ಉದಯರಶ್ಮಿ ದಿನಪತ್ರಿಕೆ
ವಿಜಯಪುರ: ಜಿಲ್ಲೆಯಲ್ಲಿ ಸಾಕಷ್ಟು ನ್ಯಾನೋ ಯೂರಿಯಾ ಲಭ್ಯವಿದ್ದು, ಯೂರಿಯಾ ಬದಲಾಗಿ ನ್ಯಾನೋ ಯೂರಿಯಾ ಬಳಕೆ ಮಾಡುವಂತೆ ಜಂಟಿ ಕೃಷಿ ಉಪನಿರ್ದೇಶಕರು ತಿಳಿಸಿದ್ದಾರೆ.
ಜಿಲ್ಲೆಯಲ್ಲಿ ಕಾಂಪ್ಲೆಕ್ಸ್ ರಸಗೊಬ್ಬರ ೧೫೫೬೩ ಟನ್ ಲಭ್ಯವಿದ್ದು, ಈ ರಸಗೊಬ್ಬರವನ್ನು ರೈತರು ಬಳಕೆ ಮಾಡಬೇಕು. ರೈತರು ಲಭ್ಯವಿರುವ ವಿವಿಧ ರಸಗೊಬ್ಬರಗಳನ್ನು ತಮ್ಮ ಬೆಳೆಗಳಿಗೆ ಅವಶ್ಯಕತೆನುಗುಣಗವಾಗಿ ಬಳಸುವಂತೆ ಅವರು ಕೋರಿದ್ದಾರೆ.
ಜಿಲ್ಲೆಗೆ ೨೦೨೫ರ ಜುಲೈ ಅಂತ್ಯದವರೆಗೆ ೨೪೯೫೦ ಟನ್ ಯೂರಿಯಾ ರಸಗೊಬ್ಬರ ಹಂಚಿಕೆಯಾಗಿದ್ದು, ಈವರೆಗೆ ೩೦೮೭೦ ಟನ್ ಮಾರಾಟವಾಗಿ ೪೮೪೨ ಟನ್ ಯೂರಿಯಾ ವಿವಿಧ ಮಾರಾಟಗಾರರಲ್ಲಿ ದಾಸ್ತಾನಿದ್ದು, ಜಿಲ್ಲೆಯಲ್ಲಿ ಅಗತ್ಯ ಯೂರಿಯಾ ರಸಗೊಬ್ಬರ ಬೇಡಿಕೆ ತಕ್ಕಂತೆ ಪೂರೈಕೆ ಮಾಡಲಾಗುತ್ತಿದೆ ಎಂದು ಜಿಲ್ಲೆಯಲ್ಲಿ ರಸಗೊಬ್ಬರ ದಾಸ್ತಾನಿದ್ದು, ವಿತರಣೆ ಪ್ರಗತಿಯಲ್ಲಿದೆ. ದಿನಾಂಕ : ೨೩.೭೦೨೯೨೫ರಂದು ಪಿಪಿಎಲ್ (ಜುವಾರಿ) ಸಂಸ್ಥೆಯಿಂದ ೧೦೧೨ ಟನ್, ದಿನಾಂಕ : ೨೪-೦೭-೨೦೨೫ರಂದು ಆರ್ಸಿಎಫ್ ಸಂಸ್ಥೆಯಿAದ ೨೧೨ ಟನ್ ಹಾಗೂ ದಿನಾಂಕ : ೨೭-೦೭-೨೦೨೫ ರಂದು ಕೋರಮಂಡಲ ಸಂಸ್ಥೆಯ ೨೦೦ ಟನ್ ಯೂರಿಯಾ ರಸಗೊಬ್ಬರ ಜಿಲ್ಲೆಗೆ ಸರಬರಾಜಾಗಿದ್ದು, ವಿತರಣೆ ಪ್ರಗತಿಯಲ್ಲಿದೆ. ಯೂರಿಯಾ ರಸಗೊಬ್ಬರ ಬೇಡಿಕೆ ತಕ್ಕಂತೆ ಪೂರೈಕೆ ಮಾಡಲು ಕ್ರಮ ವಹಿಸಲಾಗುತ್ತಿದೆ ಎಂದು ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
