ಉದಯರಶ್ಮಿ ದಿನಪತ್ರಿಕೆ
ಸಿಂದಗಿ: ಆಲಮೇಲ ವಲಯದ ಗುರುಸ್ಪಂದನಾ ಕಾರ್ಯಕ್ರಮವನ್ನು ಜು 26 ಶನಿವಾರರಂದು ಆಲಮೇಲ ಪಟ್ಟಣದ ಸರಕಾರಿ ಮಾದರಿ ಪ್ರಾಥಮಿಕ ಶಾಲೆಯಲ್ಲಿ ಕ್ಷೇತ್ರ ಶಿಕ್ಷಣಾಧಿಕಾರಿ( ಬಿಇಒ) ಎಂ ಬಿ ಯಡ್ರಾಮಿ ಚಾಲನೆ ನೀಡುವರು ವಲಯದ ಶಿಕ್ಷಕರ ಸೇವೆಗೆ ಸಂಬಂಧಿಸಿದ ಸಮಸ್ಯೆಗಳನ್ನು ಸ್ಥಳದಲ್ಲಿಯೇ ಪರಿಹರಿಸುವ ನಿಟ್ಟಿನಲ್ಲಿ ಗುರುಸ್ಪಂದನಾ ಕಾರ್ಯಕ್ರಮ ಆಯೋಜಿಸಲಾಗಿದೆ ಎಂದು
ಕ.ರಾ.ಪ್ರಾ.ಶಾ.ಶಿಕ್ಷಕರ ಸಂಘದ ತಾಲೂಕು ಅಧ್ಯಕ್ಷ ಆನಂದ ಭೂಸನೂರ ಹೇಳಿದರು.
ಆಲಮೇಲ ಪಟ್ಟಣದ ಸರಕಾರಿ ಮಾದರಿ ಎಂ ಪಿ ಎಸ್ ಶಾಲೆಯಲ್ಲಿ
ಶಿಕ್ಷಕರ ಗುರು ಸ್ಪಂದನಾ ಕಾರ್ಯಕ್ರಮದ ಪೂರ್ವ ಭಾವಿ ಸಭೆಯಲ್ಲಿ ಅವರು ಮಾತನಾಡಿ ವಲಯದ ಶಿಕ್ಷಕರು
ಪ್ರಯೋಜನ ಪಡೆದುಕೊಳ್ಳಿ’ ಎಂದು ಹೇಳಿದರು.
ದೇವರಹಿಪ್ಪರಗಿ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ತಾಲೂಕು ಅಧ್ಯಕ್ಷ ಎ ಎಚ್ ವಾಲಿಕಾರ ಮಾತನಾಡಿ, ಶಿಕ್ಷಕರ 10, 15, 20, 25 ವರ್ಷದ ಟೈಮ್ ಬಾಂಡಗಳನ್ನು ಹಾಕುವದು ಮತ್ತು ಸ್ಥಳದಲ್ಲಿಯೇ ಆದೇಶಗಳನ್ನು ವಿತರಿಸುವದು ಮತ್ತು ಶಿಕ್ಷಕರ ಗಳಿಕೆ ರಜೆಗಳನ್ನು ಸೇವಾ ಪುಸ್ತಕದಲ್ಲಿ ನಮೂದಿಸುವದು. ಶಿಕ್ಷಕರ ಶೈಕ್ಷಣಿಕ ಅರ್ಹತೆಯನ್ನು ಸೇವಾ ಪುಸ್ತಕದಲ್ಲಿ ನಮೂದಿಸಲಾಗುವದು. ಒಟ್ಟಾರೆಯಾಗಿ ಈ ಕಾರ್ಯಕ್ರಮ ಶಿಕ್ಷಕರ ಅಲೆದಾಟ ತಪ್ಪಿಸಿ ಸೇವಾ ಪುಸ್ತಕದಲ್ಲಿ ಅಗತ್ಯ ವಿಷಯಗಳನ್ನು ದಾಖಲಿಸುವದು ಇದರ ಉದ್ದೇಶವಾಗಿದೆ’ ಈ ಕಾರ್ಯಕ್ರಮ ಲಾಭ ಪಡೆಯಬೇಕು ಎಂದರು.
ಎನ್ ಜಿ ಓ ಅಧ್ಯಕ್ಷ ಅಶೋಕ ತೇಲ್ಲೂರ
ಮಾತನಾಡಿ ಕ್ಷೇತ್ರ ಸಮನ್ವಯಾಧಿಕಾರಿ ಆಯ್ ಎಸ್ ಟಕ್ಕೆ ಸೇರಿದಂತೆ ಬಿ ಇ ಓ ಕಾರ್ಯಾಲಯದ ಸರ್ವ ಸಿಬ್ಬಂದಿ ಭಾಗವಹಿಸುವರು ಶಿಕ್ಷಕರು ಕಾರ್ಯಕ್ರಮದಲ್ಲಿ ಭಾಗವಹಿಸಿ ತಮ್ಮ ಕೆಲಸ ಮಾಡಿಕೊಳ್ಳಬೇಕು ಎಂದರು
ಎಂ ಪಿ ಭಿಸೆ. ಎ ಎಂ ಗಜಕೋಶ .ಎಸ್ ಎ ಬಂದೆ .ಬಸವರಾಜ ಸೋಮಪೂರ. ಲಕ್ಷ್ಮಣ ಸೊನ್ನ. ಎಂ ಎಸ್ ಚೌಧರಿ. ಗಿರೀಶ ಗತಾಟೆ. ಡಿ ಎಂ ಮಾಹೂರ. ಬಿ ಎಂ ನಂದಿಕೋಲ. ಹಣಮಂತ ಮರೇಪ್ಪ .ಎ ಎಚ್ ರಜಪೂತ. ಆರ್ ಎಚ್ ಚೌಧರಿ. ಎಚ್ ಎಂ ಮುಲ್ಲಾ. ಎಸ್ ಎನ್ ಮಳ್ಳಿ. ಎಚ್ ಎಚ್ ದೊಡಮನಿ.ಎಸ್ ಎನ್ ತೇಲ್ಲೂರ ಹಾಗೂ
ಕ.ರಾ.ಪ್ರಾ.ಶಾ.ಶಿಕ್ಷಕರ ಸಂಘದವರು ಭಾಗವಹಿಸಿದ್ದರು. ರಾಯಪ್ಪ ಇವಣಗಿ ಸ್ವಾಗತಿಸಿ ವಂದಿಸಿದರು.

