ಜಿಲ್ಲಾ ದಂಡಾಧಿಕಾರಿ ಜಿಲ್ಲಾಧಿಕಾರಿ ಡಾ.ಆನಂದ ಕೆ ಆದೇಶ
ಉದಯರಶ್ಮಿ ದಿನಪತ್ರಿಕೆ
ವಿಜಯಪುರ: ಗೌರಿ ಗಣೇಶ ಮೂರ್ತಿ ಪ್ರತಿಷ್ಠಾಪನೆ ಮತ್ತು ವಿಸರ್ಜನೆ ಕಾಲಕ್ಕೆ ಶಾಂತಿ ಹಾಗೂ ಸುವ್ಯವಸ್ಥೆ ಕಾಪಾಡುವ ಹಿತದೃಷ್ಟಿಯಿಂದ ಎಲ್ಲ ತರಹದ ಮದ್ಯ ಮಾರಾಟ, ಸಂಗ್ರಹಣೆ ಹಾಗೂ ಹಂಚಿಕೆಯನ್ನು ನಿಷೇಧಿಸಿ ಜಿಲ್ಲಾ ದಂಡಾಧಿಕಾರಿಗಳಾದ ಜಿಲ್ಲಾಧಿಕಾರಿ ಡಾ.ಆನಂದ ಕೆ ಅವರು ಆದೇಶ ಹೊರಡಿಸಿದ್ದಾರೆ.
ಗಣೇಶ ಮೂರ್ತಿ ಪ್ರತಿಷ್ಠಾಪನೆ ದಿನವಾದ ಆಗಸ್ಟ್ ೨೭ರ ಬೆಳಿಗ್ಗೆ ೬ ರಿಂದ ಆಗಸ್ಟ್ ೨೮ರ ಬೆಳಿಗ್ಗೆ ೬ ಗಂಟೆವರೆಗೆ ಹಾಗೂ ೫ನೇ ದಿನದ ಗಣೇಶ ಮೂರ್ತಿ ವಿಸರ್ಜನೆ ಪ್ರಯುಕ್ತ ಆಗಸ್ಟ್ ೩೧ರ ಬೆಳಿಗ್ಗೆ ೬ ರಿಂದ ಸೆಪ್ಟೆಂಬರ್ ೧ರ ಬೆಳಿಗ್ಗೆ ೬ ಗಂಟೆವರೆಗೆ, ೭ನೇ ದಿನದ ಗಣೇಶ ಮೂರ್ತಿ ವಿಸರ್ಜನೆ ಪ್ರಯುಕ್ತ ಸೆಪ್ಟೆಂಬರ್ ೨ರ ಬೆಳಿಗ್ಗೆ ೬ ರಿಂದ ಸೆಪ್ಟೆಂಬರ್ ೩ರ ಬೆಳಿಗ್ಗೆ ೬ಗಂಟೆಯವರೆಗೆ, ೯ನೇ ದಿನದ ಗಣೇಶ ಮೂರ್ತಿ ವಿಸರ್ಜನೆ ಪ್ರಯುಕ್ತ ಸೆಪ್ಟೆಂಬರ್ ೪ರ ಬೆಳಿಗ್ಗೆ ೬ ರಿಂದ ಸೆಪ್ಟೆಂಬರ್ ೫ರ ಬೆಳಿಗ್ಗೆ ೬ಗಂಟೆವರೆಗೆ ಹಾಗೂ ೧೧ನೇ ದಿನದ ಗಣೇಶ ಮೂರ್ತಿ ವಿಸರ್ಜನೆ ಪ್ರಯುಕ್ತ ಸೆಪ್ಟೆಂಬರ್ ೬ರ ಬೆಳಿಗ್ಗೆ ೬ ರಿಂದ ಸೆಪ್ಟೆಂಬರ್ ೭ರ ಬೆಳಿಗ್ಗೆ ೬ ಗಂಟೆಯವರೆಗೆ ಜಿಲ್ಲಾದ್ಯಂತ ಎಲ್ಲ ತರಹದ ಮದ್ಯ ಮಾರಾಟ, ಸಂಗ್ರಹಣೆ ಹಾಗೂ ಹಂಚಿಕೆಯನ್ನು ನಿಷೇಧಿಸಿ, ಆದೇಶಿಸಿದೆ.