ಉದಯರಶ್ಮಿ ದಿನಪತ್ರಿಕೆ
ವಿಜಯಪುರ: ಕರ್ನಾಟಕ ಕಾರ್ಯನಿರತ ಪತ್ರಕರ್ತರ ಧ್ವನಿ ( ರಿ ) ವಿಜಯಪುರ ಜಿಲ್ಲಾ ಘಟಕದ ವತಿಯಿಂದ ೨೦೨೫ ಸಾಲಿನ” ಮಾಧ್ಯಮ ರತ್ನ” ಜಿಲ್ಲಾ ಪ್ರಶಸ್ತಿ ನೀಡಲಾಗುತ್ತಿದೆ. ಜು.೨೭ ರವಿವಾರ ನಗರದ ಜಿಲ್ಲಾ ಪಂಚಾಯತ್ ಗಾಂಧಿ ಭವನಲ್ಲಿ ಕಾರ್ಯಕ್ರಮ ಆಯೋಜಿಸಲಾಗಿದೆ.
ಈ ಬಾರಿ ದೃಶ್ಯ ಮಾಧ್ಯಮದಿಂದ ಸುನೀಲ ಭಾಸ್ಕರ್ ಜಿಲ್ಲಾ ವರದಿಗಾರರು ಪವರ್ ಟಿವಿ., ಮುದ್ರಣ ಮಾಧ್ಯಮದಿಂದ ಶ್ರೀಮತಿ ಐಶ್ವರ್ಯ ತಾಳಿಕೊಟಿ ಜಿಲ್ಲಾ ವರದಿಗಾರರು ಉದಯಕಾಲ ದಿನಪತ್ರಿಕೆ, ಮಾರುತಿ ಹಿಪ್ಪರಗಿ ಮುದ್ದೇಬಿಹಾಳ ತಾಲೂಕಾ ವರದಿಗಾರರು ಸಂಧ್ಯಾಕಾಲ, ಶ್ರೀಶೈಲ ( ಸಚೀನ ) ಎಸ್ ಇಂಡಿ ತಾಲೂಕಾ ವರದಿಗಾರರು ಲೋಕದರ್ಶನ ಪತ್ರಿಕೆ, ಮಹ್ಮದ ಆಶ್ಫಾಕ ಕರಜಗಿ ಸಿಂದಗಿ ತಾಲೂಕಾ ವರದಿಗಾರರು ಉರ್ದು ಸಾಲಾರ ಪತ್ರಿಕೆ, ಉದಯಕುಮಾರ ಆಕಾಶಿ ಸಂಪಾದಕರು ವೀರರಾಜ ವಾರ ಪತ್ರಿಕೆ, ತೌಫಿಕ ಕಲಾದಗಿ ಸಂಪಾದಕರು ಟಿ – ನ್ಯೂಸ್ ವೆಬ್ ಪೋರ್ಟಲ್, ಭಾರ್ಗವಿ ದೇಶಪಾಂಡೆ ನಿರೂಪಕಿ ಎಫ್ ಎಂ ನ್ಯೂಸ್, ಹಸನ ಮುಲ್ಲಾ ಕೊಲ್ಹಾರ ತಾಲೂಕಾ ವರದಿಗಾರರು ಸುರಂಗ ಪತ್ರಿಕೆ, ಹಸನಡೊಂಗ್ರಿ ಕಮತಗಿ ಕೋಲ್ಹಾರ ತಾಲೂಕಾ ವರದಿಗಾರರು ಉದಯಕಾಲ ದಿನಪತ್ರಿಕೆ, ಗುಲಾಂಮಹ್ಮದ ದಫೇದಾರ ಮುದ್ಧೇಬಿಹಾಳ ತಾಲೂಕಾ ವರದಿಗಾರರು, ರಣರಂಗ ಇವರಿಗೆ ನೀಡಲಾಗುತ್ತಿದೆ. ಇನ್ನು ಪತ್ರಿಕಾ ವಿತರಕ ಮುದ್ದೇಬಿಹಾಳದ ವಿನಯ ಕಡ್ಲಿಮಟ್ಟಿಗೆ ಸೈಕಲ್ ನೀಡಿ ಗೌರವಿಸಲಾಗುತ್ತಿದೆ.
ಇದರ ಜೊತೆಗೆ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಲಕ್ಷ್ಮಣ ನಿಂಬರಗಿ , ರೈತ ಹೋರಾಟಗಾರ ಅರವಿಂದ ಕುಲಕರ್ಣಿ, ಹಿರಿಯ ಪತ್ರಕರ್ತ ಅನೀಲ ಹೊಸಮನಿ, ಝೀ ನ್ಯೂಸ್ ವಿಜಯಪುರ ಜಿಲ್ಲಾ ವರದಿಗಾರರು, ಸಮಾಜ ಸೇವಕ ಮಲ್ಲಪ್ಪ ಬಿದರಿ ಅವರಿಗೆ ವಿಶೇಷ ಸನ್ಮಾನ ಮಾಡಲಾಗುತ್ತಿದೆ.
ಸಮಾರಂಭದಲ್ಲಿ ಧರ್ಮಗುರುಗಳು,ಸಚಿವರು ಸೇರಿದಂತೆ ಅನೇಕ ಗಣ್ಯರು ಪಾಲ್ಗೊಳ್ಳುತ್ತಾರೆ ಎಂದು ಸಂಘದ ಜಿಲ್ಲಾಧ್ಯಕ್ಷ ಯುಸೂಫ್ ನೇವಾರ ತಿಳಿಸಿದ್ದಾರೆ.

