ಉದಯರಶ್ಮಿ ದಿನಪತ್ರಿಕೆ
ವಿಜಯಪುರ: ಜಿಲ್ಲಾ ಕಾಂಗ್ರೆಸ್ ಕಾರ್ಯಾಲಯದಲ್ಲಿ ಗುರುವಾರ ರಾಷ್ಟ್ರಪಿತ ಮಹಾತ್ಮಾ ಗಾಂಧೀಜಿಯವರ ಜಯಂತಿಯನ್ನು ಮತ್ತು ಮಾಜಿ ಪ್ರದಾನಮಂತ್ರಿ ಲಾಲ ಬಹಾದ್ದೂರ ಶಾಸ್ತ್ರೀಜಿಯವರ ಜಯಂತಿಯನ್ನು ಆಚರಿಸಲಾಯಿತು.
ಇಂದು ಗ್ರಾಮಸ್ವರಾಜ್ಯದ ಕನಸು ಕಂಡ ಮಹಾತ್ಮಾ ಗಾಂಧೀಜಿಯವರ ೧೫೬ನೇ ವರ್ಷದ ಜಯಂತಿ ಅಹಿಂಸಾ ಮಾರ್ಗವನ್ನು ಅನುಸರಿಸುತ್ತಾ ಶಾಂತಿಯಿಂದ ಭಾರತರಾಷ್ಟ್ರವನ್ನು ಸ್ವಾತಂತ್ರ್ಯಗೊಳಿಸಲು ರಾಷ್ಟಾçದ್ಯಂತ ಚಳುವಳಿಗಳ ಮೂಲಕ ಭಾರತವನ್ನು ಸ್ವಾತಂತ್ರ್ಯ ತಂದುಕೊಡುವಲ್ಲಿ ವಹತ್ವದ ಪಾತ್ರವನ್ನು ವಹಿಸಿದ ರಾಷ್ಟ್ರಪಿತ ಮಹಾತ್ಮಾ ಗಾಂಧೀಜಿಯವರ ಜಯಂತಿಯನ್ನು ಮತ್ತು ಮಾಜಿ ಪ್ರದಾನಮಂತ್ರಿ ಲಾಲ ಬಹಾದ್ದೂರ ಶಾಸ್ತ್ರಿ ಸರಳ ಜೀವಿ ‘ಜೈಜವಾನ ಜೈಕಿಸಾನ’ ಎಂಬ ಘೋಷವಾಕ್ಯದೊಂದಿಗೆ ದೇಶದ ಅನ್ನದಾತ ರೈತರ ಬಗ್ಗೆ ಅರ್ಥಪೂರ್ಣವಾದ ಮತ್ತು ರೈತನು ಕೂಡ ದೇಶ ಕಾಯುವ ಸೈನಿಕ ಎಂದು ಸೈನಿಕ ಮತ್ತು ರೈತರು ದೇಶ ಕಾಯುವ ಕಾಯಕ ಯೋಗಿಗಳೆಂದು ತೋರಿಸಿಕೊಟ್ಟ ಮಾಜಿ ಪ್ರಧಾನಮಂತ್ರಿ ಲಾಲ ಬಹಾದ್ದೂರ ಶಾಸ್ತ್ರಿ ಯವರ ೧೨೧ನೇ ಜಯಂತಿಯನ್ನು ಕೂಡಾ ಜಿಲ್ಲಾ ಕಾಂಗ್ರೆಸ್ ಕಾರ್ಯಾಲಯದಲ್ಲಿ ಅವರ ಭಾವಚಿತ್ರಗಳಿಗೆ ಪುಷ್ಪಾರ್ಚನೆ ಮಾಡುವುದರ ಮುಖಾಂತರ ಆಚರಿಸಲಾಯಿತು.
ಈ ಸಂದರ್ಭದಲ್ಲಿ ಕೆ.ಪಿ.ಸಿ.ಸಿ. ಸದಸ್ಯರು, ಕಾಂಗ್ರೆಸ್ ಮುಖಂಡರಾದ ಅಬ್ದುಲಹಮೀದ ಮುಶ್ರೀಫ್, ಜಿಲ್ಲಾ ಕಾಂಗ್ರೆಸ್ ಉಪಾಧ್ಯಕ್ಷರುಗಳಾದ ಚಾಂದಸಾಬ ಗಡಗಲಾವ, ಮಹಾದೇವಿ ಗೋಕಾಕ, ಜಿಲ್ಲಾ ಪ್ರಧಾನ ಕಾರ್ಯದರ್ಶಿಗಳಾದ ವಸಂತ ಹೊನಮೊಡೆ, ಜಾಕೀರ ಹುಸೇನ ಮುಲ್ಲಾ, ಸಾಹೇಬಗೌಡ ಬಿರಾದಾರ, ಐ.ಎಂ. ಇಂಡೀಕರ, ಚನಬಸಪ್ಪ ನಂದರಗಿ, ಶಬ್ಬೀರ ಜಹಾಗೀರದಾರ, ಅಶ್ಪಾಕ ಮನಗೂಳಿ, ಬ್ಲಾಕ್ ಅಧ್ಯಕ್ಷರುಗಳಾದ ಜಮೀರಅಹ್ಮದ ಬಕ್ಷಿ, ಆರತಿ ಶಹಾಪೂರ, ಜಿಲ್ಲಾ ಕಾಂಗ್ರೆಸ್ ಖಜಾಂಚಿ, ವಿಜಯಕುಮಾರ ಘಾಟಗೆ, ಕೆಪಿಸಿಸಿ ಓಬಿಸಿ ಘಟಕದ ಪ್ರಧಾನ ಕಾರ್ಯದರ್ಶಿ ಸತೀಶ ಅಡವಿ, ಜಿಲ್ಲಾ ಕಾಂಗ್ರೆಸ್ ಅಂಗ ಘಟಕಗಳ ಅಧ್ಯಕ್ಷರುಗಳಾದ ರಮೀಜಾ ನದಾಫ, ಆನಂದ ಜಾಧವ, ಶಕೀಲ ಬಾಗಮಾರೆ, ಬೀರಪ್ಪ ಜುಮನಾಳ, ಕಾಂಗ್ರೆಸ್ನ ಮುಖಂಡರುಗಳಾದ ಮಹಿಬೂಬ ಕಲಾದಗಿ, ಹುಸೇನಸಾಬ ಮುಲ್ಲಾ, ಎಂ.ಎ. ಬಕ್ಷಿ, ಪರಸುರಾಮ ಹೊಸಮನಿ, ವಿರೇಶ ಕಲಾಲ, ರುಕ್ಮಿಣಿ ಚವ್ಹಾಣ, ತಾಜೋದ್ದಿನ ಖಲಿಫಾ, ಕಲ್ಲಪ್ಪ ಪಡಶೆಟ್ಟಿ, ಮಹಾದೇವ ರಾಠೋಡ, ಸಲೀಮ ಎ. ಪೀರಜಾದೆ, ಸಂತೋಷ ಪವಾರ, ಕಾಶಿಬಾಯಿ ಹಡಪದ, ದೀಲಿಪ ಪ್ರಭಾಕರ, ಮಹಾದೇವ ರಾವಜಿ, ಅಬುಬಕರ ಕಂಬಾಗಿ, ಈರಪ್ಪ ಕುಂಬಾರ, ಆಸ್ಮಾ ಕಾಲೇಬಾಗ, ಲಲಿತಾ ದೊಡ್ಡಮನಿ, ರುಕ್ಮಿಣಿ ಚವ್ಹಾಣ, ಹಮೀದಾ ಪಟೇಲ, ಅಪ್ಸರಾ ತಾಬಿಲದರ, ಭಹುವನೇಶ್ವರಿ ಅಶ್ಪಾಕ ಮನಿಯಾರ, ಹಾಜಿ ಪಿಂಜಾರ, ಕೆ.ಎಸ್. ಪರಶೆಟ್ಟಿ, ರುಬಿನಾ ಹಳ್ಳೂರಮ ಶಮೀಮ ಅಕ್ಕಲಕೋಟಿ, ಎಂ.ಹೆಚ್. ರೋಜೆವಾಲೆ, ಬಿ.ಎಂ. ಮಕ್ತೆದಾರ, ಇಲಿಯಾಸ ಮುಲ್ಲಾ, ಹಮೀದ ಮನಗೂಳಿ, ಮೋಯಿದ್ದೀನ, ಅರುಣ ಭಜಂತ್ರಿ ಹಾಗೂ ಮುಂತಾದ ಕಾಂಗ್ರೆಸ್ ಕಾರ್ಯಕರ್ತರು ಉಪಸ್ಥಿತರಿದ್ದರು.

