Close Menu
  • ಮುಖಪುಟ
  • (ರಾಜ್ಯ ) ಜಿಲ್ಲೆ
  • ವಿಶೇಷ ಲೇಖನ
  • ಸಾಹಿತ್ಯ
  • ಆರೋಗ್ಯ
  • ಚಿಂತನ
  • ಪ್ರೇಮಲೋಕ
  • ದಿನಪತ್ರಿಕೆ
  • ಸಂಪರ್ಕಿಸಿ

Subscribe to Updates

Get the latest creative news from FooBar about art, design and business.

What's Hot

ಮಹಿಳೆಯರು ಅಗತ್ಯ ಕೌಶಲ್ಯಗಳನ್ನು ಪಡೆಯುವುದು ಅತ್ಯವಶ್ಯ :ಪ್ರೊ.ಸೋನಾರ

ಬಾಲಕಿ ನೇಣಿಗೆ ಶರಣು

ಗ್ರಾಮೀಣ ಮಹಿಳಾ ಸಬಲೀಕರಣಕ್ಕೆ ಮತ್ಸ್ಯ ಸಂಜೀವಿನಿ ಸಹಕಾರಿ :ವಡ್ಡರ

Facebook X (Twitter) Instagram
  • ಮುಖಪುಟ
  • (ರಾಜ್ಯ ) ಜಿಲ್ಲೆ
  • ವಿಶೇಷ ಲೇಖನ
  • ಸಾಹಿತ್ಯ
  • ಆರೋಗ್ಯ
  • ಚಿಂತನ
  • ಪ್ರೇಮಲೋಕ
  • ದಿನಪತ್ರಿಕೆ
  • ಸಂಪರ್ಕಿಸಿ
Facebook X (Twitter) Instagram YouTube WhatsApp
udayarashminews.comudayarashminews.com
  • ಮುಖಪುಟ
  • (ರಾಜ್ಯ ) ಜಿಲ್ಲೆ
  • ವಿಶೇಷ ಲೇಖನ
  • ಸಾಹಿತ್ಯ
  • ಆರೋಗ್ಯ
  • ಚಿಂತನ
  • ಪ್ರೇಮಲೋಕ
  • ದಿನಪತ್ರಿಕೆ
  • ಸಂಪರ್ಕಿಸಿ
udayarashminews.comudayarashminews.com
Home»ವಿಶೇಷ ಲೇಖನ»ಪ್ರೌಢದೇವರಾಯನ ಕಾಲದ ಶರಣ ಸಾಹಿತ್ಯದ ಪುನರುಜ್ಜೀವನ
ವಿಶೇಷ ಲೇಖನ

ಪ್ರೌಢದೇವರಾಯನ ಕಾಲದ ಶರಣ ಸಾಹಿತ್ಯದ ಪುನರುಜ್ಜೀವನ

By Updated:No Comments2 Mins Read
Facebook Twitter Pinterest LinkedIn Telegram WhatsApp
Share
Facebook Twitter LinkedIn Email Telegram WhatsApp

ಸಂಗ್ರಹ
– ಸುಧಾ ಪಾಟೀಲ
ವಿಶ್ವಸ್ಥರು
ಬಸವ ತಿಳುವಳಿಕೆ ಮತ್ತು ಸಂಶೋಧನ ಕೇಂದ್ರ
ಪುಣೆ

ಉದಯರಶ್ಮಿ ದಿನಪತ್ರಿಕೆ

25 ನೆಯ ದಿವಸದ ಶರಣ ಮಾಸದ ಅನುಭಾವ ಮಾಲಿಕೆಯಲ್ಲಿ ಡಾ. ವಿರುಪಾಕ್ಷಿ ಪೂಜಾರ ಹಳ್ಳಿಯವರು ಪ್ರೌಢದೇವರಾಯನ ಕಾಲದ ಶರಣ ಸಾಹಿತ್ಯದ ಪುನರುಜ್ಜೀವನದ ಬಗೆಗೆ ಅತ್ಯಂತ ಪ್ರಬುದ್ಧವಾಗಿ ತಮ್ಮ ಅನುಭಾವವನ್ನು ನೀಡಿದರು.
ವಿಜಯನಗರ ಸಾಮ್ರಾಜ್ಯವು ಸಂಗಮ, ಸಾಳುವ, ತುಳುವ, ಅರವೀಡು ಮನೆತನಗಳಿಂದ ಆಳ್ವಿಕೆಯಾಗಿದ್ದು, ಪ್ರೌಢ ದೇವರಾಯ ಸಮರ್ಥ ಆಡಳಿತಗಾರನಾಗಿ, ಒರಿಸ್ಸಾದ ಕಟಕ್ ವರೆಗೆ ರಾಜ್ಯವನ್ನು ವಿಸ್ತರಿಸಿದ್ದು, ರಾಜನು ಹೇಗೆ ಕಲೆ, ಸಾಹಿತ್ಯ, ನಾಟ್ಯ, ಸಂಗೀತ, ವಾಸ್ತುಶಿಲ್ಪ, ಚರಿತ್ರೆ, ಧರ್ಮ, ನಾಗರೀಕತೆಯನ್ನು ಉತ್ತುಂಗಮಟ್ಟಕ್ಕೆ ತೆಗೆದು ಕೊಂಡು ಹೋಗಿ ಹಲವಾರು ಪ್ರಸಿದ್ಧ ಕನ್ನಡ ಕವಿಗಳಿಗೆ ಪೋಷಕರಾಗಿದ್ದುದನ್ನು, ವಿಜಯನಗರ ಸಾಮ್ರಾಜ್ಯದ ಚಕ್ರವರ್ತಿ ಪ್ರೌಢದೇವರಾಯ ಅವರನ್ನು ಸಂಗಮ ರಾಜ ವಂಶದ ಆಡಳಿತಗಾರರಲ್ಲಿ ಶ್ರೇಷ್ಠರೆಂದು ಪರಿಗಣಿಸಲಾಗುತ್ತದೆ ಎನ್ನುವುದನ್ನು ಹೇಳುತ್ತಾ, 12ನೇ ಶತಮಾನದಲ್ಲಿ ನಡೆದ ಶರಣರ ಕ್ರಾಂತಿ ಮತ್ತು 15 ನೆಯ ಶತಮಾನದ ಮಧ್ಯಕಾಲೀನ ಸಮಯದಲ್ಲಿ ಕರ್ನಾಟಕದಲ್ಲಿ ಪ್ರೌಢದೇವರಾಯನ ಕಾಲ ಸ್ಮರಣೆ ಮಾಡುವಂತಹುದ್ದು
ಎಂದು ಅಭಿಪ್ರಾಯ ಪಟ್ಟರು.


ಪ್ರೌಢದೇವರಾಯನ ಕಾಲವು ಕನ್ನಡ ಸಾಹಿತ್ಯದ ಬೆಳವಣಿಗೆಯಲ್ಲಿ ಒಂದು ಪ್ರಮುಖ ಘಟ್ಟ. ಲಕ್ಕಣ್ಣ ದಂಡೇಶ, ಜಕ್ಕಣ್ಣಾರ್ಯ, ಕುಮಾರ ಬಂಕನಾಥ, ಮಹಾಲಿಂಗದೇವ, ಕೆರೆಯ ಪದ್ಮರಸ, ಚಾಮರಸ, ನಾಗಿ ದೇವ, ಕಲ್ಲುಮಠದ ಪ್ರಭುದೇವರು ಹೀಗೆ ಹಲವಾರು ದಿಗ್ಗಜರ ಹೆಸರುಗಳನ್ನು ಉಲ್ಲೇಖಿಸಿದರು.
ಇದೊಂದು ಸಾಹಿತ್ಯದ ಸಂಗ್ರಾಮ ಮತ್ತು ಸಂಕ್ರಾಂತಿಯ ಜೊತೆಗೆ ಭಕ್ತಿ ಸಾಹಿತ್ಯದ ವೈಶಿಷ್ಟ್ಯವೂ ಆಗಿತ್ತು.
ಈ ಕಾಲದಲ್ಲಿ ಹಲವಾರು ವಚನಕಾರರ ಹೆಸರು ಮತ್ತು ಅವರ ವಚನಗಳು ಬೆಳಕಿಗೆ ಬಂದವು ಎಂದು ತಿಳಿಸುತ್ತಾ ಶರಣ ಸಾಹಿತ್ಯದ ಪುನರುಜ್ಜೀ ವನವನ್ನು ಎಳೆ ಎಳೆಯಾಗಿ ಬಿಡಿಸಿ ಹೇಳಿದರು
ಅಧ್ಯಕ್ಷರಾದ ಡಾ. ಶಶಿಕಾಂತ ಪಟ್ಟಣ ಅವರು ಲಿಂಗಾಯತ ಮತ್ತು ಶರಣ ಪರಂಪರೆ,ವಚನ ಗಳು ಪಾರಿವಾರಿಕ ಭಾಷೆಯಾಗಿದ್ದು, ಪ್ರೌಢ ದೇವರಾಯನ ಕಾಲದ ಫಾಲ್ಗುರಿಕೆ ಸೋಮನಾಥ, ಶೃಂಗೀರಾಜ, ಚಾಮರಸ ಮುಂತಾದವರ ಕೃತಿಗಳ ಉಲ್ಲೇಖ, ವಿಜಯನಗರ ಎಂದರೆ ಪ್ರೌಢದೇವರಾಯ, ಪ್ರೌಢದೇವರಾಯ ಎಂದರೆ ವಿಜಯನಗರ ಎನ್ನುವ ಹೆಗ್ಗಳಿಕೆ
ನೂರಾಒಂದು ವಿರಕ್ತರಿಗೆ ಕಂದಾಯ ಗ್ರಾಮಗಳನ್ನು ಬಳುವಳಿಯಾಗಿ ಕೊಟ್ಟಿದ್ದು,ಅದರ ಆದಾಯದಿಂದ ಅವರು ತತ್ವ ಪ್ರಚಾರ ಮಾಡುತ್ತಿದ್ದುದರ ಜೊತೆಗೆ ಬುದ್ಧ, ಬಸವ, ಅಂಬೇಡ್ಕರ್ ಅವರನ್ನು ನೆನೆಯುತ್ತ ಇನ್ನೂ ಹಲವಾರು ವಿಷಯಗಳ ಬಗೆಗೆ ಗಮನಾ ರ್ಹವಾಗಿ ಮಾತನಾಡಿದರು.
ಇಂದಿನ ದತ್ತಿ ದಾಸೋಹಿಗಳಾದ ಶರಣೆ ಇಂದಿರಾ ಮೋಟೆಬೆನ್ನೂರ ಅವರು ತಮ್ಮ
ತಾಯಿ ಲಿಂ. ಮಾತೋಶ್ರೀ ಪಾರ್ವತಿದೇವಿ ಅವರು ಶಾಲಾ ಶಿಕ್ಷಕಿಯಾಗಿ ಕಾರ್ಯ ನಿರ್ವಹಿಸಿದವರು. ಪುಸ್ತಕ ಪ್ರೇಮಿಗಳು. ಹೆಣ್ಣು ಮಕ್ಕಳ ಶಿಕ್ಷಣದ ಬಗ್ಗೆ ಅಪಾರ ಕಾಳಜಿ ಹಾಗೂ ಕಳಕಳಿ ಉಳ್ಳವರು ಹಾಗೂ ಆ ನಿಟ್ಟಿನಲ್ಲಿ ತಮ್ಮ ಕೈಲಾದಷ್ಟು ಸಹಾಯ ಸಹಕಾರ ನೀಡಿದಂಥವರು ಮತ್ತು ಕಾಯಕ, ದಾಸೋಹ ಪ್ರಸಾದಗಳನ್ನು ತಮ್ಮ ನಡೆ ನುಡಿಯಲ್ಲಿ ಅಳವಡಿಸಿಕೊಂಡವರು ಎನ್ನುವುದನ್ನು ಅತ್ಯಂತ ಭಾವುಕರಾಗಿ ಹಂಚಿಕೊಂಡರು.
ಶರಣೆ ಪ್ರೇಮಕ್ಕ ಹೊರಟ್ಟಿ ಅವರ ವಚನ ಪ್ರಾರ್ಥನೆ,ಡಾ. ದಾನಮ್ಮ ಝಳಕಿ ಅವರ ಸ್ವಾಗತಪರ ನುಡಿಗಳು,ಶರಣೆ ವಿದ್ಯಾ ಮುಗ್ದುಮ್ ಅವರ ವಚನ ಮಂಗಳ, ಡಾ. ಶಶಿಕಾಂತ ಪಟ್ಟಣ ಅವರ ನಿರೂಪಣೆಯೊಂದಿಗೆ ಕಾರ್ಯಕ್ರಮ ಅತ್ಯಂತ ಯಶಸ್ವಿ ಯಾಗಿ ನಡೆಯಿತು.

ವಿಶೇಷ ದತ್ತಿ ಉಪನ್ಯಾಸ

ಶರಣೆ ಇಂದಿರಾ ಮೋಟೆಬೆನ್ನೂರ ಅವರ ತಾಯಿಯವರಾದ ಲಿಂ. ಮಾತೋಶ್ರೀ ಪಾರ್ವತಿದೇವಿ ಮೊಗಲಿ ಇವರ ಸ್ಮರಣಾರ್ಥ ವಿಶೇಷ ದತ್ತಿ ಉಪನ್ಯಾಸ

BIJAPUR NEWS public public news udaya rashmi Udayarashmi today newspaper udayarashminews.com
Share. Facebook Twitter Pinterest Email Telegram WhatsApp
  • Website

Related Posts

ಮಹಿಳೆಯರು ಅಗತ್ಯ ಕೌಶಲ್ಯಗಳನ್ನು ಪಡೆಯುವುದು ಅತ್ಯವಶ್ಯ :ಪ್ರೊ.ಸೋನಾರ

ಬಾಲಕಿ ನೇಣಿಗೆ ಶರಣು

ಗ್ರಾಮೀಣ ಮಹಿಳಾ ಸಬಲೀಕರಣಕ್ಕೆ ಮತ್ಸ್ಯ ಸಂಜೀವಿನಿ ಸಹಕಾರಿ :ವಡ್ಡರ

ರಾಷ್ಟ್ರೀಯ ರೈತ ಮಹಿಳಾ ದಿನಾಚರಣೆ

Add A Comment

Leave A Reply Cancel Reply

Categories
  • (ರಾಜ್ಯ ) ಜಿಲ್ಲೆ
  • Uncategorized
  • ಆರೋಗ್ಯ
  • ಇತರೆ
  • ಕಾವ್ಯರಶ್ಮಿ
  • ಚಿಂತನ
  • ದಿನಪತ್ರಿಕೆ
  • ಪುಸ್ತಕ ಪರಿಚಯ
  • ಪ್ರೇಮಲೋಕ
  • ಭಾವರಶ್ಮಿ
  • ರಾಷ್ಚ್ರ
  • ವಿಜಯಪುರ
  • ವಿದ್ಯಾರ್ಥಿ ನಿಧಿ
  • ವಿಶೇಷ ಲೇಖನ
  • ಸಾಹಿತ್ಯ
  • ಸಿನಿಮಾ
  • ಹೊತ್ತಿಗೆ ಹೊರಣ
Recent Posts
  • ಮಹಿಳೆಯರು ಅಗತ್ಯ ಕೌಶಲ್ಯಗಳನ್ನು ಪಡೆಯುವುದು ಅತ್ಯವಶ್ಯ :ಪ್ರೊ.ಸೋನಾರ
    In (ರಾಜ್ಯ ) ಜಿಲ್ಲೆ
  • ಬಾಲಕಿ ನೇಣಿಗೆ ಶರಣು
    In (ರಾಜ್ಯ ) ಜಿಲ್ಲೆ
  • ಗ್ರಾಮೀಣ ಮಹಿಳಾ ಸಬಲೀಕರಣಕ್ಕೆ ಮತ್ಸ್ಯ ಸಂಜೀವಿನಿ ಸಹಕಾರಿ :ವಡ್ಡರ
    In (ರಾಜ್ಯ ) ಜಿಲ್ಲೆ
  • ರಾಷ್ಟ್ರೀಯ ರೈತ ಮಹಿಳಾ ದಿನಾಚರಣೆ
    In (ರಾಜ್ಯ ) ಜಿಲ್ಲೆ
  • ಅತಿವೃಷ್ಟಿಯಿಂದ ಹಾನಿಗೊಳಗಾದ ಬೆಳೆಗಳ ಅಂತಿಮ ಪಟ್ಟಿ ಪ್ರಕಟ
    In (ರಾಜ್ಯ ) ಜಿಲ್ಲೆ
  • ಜಂಟಿ ಕೃಷಿ ನಿರ್ದೇಶಕರ ಕಚೇರಿ ಸ್ಥಳಾಂತರ
    In (ರಾಜ್ಯ ) ಜಿಲ್ಲೆ
  • ಟಿಲಿಸ್ಕೋಪ‌ ತಯಾರಿಕೆ: ಹೊನವಾಡ ವಿದ್ಯಾರ್ಥಿಗಳ ಸಾಧನೆ
    In (ರಾಜ್ಯ ) ಜಿಲ್ಲೆ
  • ಲಾಂಛನಗಳ ಪಾರುಪತ್ಯದಲ್ಲಿ ಬಳಲುವುದು ಬೇಡ
    In ಚಿಂತನ
  • ಈ ಚೆಂದದ ಹೃದಯದಲಿ ನಿನ್ನದೇನೆ ಚಟುವಟಿಕೆ
    In ವಿಶೇಷ ಲೇಖನ
  • ಎಡಿಸಿ ಭರವಸೆ: ಆಹೋರಾತ್ರಿ ಧರಣಿ ಸತ್ಯಾಗ್ರಹ ಹಿಂಪಡೆದ ಬಿಜೆಪಿ
    In (ರಾಜ್ಯ ) ಜಿಲ್ಲೆ
Editors Picks
Top Reviews
udayarashminews.com
Facebook X (Twitter) Instagram Pinterest Vimeo YouTube
  • ಮುಖಪುಟ
  • (ರಾಜ್ಯ ) ಜಿಲ್ಲೆ
  • ವಿಶೇಷ ಲೇಖನ
  • ಸಾಹಿತ್ಯ
  • ಆರೋಗ್ಯ
  • ಚಿಂತನ
  • ಪ್ರೇಮಲೋಕ
  • ದಿನಪತ್ರಿಕೆ
  • ಸಂಪರ್ಕಿಸಿ
© 2025 udayarashminews.com. Designed by udayarashmi news .

Type above and press Enter to search. Press Esc to cancel.