ಉದಯರಶ್ಮಿ ದಿನಪತ್ರಿಕೆ
ಇಂಡಿ: ತಾಲೂಕಾ ಯುವ ಕಾಂಗ್ರೆಸ್ ವತಿಯಿಂದ ಶನಿವಾರ ಪಟ್ಟಣದ ಬಸವೇಶ್ವರ ವೃತ್ತ ಮತ್ತು ಬಸ್ ನಿಲ್ದಾಣದಲ್ಲಿ ಮತಗಳ್ಳತನ ವಿರುದ್ದ ಅಭಿಯಾನ ಜರುಗಿತು.
ತಾಲೂಕಾ ಯುವ ಕಾಂಗ್ರೆಸ್ ಸಮಿತಿ ಅಧ್ಯಕ್ಷ ಅವಿನಾಶ ಬಗಲಿ ಮಾತನಾಡಿ, ಮತಗಳ್ಳತನ ಕರ್ನಾಟಕದ ಜನರ ವಿರುದ್ದ ನಡೆದ ಹೀನ ಅಪರಾಧ, ಕರ್ನಾಟಕ ಸರಕಾರ ಈ ಅಪರಾಧದ ಬಗ್ಗೆ ತನಿಖೆ ನಡೆಸಬೇಕು. ಹಾಗೂ ಜನರಿಗೆ ನ್ಯಾಯ ಕೊಡಿಸಬೇಕು ಎಂದರು.
ದೇಶದ ಎಲ್ಲ ರಾಜಕೀಯ ಪಕ್ಷಗಳು ಪ್ರಶ್ನೆ ಮಾಡುತ್ತಿದ್ದು ಈ ಬಗ್ಗೆ ಚುನಾವಣೆ ಆಯೋಗ ಮಾಹಿತಿ ನೀಡಬೇಕು. ಕರ್ನಾಟಕದಲ್ಲಿ ಸಿಕ್ಕ ಮಾಹಿತಿ ಕುತಂತ್ರದ ಸಾಕ್ಷಿಯಾಗಿದೆ. ಚುನಾವಣೆ ಆಯೋಗ ಬಿಜೆಪಿಗೆ ಅಲ್ಲ, ಸಂವಿಧಾನಕ್ಕೆ ಕೆಲಸ ಮಾಡಬೇಕು ಎಂದರು.
ತಾಲೂಕಾ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಜಾವೇದ ಮೋಮಿನ, ಪುರಸಭೆ ಅಧ್ಯಕ್ಷ ಲಿಂಬಾಜಿ ರಾಠೋಡ, ಭೀಮಾಶಂಕರ ಮೂರಮನ, ಪುರಸಭೆ ಸದಸ್ಯರಾದ ಅಯೂಬ ಬಾಗವಾನ, ಸುಧೀರ ಕರಕಟ್ಟಿ, ಶಹೀನಶಹಾ ಜಹಾಗೀರದಾರ, ಸತೀಶ ಹತ್ತಿ, ಸುನೀಲ ಅತನೂರ, ರಯಿಸ ಅಷ್ಟೇಕರ, ಮಹಿಬೂಬ ಜಹಾಗೀರದಾರ, ಸುಭಾಸ ಬಾಬರ, ಸಂಜೀವ ರಾಠೋಡ, ಸಂತೋಷ ಪರಶೇನವರ, ಶಿವು ಬಡಿಗೇರ, ನಾಗೇಶ ತಳಕೇರಿ, ಇಮ್ರಾನ ಮುಜಾವರ, ಬಾಬು ಗುಡುಮಿ, ಶಾಹಜಿ ಶಿಂದೆ, ಪೈಜಾನ ಹವಾಲ್ದಾರ, ರಾಹುಲ ಮಡ್ಡಿಮನಿ, ಮಹಿಳಾದ ಘಟಕದ ಪೀರದೂಷ ಸುನ್ನೆವಾಲೆ ಮತ್ತಿತರಿದ್ದರು.