ಉದಯರಶ್ಮಿ ದಿನಪತ್ರಿಕೆ
ಮುದ್ದೇಬಿಹಾಳ: ತಾಲೂಕಿನ ಬಿದರಕುಂದಿ ಆದರ್ಶ ವಿದ್ಯಾಲಯದಲ್ಲಿ ನೂತನ ಎಸ್.ಡಿ.ಎಂ.ಸಿ ರಚನೆ ಮಾಡಲಾಯಿತು.
ಅಧ್ಯಕ್ಷೆಯಾಗಿ ಪೂರ್ಣಿಮಾ ಬೆಳಗಲ್ ಉಪಾಧ್ಯಕ್ಷರಾಗಿ ಸಂಗನಗೌಡ ಪಾಟೀಲ ಇವರನ್ನ ಆವಿರೊದ ಆಯ್ಕೆ ಮಾಡಲಾಯಿತು. ಎಸಿ೧ ಯಲ್ಲಪ್ಪ ಮ್ಯಾಗೇರಿ, ಎಸ್ ಟಿ೧ ಶರಣಪ್ಪ ಸುತಗೊಂಡ ಅವರನ್ನ ಚೀಟಿ ಎತ್ತುವ ಮೂಲಕ ಆಯ್ಕೆ ಮಾಡಲಾಯಿತು. ಅಲ್ಪಸಂಖ್ಯಾತರ ಕೋಟಾದಲ್ಲಿ ಬಂದೇನವಾಜ ಕುಮಸಿ ಅವರನ್ನು ಆವಿರೊಧವಾಗಿ ಆಯ್ಕೆ ಮಾಡಲಾಯಿತು. ಮುಖ್ಯಗುರು ಅನಿಲ್ ಕುಮಾರ್ ರಾಠೋಡ ಅವರು ಖಜಾಂಚಿ ಹಾಗೂ ಕಾರ್ಯದರ್ಶಿಯಾಗಿ ಆಯ್ಕೆಯಾದರು.
ಈ ಸಂದರ್ಭದಲ್ಲಿ ಅಕ್ಷರ ದಾಸೋಹದ ಸಹಾಯಕ ನಿರ್ದೇಶಕ ಎಂ.ಎಂ.ಬೆಳಗಲ್, ಸೋಮನಗೌಡ ಪಾಟೀಲ್, ಗುಂಡಪ್ಪ ಕೋಟಿಗಿ, ಮಹಮ್ಮದ್ ರಸೂಲ್ ಮುಲ್ಲಾ ಸೇರಿದಂತೆ ಹಲವರು ಇದ್ದರು.

