ಉದಯರಶ್ಮಿ ದಿನಪತ್ರಿಕೆ
ಸಿಂದಗಿ: ಪ್ರಾಧ್ಯಾಪಕರಾದವರು ಕಿವಿಗೆ ಪಾಠ ಬೋಧನೆ ಮಾಡಲ್ಲ. ಬದಲಿಗೆ ಮನಸ್ಸಿಗೆ ತಗಲುವ ಹಾಗೆ ಪಾಠ ಬೋಧನೆ ಮಾಡುತ್ತಾರೆ. ವಿದ್ಯೆ ಕಲಿಸಿದ ಗುರುಗಳು ಜೀವಂತ ದೇವರುಗಳಿದ್ದಾಗೆ ಎಂದು ಜಿ.ಪಿ.ಪೋರವಾಲ ಪದವಿ ಕಾಲೇಜಿನ ದೈಹಿಕ ನಿರ್ದೇಶಕ ಡಾ.ರವಿ ಗೋಲಾ ಹೇಳಿದರು.
ಪಟ್ಟಣದ ರಾಂಪೂರ ರಸ್ತೆಯಲ್ಲಿರುವ ಪೀಪಲ್ಸ್ ಎಜ್ಯುಕೇಶನ್ ಸೊಸೈಟಿಯ ಪಿ.ಇ.ಎಸ್.ಗಂಗಾಧರ ಎನ್.ಬಿರಾದಾರ ಕಲಾ, ವಾಣಿಜ್ಯ ಹಾಗೂ ವಿಜ್ಞಾನ ಪಪೂ ಮಹಾವಿದ್ಯಾಲಯ ಪಠ್ಯಪೂರಕ ಚಟುವಟಿಕೆಗಳ ಸಮಾರಂಭವನ್ನು ಉದ್ಘಾಟಿಸಿ ಮಾತನಾಡಿದ ಅವರು, ವಿದ್ಯಾರ್ಥಿಗಳು ತಮ್ಮ ಮನಸ್ಸಿನ ಮೇಲೆ ಹತೋಟಿಯನ್ನುಟ್ಟುಕೊಂಡರೆ ಜೀವನ ಯಶಸ್ವಿಯಾಗುತ್ತದೆ. ವಿದ್ಯಾರ್ಥಿಗಳು ಅತೀ ಹೆಚ್ಚು ಮೋಬೈಲ್ನ್ನು ಬಳಕೆ ಮಾಡದೇ ದಿನದಲ್ಲಿ ೪ಗಂಟೆಗಳ ಕಾಲ ಓದಿನಲ್ಲಿ ತೊಡಗಿಸಿಕೊಳ್ಳಬೇಕು. ಅಂದಾಗ ಮಾತ್ರ ನೀವು ಉತ್ತಮ ವಿದ್ಯಾರ್ಥಿಯಾಗಿ ಹೊರಹೊಮ್ಮಬಹುದು. ಜೀವನದಲ್ಲಿ ಬದುಕಲಿಕ್ಕೆ ಸಾವಿರಾರು ದಾರಿಗಳಿವೆ. ವಿದ್ಯಾರ್ಥಿಗಳು ದಾರಿ ಬಿಟ್ಟರೆ ಅವರನ್ನು ಸರಿದಾರಿಗೆ ತರುವುದು ಉಪನ್ಯಾಸಕರ ಕರ್ತವ್ಯವಾಗಿದೆ ಎಂದು ಹೇಳಿದರು.
ಇದೇ ಸಂದರ್ಭದಲ್ಲಿ ಅತಿಥಿಗಳಾಗಿ ಆಗಮಿಸಿ ಪ್ರಾಧ್ಯಾಪಕ, ಪತ್ರಕರ್ತ ಮಹಾಂತೇಶ ನೂಲಾನವರ ಮಾತನಾಡಿ, ವಿದ್ಯಾರ್ಥಿಗಳು ವಿದ್ಯೆಯ ಜೊತೆಗೆ ಸಂಸ್ಕಾರ ಮೈಗೂಡಿಸಿಕೊಳ್ಳುವುದು ಬಹು ಮುಖ್ಯವಾಗಿದ್ದು, ವಿದ್ಯೆಗೆ ಸಂಸ್ಕಾರವೇ ಭೂಷಣ ಎಂದು ವಿದ್ಯಾರ್ಥಿಗಳಿಗೆ ಸಲಹೆ ನೀಡಿದರು.
ಕಾರ್ಯಕ್ರಮದಲ್ಲಿ ಸಂಸ್ಥೆಯ ಗೌರವ ಕಾರ್ಯದರ್ಶಿ ಬಿ.ಪಿ. ಕರ್ಜಗಿ, ಆಡಳಿತಾಧಿಕಾರಿ ಆಯ್.ಬಿ.ಬಿರಾದಾರ, ಸಂಸ್ಥೆಯ ಮಾರ್ಗದರ್ಶಕ ಮತ್ತು ನಿವೃತ್ತ ದೈಹಿಕ ನಿರ್ದೇಶಕ ಕೆ.ಎಚ್. ಸೋಮಾಪೂರ, ನಿವೃತ್ತ ಉಪನ್ಯಾಸಕ ಎಸ್.ವಾಯ್.ಬಿಳಗಿ, ಪಿ.ಎಮ್.ಮಡಿವಾಳರ, ಪದವಿ ಮಹಾವಿದ್ಯಾಲಯದ ಪ್ರಾಚಾರ್ಯ ಜಿ.ಎಸ್.ಕಡಣಿ, ಅಶ್ವೀನಿ ಚನ್ನಾಳ, ಆರ್.ಎಸ್.ಧರಗೊಂಡ, ಪ್ರಶಾಂತ ಕುಲಕರ್ಣಿ, ಮಲ್ಲು ಹೊಸಮನಿ, ಪ್ರದಾನ ಕಾರ್ಯದರ್ಶಿ ಶಾಹಿನ ಮುಲ್ಲಾ ಸೇರಿದಂತೆ ಕಾಲೇಜಿನ ಬೋಧಕ-ಬೋಧಕೇತರ ಸಿಬ್ಬಂದಿಗಳು ಹಾಗೂ ವಿದ್ಯಾರ್ಥಿಗಳು ಇದ್ದರು. ಪ್ರಾಚಾರ್ಯ ಆರ್.ಬಿ.ಗೋಡಕರ ಸ್ವಾಗತಿಸಿದರು. ಅಮೀರ ಮೋಪಗಾರ ನಿರೂಪಿಸಿದರು. ಉಪನ್ಯಾಸಕ ಮಹಾಂತೇಶ ದಂಡವತ ವಂದಿಸಿದರು.

