Close Menu
  • ಮುಖಪುಟ
  • (ರಾಜ್ಯ ) ಜಿಲ್ಲೆ
  • ವಿಶೇಷ ಲೇಖನ
  • ಸಾಹಿತ್ಯ
  • ಆರೋಗ್ಯ
  • ಚಿಂತನ
  • ಪ್ರೇಮಲೋಕ
  • ದಿನಪತ್ರಿಕೆ
  • ಸಂಪರ್ಕಿಸಿ

Subscribe to Updates

Get the latest creative news from FooBar about art, design and business.

What's Hot

ಬಾಪೂಗೌಡ ಪಾಟೀಲ ಗೆ ಸನ್ಮಾನ

ದೇಶೀಯ ಕಲೆ-ಸಂಗೀತ ಮತ್ತು ಸಾಹಿತ್ಯ ಉಳಿಸಿ-ಬೆಳೆಸಿ :ಶಾಂತಾ

ಚುನಾವಣೆಗಳಲ್ಲಿ ಶೇ.೧೦೦ ಮತದಾನವಾಗದಿರೋದು ದುರದೃಷ್ಟಕರ

Facebook X (Twitter) Instagram
  • ಮುಖಪುಟ
  • (ರಾಜ್ಯ ) ಜಿಲ್ಲೆ
  • ವಿಶೇಷ ಲೇಖನ
  • ಸಾಹಿತ್ಯ
  • ಆರೋಗ್ಯ
  • ಚಿಂತನ
  • ಪ್ರೇಮಲೋಕ
  • ದಿನಪತ್ರಿಕೆ
  • ಸಂಪರ್ಕಿಸಿ
Facebook X (Twitter) Instagram YouTube WhatsApp
udayarashminews.comudayarashminews.com
  • ಮುಖಪುಟ
  • (ರಾಜ್ಯ ) ಜಿಲ್ಲೆ
  • ವಿಶೇಷ ಲೇಖನ
  • ಸಾಹಿತ್ಯ
  • ಆರೋಗ್ಯ
  • ಚಿಂತನ
  • ಪ್ರೇಮಲೋಕ
  • ದಿನಪತ್ರಿಕೆ
  • ಸಂಪರ್ಕಿಸಿ
udayarashminews.comudayarashminews.com
Home»ವಿಶೇಷ ಲೇಖನ»ಬೆಳಗಿನ ಪತ್ರಿಕೆ; ಜಗತ್ತಿನ ಕನ್ನಡಿ
ವಿಶೇಷ ಲೇಖನ

ಬೆಳಗಿನ ಪತ್ರಿಕೆ; ಜಗತ್ತಿನ ಕನ್ನಡಿ

By Updated:No Comments2 Mins Read
Facebook Twitter Pinterest LinkedIn Telegram WhatsApp
Share
Facebook Twitter LinkedIn Email Telegram WhatsApp

ಲೇಖನ
– ಮಲ್ಲಪ್ಪ. ಸಿ. ಖೊದ್ನಾಪೂರ (ತಿಕೋಟಾ)
ವಿಜಯಪುರ ಜಿಲ್ಲೆ

ಉದಯರಶ್ಮಿ ದಿನಪತ್ರಿಕೆ

ಜೇಮ್ಸ್ ಎಲ್ಲೀಸ್ ಅವರು, “ವೃತ್ತಪತ್ರಿಕೆಗಳು ಈ ಜಗತ್ತಿನ ಕನ್ನಡಿ ಇದ್ದಂತೆ” ಎಂದು ಹೇಳಿದ್ದಾರೆ. ಅಂದರೆ ವಿಶ್ವದೆಲ್ಲೆಡೆ ನಡೆದ ಘಟನೆ, ಪ್ರಚಲಿತ ಮತ್ತು ಮುಂದೆ ನಡೆಯಬಹುದಾದ ಸಂಗತಿಗಳ ಬಗ್ಗೆ ಮಾಹಿತಿ ನೀಡುವ ಒಂದು ಪರಿಣಾಮಕಾರಿ ಸಂವಹನ ಮತ್ತು ಮಾಧ್ಯಮವಾಗಿದೆ. ಪ್ರತಿಯೊಬ್ಬರೂ ಬೆಳಿಗ್ಗೆ ಎದ್ದ ಕೂಡಲೇ ಕೈಯಲ್ಲಿ ಟೀ ಅಥವಾ ಕಾಫಿ ಹಿಡಿದು ವೃತ್ತಪತ್ರಿಕೆಯನ್ನು ಒದುತ್ತಿರುವದನ್ನು ನಾವೆಲ್ಲರೂ ಕಂಡಿದ್ದೇವೆ. ರಾಜ್ಯ, ದೇಶ-ವಿದೇಶಗಳ ಸುದ್ದಿಗಳನ್ನು ಪ್ರತಿ ಮನೆಗೆ ತಲುಪಿಸುವ ಏಕೈಕ ಸಾಧನವೆಂದರೆ ಅದುವೇ ವೃತ್ತಪತ್ರಿಕೆ. ನಾವು ಇಡೀ ವಿಶ್ವದ ದಶ ದಿಕ್ಕುಗಳ (ನಾರ್ಥ, ಈಸ್ಟ್, ವೆಸ್ಟ್ & ಸೌಥ್) ದೈನಂದಿನ ದಿನಚರಿ ಮತ್ತು ಆಗಿ ಹೋದ ಘಟನೆಗಳ ಬಗ್ಗೆ ತಿಳಿಸುವ ಪತ್ರಿಕೆಯ ಕಾರ್ಯ ಶ್ಲಾಘನೀಯ. ನಮಗೆ ಜಗತ್ತಿನ ಎಲ್ಲ ಅಗು-ಹೋಗುಗಳ ಕುರಿತು ತಿಳಿಸಿಕೊಡುವುದೇ ವೃತ್ತಪತ್ರಿಕೆ. ಇಂದಿನ ಡಿಜಿಟಲ್ ಯುಗದಲ್ಲಿ ವೃತ್ತಪತ್ರಿಕೆಯು ಇ-ಪೇಪರ್, ಸಾಮಾಜಿಕ ಜಾಲತಾಣ ಮತ್ತು ವಿವಿಧ ವೆಬಸೈಟಗಳ ಮೂಲಕವೂ ತಮ್ಮ ಕಾರ್ಯವ್ಯಾಪ್ತಿಯನ್ನು ಹೆಚ್ಚಿಸುತ್ತಾ ಅತ್ಯಂತ ವಿಶ್ವಾಸಾರ್ಹ ಸಂಪರ್ಕ-ಸಂವಹನ ಮಾಧ್ಯಮವಾಗಿ ಪರಿಣಮಿಸಿದೆ.


ಇತಿಹಾಸ
೧೭೮೦ ರ ಜನೇವರಿ ೨೯ ರಂದು ದೇಶದ ರಾಜಧಾನಿಯಾಗಿದ್ದ ಕೋಲ್ಕತ್ತಾದಲ್ಲಿ ಜೇಮ್ಸ್ ಅಗಸ್ಟಸ್ ಹಿಕಿ ಎಂಬುವವರು ಮೊಟ್ಟಮೊದಲ ವೃತ್ತಪತ್ರಿಕೆ ‘ಬೆಂಗಾಲ್ ಗೆಜೆಟ್’ ನ್ನು ಪ್ರಾರಂಭಿಸಿದರು. ಈ ದಿನದ ಸವಿ ನೆನಪಿಗಾಗಿ ಪ್ರತಿ ವರ್ಷ ಜನೇವರಿ ೨೯ ರಂದು ಭಾರತೀಯ ವೃತ್ತ ಪತ್ರಿಕೆಯ ದಿನವನ್ನು ಆಚರಿಸಲಾಗುತ್ತಿದೆ. ಮುದ್ರಣ ಮಾಧ್ಯಮ, ಪತ್ರಿಕೋದ್ಯಮದ ಪ್ರಾಮುಖ್ಯತೆ ಮತ್ತು ಪತ್ರಕರ್ತರ ಅಮೂಲ್ಯವಾದ ಕೊಡುಗೆಯನ್ನು ಗೌರವಿಸುವ ಮತ್ತು ಸ್ಮರಿಸುವ ಸುದಿನವಾಗಿದೆ, ಡಿಜಿಟಲ್ ಯುಗದಲ್ಲಿ ನಮ್ಮ ಸಾಂಪ್ರದಾಯಿಕ ಪತ್ರಿಕೋದ್ಯಮದ ಕುರಿತು ಓದುಗರಲ್ಲಿ ಉತ್ತೇಜಿಸುವುದು ಮತ್ತು ಅರಿವು ಮೂಡಿಸುವದು ಈ ದಿನದ ಆಚರಣೆಯ ಪ್ರಮುಖ ಉದ್ಧೇಶವಾಗಿದೆ.
ಉದ್ಧೇಶ
ಪತ್ರಿಕೋದ್ಯಮದ ಇತಿಹಾಸ, ಅಭಿವ್ಯಕ್ತಿ ಸ್ವಾತಂತ್ರ್ಯ, ಮುದ್ರಣ ಮಾಧ್ಯಮದ ಮಹತ್ವವನ್ನು ಸಾರಲು ಈ ದಿನದ ಆಚರಣೆಯು ಪ್ರಮುಖ ಪಾತ್ರವನ್ನು ವಹಿಸುತ್ತದೆ. ಇಂದು ಪತ್ರಿಕೆಗಳು ತಮ್ಮ ಮೌಲ್ವಿಕ ಸುದ್ದಿ ಮತ್ತು ವಿಚಾರಧಾರೆಗಳ ಮೂಲಕ ಸಮಾಜದಲ್ಲಿ ಬದಲಾವಣೆಯನ್ನು ತರುವಲ್ಲಿ ತನ್ನದೇ ಆದ ಪಾತ್ರವನ್ನು ನಿರ್ವಹಿಸುತ್ತಿವೆ. ಅದರ ಜತೆಗೆ ಪತ್ರಕರ್ತರ ಹಕ್ಕುಗಳನ್ನು ರಕ್ಷಿಸುವಲ್ಲಿ ಈ ದಿನದ ಜಾಗೃತಿ ಅಗತ್ಯವಾಗಿದೆ. ಪ್ರತಿಯೊಬ್ಬರ ವಾಕ್ ಸ್ವಾತಂತ್ರ್ಯವನ್ನು ಎತ್ತಿ ಹಿಡಿಯುತ್ತಾ, ಸಾರ್ವಜನಿಕರಿಗೆ ನಿಖರವಾದ ಮಾಹಿತಿಯನ್ನು ತಲುಪಿಸುವಲ್ಲಿ ಪತ್ರಕರ್ತರ ಅಮೂಲ್ಯವಾದ ಪಾತ್ರವನ್ನು ಗೌರವಿಸುವುದು ಈ ದಿನದ ಆಚರಣೆಯ ಧ್ಯೇಯೋದ್ಧೇಶವಾಗಿದೆ. ರಾಷ್ಟçದಲ್ಲಿ ಮೊಟ್ಟಮೊದಲ ಪತ್ರಿಕೆಯನ್ನು ಆರಂಭಿಸಿದ ಜೇಮ್ಸ್ ಅಗಸ್ಟಸ್ ಹಿಕಿ ಅವರನ್ನು ‘ಭಾರತೀಯ ಪತ್ರಿಕೋದ್ಯಮದ ಪಿತಾಮಹ’ ಎಂದು ಪರಿಗಣಿಸಲಾಗಿದೆ.


ಪತ್ರಿಕಾ ದಿನದ ಮಹತ್ವ
ಪತ್ರಿಕೆಗಳಲ್ಲಿ ಪ್ರಕಟಗೊಳ್ಳುವ ವಿಚಾರಗಳು ಮತ್ತು ಪ್ರಚಲಿತ ಘಟನೆಗಳು ಇಡೀ ಜಗತ್ತಿನಲ್ಲಿ ನಡೆದು ಹೋದ ಸನ್ನಿವೇಶ, ಘಟನೆ ಮತ್ತು ಸಂದರ್ಭಗಳನ್ನು ತಿಳಿಸಿಕೊಡುತ್ತವೆ. ಅದರಲ್ಲೂ ವಿಶೇಷವಾಗಿ ಮಕ್ಕಳು ಪತ್ರಿಕೆಗಳನ್ನು ದೈನಂದಿನವಾಗಿ ಓದುವುದರಿಂದ ಓದುವ ಹವ್ಯಾಸ ಮತ್ತು ಸಂವಹನ ಕೌಶಲ್ಯ ವೃದ್ಧಿಸಿ ಗ್ರಹಿಕಾಶಕ್ತಿಯನ್ನು ಸುಧಾರಿಸುತ್ತವೆ. ಎಲ್ಲ ರಂಗಗಳ ಬಗ್ಗೆ ವಿಶೇಷ ಅಂಕಣಗಳ ಮೂಲಕ ವಿಶ್ಲೇಷಣಾತ್ಮಕ ಚಿಂತನೆಯನ್ನು ಪ್ರೋತ್ಸಾಹಿಸುತ್ತವೆ. ವೃತ್ತಪತ್ರಿಕೆಗಳು ಸಾರ್ವಜನಿಕ ಸಂವಾದವನ್ನು ಏರ್ಪಡಿಸಿ ಜನರಿಗೆ ಹೊಸ ಸಂಗತಿ, ವಿಷಯಗಳು ಮತ್ತು ಚರ್ಚೆಗಳ ಮೇಲೆ ಬೆಳಕು ಚೆಲ್ಲುತ್ತಿವೆ. ಆದ್ದರಿಂದ ಸಮಾಜವನ್ನು ಜಾಗೃತಗೊಳಿಸುವಲ್ಲಿ ಅತ್ಯಂತ ಪರಿಣಾಮಕಾರಿ ಮತ್ತು ಗಣನೀಯ ಕೊಡುಗೆ ನೀಡುತ್ತಿರುವ ವೃತ್ತಪತ್ರಿಕೆ ದಿನದಂದು ಪರ್ತಕರ್ತರ ಕಾರ್ಯವನ್ನು ಗೌರವಿಸುವದು ನಮ್ಮೆಲ್ಲರ ಆದ್ಯ ಕರ್ತವ್ಯವಾಗಿದೆ. ಈ ದಿನದಂದು ವಿಶೇಷ ಕಾರ್ಯಕ್ರಮಗಳನ್ನು ಹಮ್ಮಿಕೊಂಡು ವಿದ್ಯಾರ್ಥಿ, ಯುವಕರು ಮತ್ತು ಓದುಗರಲ್ಲಿ ವೃತ್ತಪತ್ರಿಕೆಯ ಪಾತ್ರ, ಮಹತ್ವ, ಪರ್ತಕರ್ತರ ಸೇವೆಯನ್ನು ಜನರಿಗೆ ಜನರಿಗೆ ತಿಳಿಸುವ ಕಾರ್ಯ ನಡೆಯಬೇಕಾಗಿದೆ. ಅದಕ್ಕಂತಲೇ ಪತ್ರಿಕೆಗಳಿಗೆ ‘ಜ್ಞಾನದ ಕಣಜ’ ಮತ್ತು ‘ಸತ್ಯದ ಪ್ರತಿಬಿಂಬ’ ಎಂತಲೂ ಕರೆಯಬಹುದು.

BIJAPUR NEWS bjp public public news udaya rashmi Udayarashmi today newspaper udayarashminews.com
Share. Facebook Twitter Pinterest Email Telegram WhatsApp
  • Website

Related Posts

ಬಾಪೂಗೌಡ ಪಾಟೀಲ ಗೆ ಸನ್ಮಾನ

ದೇಶೀಯ ಕಲೆ-ಸಂಗೀತ ಮತ್ತು ಸಾಹಿತ್ಯ ಉಳಿಸಿ-ಬೆಳೆಸಿ :ಶಾಂತಾ

ಚುನಾವಣೆಗಳಲ್ಲಿ ಶೇ.೧೦೦ ಮತದಾನವಾಗದಿರೋದು ದುರದೃಷ್ಟಕರ

25 ಶಾಸಕರ ನಿಗಮ-ಮಂಡಳಿ ಅಧ್ಯಕ್ಷ ಅವಧಿ ವಿಸ್ತರಣೆ

Add A Comment

Leave A Reply Cancel Reply

Categories
  • (ರಾಜ್ಯ ) ಜಿಲ್ಲೆ
  • Uncategorized
  • ಆರೋಗ್ಯ
  • ಇತರೆ
  • ಕಾವ್ಯರಶ್ಮಿ
  • ಚಿಂತನ
  • ದಿನಪತ್ರಿಕೆ
  • ಪುಸ್ತಕ ಪರಿಚಯ
  • ಪ್ರೇಮಲೋಕ
  • ಭಾವರಶ್ಮಿ
  • ರಾಷ್ಚ್ರ
  • ವಿಜಯಪುರ
  • ವಿದ್ಯಾರ್ಥಿ ನಿಧಿ
  • ವಿಶೇಷ ಲೇಖನ
  • ಸಾಹಿತ್ಯ
  • ಸಿನಿಮಾ
  • ಹೊತ್ತಿಗೆ ಹೊರಣ
Recent Posts
  • ಬಾಪೂಗೌಡ ಪಾಟೀಲ ಗೆ ಸನ್ಮಾನ
    In (ರಾಜ್ಯ ) ಜಿಲ್ಲೆ
  • ದೇಶೀಯ ಕಲೆ-ಸಂಗೀತ ಮತ್ತು ಸಾಹಿತ್ಯ ಉಳಿಸಿ-ಬೆಳೆಸಿ :ಶಾಂತಾ
    In (ರಾಜ್ಯ ) ಜಿಲ್ಲೆ
  • ಚುನಾವಣೆಗಳಲ್ಲಿ ಶೇ.೧೦೦ ಮತದಾನವಾಗದಿರೋದು ದುರದೃಷ್ಟಕರ
    In (ರಾಜ್ಯ ) ಜಿಲ್ಲೆ
  • 25 ಶಾಸಕರ ನಿಗಮ-ಮಂಡಳಿ ಅಧ್ಯಕ್ಷ ಅವಧಿ ವಿಸ್ತರಣೆ
    In (ರಾಜ್ಯ ) ಜಿಲ್ಲೆ
  • ಬೆಳಗಿನ ಪತ್ರಿಕೆ; ಜಗತ್ತಿನ ಕನ್ನಡಿ
    In ವಿಶೇಷ ಲೇಖನ
  • ಧರ್ಮ ಸುರಕ್ಷಿತವಾಗಿರುವವರೆಗೂ ರಾಷ್ಟ್ರ ಸುರಕ್ಷಿತ
    In (ರಾಜ್ಯ ) ಜಿಲ್ಲೆ
  • ದಿ. ಬಿ.ಎಸ್.ಪಾಟೀಲ ಮೇರುವ್ಯಕ್ತಿತ್ವ ಎಲ್ಲರಿಗೂ ಮಾದರಿ :ಪಾಟೀಲ
    In (ರಾಜ್ಯ ) ಜಿಲ್ಲೆ
  • ಡಾ. ಡಿ.ಎನ್.ಧರಿ ಗೆ “ರಾಷ್ಟ್ರೀಯ ಜ್ಞಾನಸಿರಿ” ಪ್ರಶಸ್ತಿ ಪ್ರದಾನ
    In (ರಾಜ್ಯ ) ಜಿಲ್ಲೆ
  • ತಾಲೂಕಾಸ್ಪತ್ರೆ ಮೇಲ್ದರ್ಜೆಗೇರಿಸಲು ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸುವೆ
    In (ರಾಜ್ಯ ) ಜಿಲ್ಲೆ
  • ಸಮಾಜದ ಸುವ್ಯವಸ್ಥೆಗೆ ಶ್ರಮಿಸುತ್ತಿರುವ ರಫೀ ಭಂಡಾರಿ
    In (ರಾಜ್ಯ ) ಜಿಲ್ಲೆ
Editors Picks
Top Reviews
udayarashminews.com
Facebook X (Twitter) Instagram Pinterest Vimeo YouTube
  • ಮುಖಪುಟ
  • (ರಾಜ್ಯ ) ಜಿಲ್ಲೆ
  • ವಿಶೇಷ ಲೇಖನ
  • ಸಾಹಿತ್ಯ
  • ಆರೋಗ್ಯ
  • ಚಿಂತನ
  • ಪ್ರೇಮಲೋಕ
  • ದಿನಪತ್ರಿಕೆ
  • ಸಂಪರ್ಕಿಸಿ
© 2026 udayarashminews.com. Designed by udayarashmi news .

Type above and press Enter to search. Press Esc to cancel.