ಉದಯರಶ್ಮಿ ದಿನಪತ್ರಿಕೆ
ಕೊಲ್ಹಾರ: ಕೃಷ್ಣಾ ನದಿ ತಟದಲ್ಲಿರುವ ಪುಣ್ಯ ಕ್ಷೇತ್ರ ಕೊಲ್ದಾರ ಪಟ್ಟಣದ ಶ್ರೀ ಬನಶಂಕರಿದೇವಿ ಜಾತ್ರಾ ಮಹೋತ್ಸವವು ಇದೆ ಜ.24 ರಿಂದ 26 ರವರೆಗೆ ವಿಜೃಂಭಣೆಯಿಂದ ನಡೆಯಲಿದೆ.
ದಿನಾಂಕ: 24-01-2026 ಶನಿವಾರ ದಿವಸ ಬೆಳಿಗ್ಗೆ 10-30 ಘಂಟೆಗೆ ಶ್ರೀ ಬನಶಂಕರಿದೇವಿಯ ಅಷ್ಟೋತ್ತರ ಕುಂಕುಮಾರ್ಚನೆಯು ಶಕ್ತಿಪೀಠ ಶ್ರೀ ಕ್ಷೇತ್ರ ಬನಶಂಕರಿ (ಬದಾಮಿ) ಚಿದಂಬರಭಟ್ಟ ಎಸ್. ಪೂಜಾರ ಅರ್ಚಕರು ಇವರಿಂದ ನೆರವೇರುವದು. ಅದೇ ದಿನ ರಾತ್ರಿ 7-00 ಗಂಟೆಗೆ ಶಂಕರ ಮ. ಯಂಕಂಚಿ ಇವರ ತಂಡದಿಂದ ‘ಜಾಣರ ಜಗಲಿ ನಗೆಹಬ್ಬ’ ಕಾರ್ಯಕ್ರಮ ಜರುಗುವುದು.
ದಿನಾಂಕ : 25-01-2026 ರವಿವಾರ ದಿವಸ ಬೆಳಿಗ್ಗೆ : 6-00 ಗಂಟೆಗೆ ಶ್ರೀ ಬನಶಂಕರಿದೇವಿಯ ರುದ್ರಾಭಿಷೇಕ, ಹೋಮ ಹವನ ಕಾರ್ಯಕ್ರಮವನ್ನು ಪ್ರಭುಕುಮಾರ ಶಿವಾಚಾರ್ಯ ಮಹಾಸ್ವಾಮಿಗಳು, ಬೇಲೂರ ಜಿ. ಬೀದರ (ಕೊಲ್ದಾರ) ಮತ್ತು ವೇದಮೂರ್ತಿ ಶ್ರೀ ರಾಘವೇಂದ್ರಸ್ವಾಮಿಗಳು, ದೇವಾಂಗಮಠ, ಗೊಳಸಂಗಿ ಹಾಗೂ ಶ್ರೀ ಈರಣ್ಣ ಹ. ಮೇಲಗಿರಿ (ದೇವಿ ಆರ್ಚಕರು) ಇವರಿಂದ ಜರುಗುವುದು.
ಅದೇ ದಿನ ಮುಂಜಾನೆ 10-30 ಕ್ಕೆ ಮುತ್ತೈದೆಯರ ಆರತಿಯೊಂದಿಗೆ ಶ್ರೀ ಬನಶಂಕರಿ ದೇವಿಯ ಬೆಳ್ಳಿ ಮೂರ್ತಿಯ-ಪಲ್ಲಕ್ಕಿ ಉತ್ಸವ ಹಾಗೂ ಕುಂಭಮೇಳದ ಜೊತೆಗೆ ಕಳಸದ ಮೆರವಣಿಗೆ ನವಿಲು, ಗೊಂಬೆಗಳ ಕುಣಿತ ಹಾಗೂ ಸಕಲ ವಾದ್ಯ ಮೇಳದೊಂದಿಗೆ ನೆರವೆರುವುದು. ನಂತರ ಅನ್ನ ಪ್ರಸಾದ ಜರಗುವದು.
ರಾತ್ರಿ 10-00 ಗಂಟೆಗೆ ಲಕ್ಷ್ಮೇಶ್ವರ ಶ್ರೀ ಜೈಮಾತ್ರಭೂಮಿ ಕಲಾಸಂಘ ಶ್ರೀ ಪ್ರಕಾಶ ಕಡಪಟ್ಟಿ ವಿರಚಿತ ಇವರಿಂದ ‘ಮಾರಿ ಕಣ್ಣು ಹೋರಿ ಮ್ಯಾಲೆ ಆರ್ಥಾತ ‘ಸೇಡಿನ ಸರ್ಪ’ ಎಂಬ ಸುಂದರ ಹಾಸ್ಯಭರಿತ ಸಾಮಾಜಿಕ ನಾಟಕ ಜರುಗುವುದು.
ಹಾಗೂ ದಿನಾಂಕ: 26-01-2026 ರಂದು ಸೋಮವಾರ ದಿವಸ ರಾತ್ರಿ 10-00 ಗಂಟೆಗೆ ಕಲಾಸಿಂಚನ ಮೇಲೋಡಿಸ್ ಮುದ್ದೇಬಿಹಾಳ ಶ್ರೀ ಗೋಪಾಲ ಹೂಗಾರ ಹಾಗೂ ಶ್ರೀ ಗೋಪಾಲ ಇಂಚಗೇರಿ ಇವರ ಸಾರಥ್ಯದಲ್ಲಿ ಮುಖ್ಯ ಹಾಸ್ಯ ಪಾತ್ರದಲ್ಲಿ ಗೋಕಾಕದ ಲಪ್ಪಂಗರಾಜ್ ‘ಪಾಸ್ಯ ರಸಮಂಜರಿ’ ಕಾರ್ಯಕ್ರಮ ಜರಗುವುದು.
ಸರ್ವ ಭಕ್ತಾದಿಗಳು ಶ್ರೀ ದೇವಿಯ ದರ್ಶನ ಪಡೆದು ಪುನೀತರಾಗಬೇಕು ಎಂದು ದೇವಸ್ಥಾನ ಜಾತ್ರಾ ಮಹೋತ್ಸವದ ಕಮೀಟಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
