ಉದಯರಶ್ಮಿ ದಿನಪತ್ರಿಕೆ
ಕಲಕೇರಿ: ಕೇಂದ್ರ ಸರ್ಕಾರದ ಸಾಮಾಜಿಕ ಭದ್ರತಾ ಯೋಜನೆಗಳ ಕುರಿತು ಜಾಗೃತಿ ಮೂಡಿಸುವ ಆರ್ಥಿಕ ಸೇರ್ಪಡೆ ಪರಿಪೂರ್ಣತೆ ಅಭಿಯಾನ ವಿಜಯಪುರ ಜಿಲ್ಲೆಯ ತಾಳಿಕೋಟಿ ತಾಲೂಕಿನ ಕಲಕೇರಿ ಗ್ರಾಮದಲ್ಲಿ ನಡೆಯಿತು.
ಕಲಕೇರಿ ಗ್ರಾಮದ ಬ್ಯಾಂಕ್ ಆಫ್ ಬರೋಡಾ ಶಾಖೆ ಹಾಗೂ ಜಿಲ್ಲೆಯ ಅಗ್ರಾಣಿಯ ಬ್ಯಾಂಕ್ ಸಿಬ್ಬಂದಿ ಹಾಗೂ ಅಧಿಕಾರಿಗಳು ಜನರಿಗೆ ಕೇಂದ್ರ ಯೋಜನೆಗಳ ಕುರಿತು ಮಾಹಿತಿ ನೀಡಿ, ಯೋಜನೆಗಳಿಗೆ ನೋಂದಣಿ ಮಾಡಿಸಿದರು.
ಇದೆ ವೇಳೆ ಮಾತನಾಡಿದ ಜಿಲ್ಲಾ ಆಗ್ರಣಿಯ ಕೆನರಾ ಬ್ಯಾಂಕ್ ವ್ಯವಸ್ಥಾಪಕ ಶ್ರೀ ಸಿದ್ದಯ್ಯ ಮಾತನಾಡಿ ಕೇಂದ್ರ ಸರ್ಕಾರ ಯೋಜನೆಗಳಾದ ಪ್ರಧಾನ ಮಂತ್ರಿ ಜೀವನ ಜ್ಯೋತಿ ಮತ್ತು ಸುರಕ್ಷ ಯೋಜನೆ ಅಕಾಲಿಕ ಮರಣ ಮತ್ತು ಅಪಘಾತ ವಿಮೆ ಕುರಿತು ಮತ್ತು ಆನಲೈನ್ ವಂಚನೆಗಳ ಕುರಿತು ವಿವರಣೆ ನೀಡಿ ಸಾರ್ವಜನಿಕರು ಯೋಜನೆಗಳ ಸದುಪಯೋಗ ಡೆದುಕೊಳ್ಳಬೇಕು ಎಂದರು.
ಇದೆ ವೇಳೆ ಉಪಸ್ಥಿತರಿದ್ದ ಕಲಕೇರಿ ಹೀರೆಮಠದ ಸಿದ್ದರಾಮ ಶಿವಾಚಾರ್ಯರು ಮಾತನಾಡಿ ಬ್ಯಾಂಕ್ ಮೂಲಕ ದೊರೆಯವ ಸರ್ಕಾರದ ಯೋಜನೆಗಳನ್ನು ಕುಟುಂಬದ ಸುರಕ್ಷತೆ ದೃಷ್ಟಿಯಿಂದ ಇಂದೆ ನೊಂದಾಯಿಸಿಕೊಳ್ಳಲು ಸಲಹೆ ನೀಡಿದರು.
ಗ್ರಾಮ ಪಂಚಾಯತ ಅಧ್ಯಕ್ಷ ರಾಜಅಹ್ಮದ ಸಿರಸಗಿ ಮಾತನಾಡಿ ಜನರ ಸುರಕ್ಷತೆಗಾಗಿ ಇರುವ ಸರಕಾರದ ವಿಮೆಗಳ ಲಾಭವನ್ನು ಪ್ರತಿಯೊಬ್ಬರೂ ಪಡೆಯಬೇಕು ಎಂದರು.
ಈ ವೇಳೆ ಸ್ಥಳೀಯ ಬ್ಯಾಂಕ್ ಆಫ್ ಬರೋಡಾ ವ್ಯವಸ್ಥಾಪಕ ಅನೀಲಕುಮಾರ, ಸಹಾಯಕ ವ್ಯವಸ್ಥಾಪಕರಾದ ಚಂದ್ರಶೇಖರ ರಾಠೋಡ, ನಿಂಗಪ್ಪ ಭಜಂತ್ರಿ, ಸಿಬ್ಬಂದಿಗಳಾದ ಅಂಬಣ್ಣ ಪವಾರ, ಗೂಳಪ್ಪ ವಡ್ಡೋಡಗಿ, ಗುರುರಾಜ ಅಡಕಿ, ಸಾಯಿ ನಾಯಕ, ಮಹಾಂತೇಶ ಹಿಪ್ಪರಗಿ, ಪ್ರಜ್ವಲ್ ಆಡಕಿ, ಪ್ರಮೋದ್ ಬಿರಾದಾರ, ಯಲಗೂರಪ್ಪ ವಡ್ಡೋಡಗಿ, ಮೌನೇಶ ಅರಕೇರಿ, ಸೇರಿದಂತೆ ಗ್ರಾಮಸ್ಥರು ಉಪಸ್ಥಿತರಿದ್ದರು.
ಕೋಟ್ – ಶಿವಲಿಲಾ ಪಾಟೀಲ್ ಫಲಾನುಭವಿ : ನಮ್ಮ ತಾಯಿಯ ಅಕಾಲಿಕ ಮರಣದ ನಂತರ ಪ್ರಧಾನಮಂತ್ರಿ ಜೀವನ್ ಜ್ಯೋತಿ ಯೋಜನೆಯ ಮೂಲಕ ವಿಮೆ ಹಣ ದೊರೆತಿದ್ದು, ಕುಟುಂಬ ನಿರ್ವಹಣೆಗೆ ಸಹಾಯವಾಗಿದೆ
ಕೋಟ್ – ಅನೀಲ ಕುಮಾರ್ ವ್ಯವಸ್ಥಾಪಕರು, ಬ್ಯಾಂಕ್ ಆಫ್ ಬರೋಡಾ ಕಲಕೇರಿ : ಕೇಂದ್ರ ಸಾಮಾಜಿಕ ಭದ್ರತಾ ಯೋಜನೆಗಳ ಕುರಿತು ಗ್ರಾಮಸ್ಥರಿಗೆ ಹೆಚ್ಚಿನ ಮಾಹಿತಿ ನೀಡಲಾಗಿದ್ದು, ಯೋಜನೆಗಳಿಗೆ ಆರ್ಹ ಫಲಾನುಭವಿಗಳನ್ನು ನೋಂದಣಿ ಕಾರ್ಯ ನಡೆಯುತ್ತಿವೆ. ಈಗಾಗಲೆ ಕೆಲ ವಿಮೆದಾರರ ಮರಣದ ನಂತರ ನಾಮಿನಿದಾರರಿಗೆ. ವಿಮಾ ಮೊತ್ತ ಜಮೆಯಾಗಿದ್ದು ಇದರಿಂದ ಕುಟುಂಬಗಳಿಗೆ ಸಹಾಯವಾಗಿದೆ.

