ಉದಯರಶ್ಮಿ ದಿನಪತ್ರಿಕೆ
ಕಲಕೇರಿ: ವಿಧ್ಯಾರ್ಥಿಗಳು ಸರಕಾರದಿಂದ ದೊರೆಯುವ ಸವಲತ್ತುಗಳನ್ನು ಪಡೆದುಕೊಂಡು ವಿದ್ಯಾವಂತರಾಗಬೇಕು, ಪಾಲಕರು ಪೋಷಕರು ವಿದ್ಯಾರ್ಥಿಗಳ ಉಜ್ವಲ ಭವಿಷ್ಯಕ್ಕಾಗಿ ಶಿಕ್ಷಣಕ್ಕೆ ಹೆಚ್ಚಿನ ಒತ್ತನ್ನು ನೀಡುವುದರ ಜೊತೆಗೆ ಯಾವುದೇ ಕಾರಣಕ್ಕೂ ಯಾವೊಬ್ಬ ಮಗುವೂ ಕೂಡಾ ಶಿಕ್ಷಣದಿಂದ ವಂಚಿತರಾಗದಂತೆ ನೋಡಿಕೊಳ್ಳಬೇಕು, ಈ ಹಿನ್ನೆಲೆಯಲ್ಲಿ ಸರಕಾರಿ ಶಾಲೆಗಳಲ್ಲಿ ಎಲ್ಲ ಸೌಲಭ್ಯಗಳನ್ನು ಒದಗಿಸಲಾಗುತ್ತಿದೆ ಎಂದು ಸಿಂದಗಿ ಕ್ಷೇತ್ರ ಶಿಕ್ಷಣಾಧಿಕಾರಿ ಎಂ ಬಿ ಯಡ್ರಾಮಿ ಹೇಳಿದರು.
ಕಲಕೇರಿ ಗ್ರಾಮದ ಸರಕಾರಿ ಕನ್ನಡ ಗಂಡು ಮಕ್ಕಳ ಶಾಲಾ ಆವರಣದಲ್ಲಿ ನಡೆದ ಕಲಕೇರಿ ಕ್ಲಸ್ಟರ್ ವ್ಯಾಪ್ತಿಯಲ್ಲಿ ಬರುವಂತಹ ವಿವಿದ ಸರಕಾರಿ ಪ್ರಾಥಮಿಕ ಶಾಲೆಗಳ ಮಕ್ಕಳಿಗೆ ಕೇಂದ್ರ ಸರ್ಕಾರದ ರಾಷ್ಟಿçÃಯ ಸಾಕ್ಷರತಾ ಮಿಷನ್ ಸದಸ್ಯ ಡಾ.ನಾಗರಾಜ್ ಗೌರಿಬಿದನೂರ ಇವರ ಸಾರಥ್ಯದಲ್ಲಿ ಕಲಕೇರಿ ಗ್ರಾಮದ ಭಗೀರಥ ಸಮಾಜದ ಮುಖಂಡರಾದ ಭಾಗ್ಯವಂತ ಮೋಪಗಾರ ಇವರ ನೇತೃತ್ವದಲ್ಲಿ ಹಮ್ಮಿಕೊಂಡ ಉಚಿತ ಸಮವಸ್ತç ಹಾಗೂ ಪಠ್ಯಪುಸ್ತಕ ವಿತರಣಾ ಸಮಾರಂಭದಲ್ಲಿ ಅವರು ಮಾತನಾಡಿದರು.
ಕಲಕೇರಿ ಗ್ರಾಮದ ಶಾಲೆಯಲ್ಲಿ ವಲಯ ಹಾಗೂ ತಾಲೂಕು ಮಟ್ಟದ ಕ್ರೀಡಾಕೂಟಗಳನ್ನು ನಡೆಸಬೇಕೆಂದು ಇಲ್ಲಿನ ಸ್ಥಳಿಯ ಮುಖಂಡರು ಮನವಿಯನ್ನು ಮಾಡಿದ್ದು, ಪ್ರಸಕ್ತ ಶೈಕ್ಷಣಿಕ ವರ್ಷದ ಕ್ರೀಡಾಕೂಟಗಳನ್ನು ಇಲ್ಲಿಯೇ ನಡೆಸಲು ಪ್ರಮಾಣಿಕ ಪ್ರಯತ್ನ ಮಾಡುತ್ತೇನೆ ಎಂದು ಅವರು ಹೇಳಿದರು.
ಡಾ.ವ್ಹಿ ಕೆ ಜಾಲಹಳ್ಳಿಮಠ, ಭವಾನಿ ಕಂಪ್ಯೂಟರ್ ಶಿಕ್ಷಣ ಸಂಸ್ಥೆಯ ಅಧ್ಯಕ್ಷ ಹಣಮಂತ ವಡ್ಡರ್, ಸಿಆರ್ಸಿ ಶ್ರೀಶೈಲ ಪೂಜಾರಿ, ಸಮಾಜ ಸೇವಕ ಭಾಗ್ಯವಂತ ಮೋಪಗಾರ ಸೇರಿದಂತೆ ಇತರರು ಮಾತನಾಡಿದರು. ಕಾರ್ಯಕ್ರಮದಲ್ಲಿ ಸುಮಾರು ೬೦೦ಕ್ಕೂ ಹೆಚ್ಚು ಮಕ್ಕಳಿಗೆ ಸಮವಸ್ತç ಹಾಗೂ ಪಠ್ಯ ಪುಸ್ತಕಗಳನ್ನು ವಿತರಣೆ ಮಾಡಲಾಯಿತು.
ಕಾರ್ಯಕ್ರಮದಲ್ಲಿ ಗ್ರಾಪಂ ಅಧ್ಯಕ್ಷ ರಾಜಅಹ್ಮದ ಶಿರಸಗಿ, ಉಪಾಧ್ಯಕ್ಷೆ ವಿಜಯಲಕ್ಷಿö್ಮÃ ಪರಶುರಾಮ ಬೇಡರ, ಸಿದ್ದಯ್ಯ ಸ್ಥಾವರಮಠ, ನಿರ್ಮಲಾ ನಂದಿಮಠ, ವಿಶ್ವನಾಥ ರಾಠೋಡ, ಆನಂದ ಅಡಕಿ, ಲಾಳೇಮಶ್ಯಾಕ ವಲ್ಲಿಬಾವಿ, ಮಲ್ಲು ನಾವಿ, ಜೆ ಬಿ ಕುಲಕರ್ಣಿ, ದಾನೇಶ ಅಡಕಿ, ಶಿವಕುಮಾರ ಪಡಶೆಟ್ಟಿ, ಸಿ ಡಿ ಮಾದಾರ ಸೇರಿದಂತೆ ಇತರರು ಇದ್ದರು.

