಯವರ ಮನಸು ಗೆದ್ದು ನಂತರ ಸಮಾಜ ನಾಡು ಗೆಲ್ಲುವಂತ ಸಾಧನೆ ಮಾಡಬೇಕು. ಬಾಲ್ಯ ವಿವಾಹ ತಡೆಗಟ್ಟಲು ಮಹಿಳೆಯರೆ ಮುಂದಾಗಬೇಕು ಎಂದು ಹೇಳಿದರು.
ಕೆನರಾ ಬ್ಯಾಂಕಿನ ಕ್ಷೇತ್ರಾಧಿಕಾರಿ ಓಂಕಾರ ಭೋಸಲೆ ಮಾತನಾಡಿ, ಕೆಂದ್ರ ಸರ್ಕಾರ ಸ್ವ ಉದ್ಯೋಗ ಮಾಡುವ ಮಹಿಳಾ ಸಂಘಟನೆಗಳಿಗೆ ಅನೇಕ ಸೌಲಭ್ಯ ಕಲ್ಪಿಸಿದೆ. ಅದಕ್ಕೆ ಸರಿಯಾಗಿ ಉದ್ಯೋಗ ಮಾಡುವ ಸಂಘಗಳಿಗೆ ಕೆನರಾ ಬ್ಯಾಂಕಿನಿಂದ 1 ಲಕ್ಷದಿಂದ 5 ಕೋಟಿ ವರೆಗೂ ಸಾಲ ನೀಡಲಾಗುತ್ತಿದೆ. ಅದಕ್ಕೆ ವಿಮಾ ಸೌಲಭ್ಯವು ಇದ್ದು ಇದರ ಸದುಪಯೋಗ ಪಡೆದುಕೊಂಡು ಸ್ವಾವಲಂಬಿಗಳಾಗಿ ಇನ್ನೊಬ್ಬರಿಗೆ ಪ್ರೇರಣೆಯಾಗಬೇಕು ಎಂದು ಹೇಳಿದರು.
ಟಿಪ್ಪು ಕ್ರಾಂತಿಸೇನೆಯ ರಾಜ್ಯಾಧ್ಯಕ್ಷ ದಸ್ತಗಿರ ಮುಲ್ಲಾ ಮಾತನಾಡಿ, ಮಹಿಳೆಯರಿಗೆ ಸಮಾನ ಅವಕಾಶ ಕಲ್ಪಿಸಲು ಹೋರಾಡಿದ 12ನೇ ಶತಮಾನದ ಬಸವಣ್ಣನವರು ಮತ್ತು ಅಂಬೇಡ್ಕರ ಕಂಡ ಕನಸು ಇಂದು ನನಸಾಗಿದೆ ಇದಕ್ಕೆ ಕಾರಣ ಅಂಬೇಡ್ಕರ ಕೊಟ್ಟ ಸಂವಿಧಾನದಿಂದ ಸಾದ್ಯವಾಗಿದೆ ಎಂದರು.
ಅದ್ಯಕ್ಷತೆ ವಹಿಸಿದ ಧಕ್ಷಿಣ ಭಾರತದ ಪ್ರಾಂತ್ಯಾಧಿಕಾರಿ ಶಿಜಿ ವರ್ಗಿಸ್, ಬಳಗಾನೂರದ ಶಾಂತಾಬಾಯಿ ಹುಲ್ಲೂರ ಮುಂತಾದವರು ಮಾತನಾಡಿದರು. ಬೆಂಗಳೂರಿನ ಮರಿಯಂ ನಿಲಯ ಶಾಲೆಯ ಮುಖ್ಯ ಶಿಕ್ಷಕಿ ಸಿಸಿಲಿಯಾ ಟಿರ್ಕಿ, ಎಳ್ರಲಿ ವಿನ್ನರಿಸಿ, ಕಾನಿಪ ತಾಲೂಕಾದ್ಯಕ್ಷ ಅವಧೂತ ಬಂಡಗಾರ, ಪತ್ರಕರ್ತ ಗಾಂದಿಗೌಡ ಪಾಟೀಲ ಉಪಸ್ಥಿತರಿದ್ದರು.
ನಿರ್ಮಲಾಲಯ ಸಮಾಜ ಸೇವಾ ಸಂಸ್ತೆಯ ಸಂಚಾಲಕಿ ಒಲಿವಾ ಸಲ್ಡಾನ, ಸಮಾಜ ಸೇವಕ ಆನಂದ ಕುಮಸಗಿ, ಅನುಸುಯಾ ಪ್ಯಾಟಿ ಮುಂತಾದವರು ಇದ್ದರು.
ನಂತರ ವಿವಿಧ ಗ್ರಾಮದ ಮಹಿಳಾ ಸಂಘಟನೆಗಳಿಂದ ನೃತ್ಯ, ರೂಪಕದಂತ ಸಂಸ್ಕೃತಿಕ ಕಾರ್ಯಕ್ರಮ ಜರುಗಿದವು. ಕಲಾವತಿ ಕುಮಸಗಿ ಸ್ವಾಗತಿಸಿದರು. ಪುಷ್ಪಾ ಮೂಲಿಮನಿ ನಿರೂಪಿಸಿದರು.

