ಉದಯರಶ್ಮಿ ದಿನಪತ್ರಿಕೆ
ಆಲಮಟ್ಟಿ: ರೈತರು ಸಹನಾಮೂರ್ತಿಗಳು ಮತ್ತು ಸ್ವಾಭಿಮಾನಿಗಳು ಎಂದು ರಾಜ್ಯ ರೈತಸಂಘ ಮತ್ತು ಹಸಿರು ಸೇನೆ ತಾಲ್ಲೂಕು ಅಧ್ಯಕ್ಷ ಸೀತಪ್ಪ ಗಣಿ ಹೇಳಿದರು.
ಸೋಮವಾರ ಆಲಮಟ್ಟಿ ಹಳೆ ರಾಷ್ಟ್ರೀಯ ಹೆದ್ದಾರಿ ಬಳಿ ಲಕ್ಷ್ಮಿದೇವಸ್ಥಾನದ ಮುಂದೆ ರೈತ ಹುತಾತ್ಮರ ದಿನಾಚರಣೆಯ ನೇತೃತ್ವ ವಹಿಸಿ ಮಾತನಾಡಿದರು.
ನವಲಗುಂದ-ನರಗುಂದ ರೈತರು ತಮ್ಮ ಹಕ್ಕುಗಳನ್ನು ಪಡೆಯಲು ಹೋರಾಟ ಮಾಡುವಾಗ ಸರ್ಕಾರ ಅವರ ಮೇಲೆ ದಾಳಿ ನಡೆಸಿದ್ದರಿಂದ ರೈತರು ಉಗ್ರನಿಲುವು ತಾಳಿ ಬಂಡಾಯ ಏಳುವಂತಾಯಿತು ಎಂದು ಆಕ್ರೋಶ ವ್ಯಕ್ತಪಡಿಸಿದರು.
ಈ ಸಂದರ್ಭದಲ್ಲಿ ರವಿಶಂಕರ್ ಕೋತಿನ್, ಬಸಯ್ಯ ಹಿರೇಮಠ, ಸುಭಾಸ ಚೋಪಡೆ, ಲಕ್ಷ್ಮಣ ಬಿರಾದಾರ, ಪೀರಸಾಬ ನದಾಫ, ವೆಂಕಟೇಶ ವಡ್ಡರ, ಸಾಬಣ್ಣ ಅಂಗಡಿ, ರಾಮಣ್ಣ ಸೀತಿಮನಿ, ಸಂಜು ಚನಗೊಂಡ, ರಾಜು ಯಲಗಾರ ಮೊದಲಾದವರಿದ್ದರು.

