ನೂರಕ್ಕು ಹೆಚ್ಚು ಕಿ.ಮಿ ವ್ಯಾಪಿಸಿದ ನಾಗಠಾಣ ಮತಕ್ಷೇತ್ರ ಯಾವ ಪುಣ್ಯಾತ್ಮನಿಂದ ವಿಂಗಡನೆ ಆಗಿದೆಯೊ ಗೊತ್ತಿಲ್ಲ :ಶಾಸಕ ವಿಠ್ಠಲ ಕಟಕಧೋಂಡ
ಉದಯರಶ್ಮಿ ದಿನಪತ್ರಿಕೆ
ಚಡಚಣ: ಲೋಕೋಪಯೊಗಿ ಇಲಾಖೆಯಲ್ಲಿ ೨೦೨೪-೨೫ ಸಾಲಿನ ೫೦೫೪ ಜಿಲ್ಲಾ ಮುಖ್ಯ ರಸ್ತೆ ಸುಧಾರಣೆ (ಅಪೆಂಡಿಕ್ಸ್-ಇ) ಯೋಜನೆ ಅಡಿಯಲ್ಲಿ ಇಂಡಿ ರೈಲ್ವೆ ನಿಲ್ದಾಣದಿಂದ ನಾಗಠಾಣ ಮತಕ್ಷೇತ್ರದ ಹಲಸಂಗಿ ಗ್ರಾಮದ ಮೂಲಕ ರಾಷ್ಟ್ರೀಯ ಹೆದ್ದಾರಿವರೆಗೆ ರೂ.೫ ಕೋಟಿ ಮೊತ್ತದ ರಸ್ತೆ ನಿರ್ಮಾಣ ಸೇರಿದಂತೆ ಒಟ್ಟು ರೂ.೧೦.೬೫ ಕೋಟಿ ಮೊತ್ತದ ವಿವಿಧ ಕಾಮಗಾರಿಗಳಿಗೆ ನಾಗಠಾಣ ಶಾಸಕ ವಿಠ್ಠಲ ಕಟಕಧೋಂಡ ಭೂಮಿ ಪೂಜೆ ನೆರವೇರಿಸಿದರು.
ನಂತರ ಮಾತನಾಡಿದ ಶಾಸಕರು, ಮತಕ್ಷೇತ್ರದ ಅನೇಕ ಅಭಿವೃದ್ಧಿ ಕೆಲಸಗಳ ಕುರಿತು ಚುನಾವಣೆ ಪೂರ್ವದಲ್ಲಿ ನಾನು ಕ್ಷೇತ್ರದ ಜನತೆಗೆ ಅಭಿವೃದ್ಧಿಗಾಗಿ ಮಾತುಕೊಟ್ಟಿದ್ದೆ. ಅದರಂತೆ ಕೆಲಸ ಮಾಡುತ್ತಿದ್ದೇನೆ, ಮುಂದಿನ ದಿನಗಳಲ್ಲಿ ಸರ್ಕಾರ ಇನ್ನು ಅನೇಕ ಅಭಿವೃದ್ಧಿ ಯೋಜನೆಗಳನ್ನು ಹಮ್ಮಿಕೊಂಡಿದೆ. ರಾಜ್ಯದಲ್ಲಿ ಕಾಂಗ್ರೆಸ್ ಪಕ್ಷದ ಸರ್ಕಾರ ಇತಿಹಾಸ ನಿರ್ಮಿಸಲಿದೆ ಎಂದು ಹೇಳಿದರು.
ರೈತರ ಪರವಾಗಿ ನೀರಾವರಿ ಯೋಜನೆಗಳಿಂದ ರೈತರಿಗೆ ಅನುಕೂಲವಾಗಿದೆ. ನಮ್ಮ ಸರ್ಕಾರ ರೈತರಿಗೆ ಜಮೀನಿನ ಉತಾರ ಸೇರಿದಂತೆ ಜಮೀನಿಗೆ ಸಂಬಂಧಪಟ್ಟಂತೆ ಇ-ಸ್ವತ್ತು (ಡಿಜಿಟಲ್)ಮೂಲಕ ಜಗತ್ತಿನ ಯಾವ ಮೂಲೆಯಲ್ಲಿ ಬೇಕಾದರೂ ಕುಳಿತು ನೋಡಬಹುದು ಮತ್ತು ಡೌನಲೋಡ ಮಾಡಿಕೊಳ್ಳಬಹುದು. ತ್ವರಿತವಾಗಿ ರೈತರ ಕೆಲಸ ಕಾರ್ಯಗಳನ್ನು ಪೂರ್ಣಮಾಡಲು ಗ್ರಾಮ ಲೆಕ್ಕಾಧಿಕಾರಿಗಳಿಗೆ ಈಗಾಗಲೆ ಲ್ಯಾಪ್ ಟಾಪ್ ವಿತರಣೆ ಮಾಡಲಾಗಿದೆ ಎಂದರು.
ನಾಗಠಾಣ ಮತಕ್ಷೇತ್ರದ ರಾಜಕೀಯ ಲಾಭಕ್ಕಾಗಿ ಯಾರು ವಿಂಗಡನೆ ಮಾಡಿದ್ದಾರೊ ಗೊತ್ತಿಲ್ಲ, ವಿಜಯಪುರ ನಗರದ ೩೫ ವಾರ್ಡಗಳಲ್ಲಿ ನನಗೆ ೧೦ ವಾರ್ಡ್ ಅತಿ ಹಿಂದುಳಿದ ವಾರ್ಡಗಳು ನನ್ನ ಕ್ಷೇತ್ರದ ವ್ಯಾಪ್ತಿಗೆ ಬಂದಿವೆ. ನೂರಕ್ಕೂ ಹೆಚ್ಚು ಕಿ.ಮೀ ವ್ಯಾಪಿಸಿದೆ. ಅಭಿವೃದ್ಧಿ ದೃಷ್ಟಿಯಿಂದ ಈ ಕ್ಷೇತ್ರಕ್ಕೆ ಈ ಬಾರಿ ಅನ್ಯಾಯವಾಗಿದೆ. ರಾಜ್ಯದಲ್ಲಿಯೇ ಈ ತರಹದ ವಿಂಗಡನೆಯಿಂದ ಅಭಿವೃದ್ಧಿ ಮರೀಚಿಕೆಯಾಗಿದೆ. ಮುಂದಿನ ದಿನಗಳಲ್ಲಿ ಈ ತರಹ ಕ್ಷೇತ್ರದ ಹಂಚಿಕೆ ಯಾರು ಮಾಡಿದ್ದಾರೆ? ಯಾವ ಲಾಭಕ್ಕಾಗಿ ಮಾಡಿದ್ದಾರೆ? ಎಂದು ನಾಗಠಾಣ ಕ್ಷೇತ್ರದ ಜನತೆಗೆ ಗೊತ್ತಾಗಲಿದೆ ಎಂದರು.
ಹಲಸಂಗಿ ಗ್ರಾಮದ ಮುಖಂಡ ನಾಗೇಂದ್ರ ಕೊಟ್ಟಲಗಿ ಅವರು ಮಾತನಾಡಿದರು.
ಈ ಸಂದರ್ಭದಲ್ಲಿ ಸಾನಿಧ್ಯವನ್ನು ಬಸಯ್ಯ ಹೀರೆಮಠ, ಶೀಲವಂತ ಆಡಕಿ, ಸಿದ್ದರಾಮ ಕೊಟ್ಟಲಗಿ, ದೇವರ ನಿಂಬರಗಿ ಗ್ರಾಮ ಪಂಚಾಯತ ಅಧ್ಯಕ್ಷ ಭೀಮುಗೌಡ ಬಿರಾದಾರ, ಮಲ್ಲಿಕಾರ್ಜುನ ವಾಲಿಕಾರ, ಆರ್ ಎ ಪಾಟೀಲ, ನಾಗೇಂದ್ರ ಕೊಟ್ಟಲಗಿ, ಕಾಂತು ಹಾವಗೊಂಡ, ಟಿ.ಕೆ ಬೋಗಾರ, ನನ್ನಮಿ ಪೀರಬಾದೆ, ಶೀಲವಂತ ಆಡಕಿ, ರಾಜೇಂದ್ರ ಕಕಮರಿ,ನಾಗಪ್ಪಾ ಸಾಲೊಂಕಿ, ಜಟ್ಟೆಪ್ಪ ಕೋಳಿ,ಆನಂದ ಹಂಜಗಿ, ಬಂದೇನವಾಜ ಸಿಂಗನ್ನಳ್ಳಿ, ಗುತ್ತಿಗೆದಾರ ಎಲ್.ಡಿ. ಆನಂದ ಗುಜರಿ ಸೇರಿದಂತೆ ಹಲಸಂಗಿ ಮತ್ತು ದೇ. ನಿಂಬರಗಿ ಗ್ರಾಮದ ಪ್ರಮುಖರು ಭಾಗವಹಿಸಿದ್ದರು.
“ನಾನು ಪ್ರಾಮಾಣಿಕವಾಗಿ ಕೆಲಸ ಮಾಡುತ್ತಿದ್ದೇನೆ ನಾನು ಯಾವ ಪಕ್ಷಕ್ಕೂ ಸೀಮಿತವಲ್ಲ, ನನಗೆ ಕ್ಷೇತ್ರದ ಜನ ಪಕ್ಷಭೇದ ಮರೆತು ನನ್ನನ್ನು ಕೈ ಹಿಡಿದಿದ್ದಾರೆ.”
– ವಿಠ್ಠಲ ಕಟಕಧೊಂಡ
ನಾಗಠಾಣ ಶಾಸಕರು
ಅಚ್ಚರಿ ಮೂಡಿಸಿದರು.

