ಉದಯರಶ್ಮಿ ದಿನಪತ್ರಿಕೆ
ಇಂಡಿ: ವಿಜಯಪುರ ಜಿಲ್ಲೆಯನ್ನು ಶಿಕ್ಷಣವಂತರನ್ನಾಗಿ ಮಾಡಿ ಬೆಳಕು ಚೆಲ್ಲಿದ ಬಂಥನಾಳದ ಸಂಗನಬಸವ ಮಹಾ ಶಿವಯೋಗಿಗಳು ಎಂದು ಸಂಗನಬಸವ ಸೌಹಾರ್ದ ಪತ್ತಿನ ಸಹಕಾರಿ ಸಂಘದ ಸದಸ್ಯ ಸಿದ್ದು ಹತ್ತಳ್ಳಿ ಹೇಳಿದರು.
ತಾಲೂಕಿನ ತಾಂಬಾ ಗ್ರಾಮದಲ್ಲಿ ರವಿವಾರ ಸಂಗನಬಸವ ಸೌಹಾದ ಪತ್ತಿನ ಸಹಕಾರಿ ಸಂಸ್ಥೆಯ ವತಿಯಿಂದ ಹಮ್ಮಿಕೊಂಡ ಬಂಥನಾಳದ ಸಂಗನಬಸವ ಮಾಹಾ ಶಿವಯೋಗಿಗಳ ೧೨೫ನೇ ಜನ್ಮದಿನೋತ್ಸವದ ನೇತೃತ್ವ ವಹಿಸಿ ಮಾತನಾಡಿದ ಅವರು ಜಂಗಮರ ಉದರದಲ್ಲಿ ಜನಿಸಿ ಸರಸ್ವತಿ ರೂಪ ತಾಳಿದ ಸಂಗನಬಸವ ಶಿವಯೋಗಿಗಳು ವಿಜಾಪೂರದಲ್ಲಿ ಬಂಗಾರೆಮ್ಮ ಸಜ್ಜನ ಅವರಿಂದ ಭೂಮಿ ದಾನ ಪಡೆದು ವಿಜಯ ಕಾಲೇಜು ಹಾಗೂ ಬಿ.ಎಲ್.ಡಿ.ಇ ಸಂಸ್ಥೆಯನ್ನು ಮತ್ತು ತಾಂಬಾ ಗ್ರಮದಲ್ಲಿ ವೃಷಭಲಿಂಗೇಶ್ವರ ವಿಧ್ಯಾ ಸಂಸ್ಥೆಯನ್ನು ತಮ್ಮ ಜೋಳಿಗೆಯಿಂದ ಪ್ರಾರಂಭಿಸಿದ ಕೀರ್ತಿ ಬಂಥನಾಳದ ಸಂಗನಬಸವ ಮಾಹಾ ಶಿವಯೋಗಿಗಳಿಗೆ ಸಲ್ಲುತ್ತದೆ.
ಸಂಗನಬಸವ ಶಿವಯೊಗಿಗಳ ಬದುಕಿನಲ್ಲಿ ಹಲವಾರು ಪವಾಡ ಸದೃಷ್ಯ ಘಟೆನಗಳು ನಡೆದಿದ್ದವು. ಶಿಕ್ಷಣದ ಬಗ್ಗೆ ಅಫಾರ ಕಾಳಜಿ ಹೋಂದಿದ ಶ್ರೀಗಳು ೫೦ ವರ್ಷದ ಹಿಂದೆಯೆ ಶಿಕ್ಷಣದಿಂದ ಮಾತ್ರ ಅಭಿವೃದ್ಧಿ ಸಾದ್ಯ ಎಂದು ಬಲವಾಗಿ ನಂಬಿದ್ದ ಶ್ರೀಗಳು ಬರಗಾಲಕ್ಕೆ ತುತ್ತಾಗುತ್ತಿರುವ ಎಂದರು.
ಕಾರ್ಯಕ್ರಮದಲ್ಲಿ ಸಂಗನಬಸವ ಸೌಹಾರ್ದ ಪತ್ತಿನ ಸಹಕಾರಿ ಸಂಘದ ವ್ಯವಸ್ಥಾಪಕ ನಾಗೇಶ ನಿಂಬಾಳ, ಮಲ್ಲಯ್ಯ ವಿರಕ್ತಮಠ, ಶಾಂತಮಲ್ಲ ಖಟ್ಟೆ, ರಾಕೇಶ ಬಾಗಲಕೋಟ, ಸಂಜು ಹತ್ತಿ ಮತ್ತಿತರರು ಉಪಸ್ಥಿತರಿದ್ದರು.

