ಉದಯರಶ್ಮಿ ದಿನಪತ್ರಿಕೆ
ಜಮಖಂಡಿ: ನ್ಯಾನೋ ರಸ ಗೊಬ್ಬರಗಳ ಬಳಕೆಯಿಂದ ಅಧಿಕ ಇಳುವರಿ ಪಡೆಯಬಹುದು. ರಸಗೊಬ್ಬರ ಅಭಾವ ಶೇ.50ರಷ್ಟು ಕಡಿಮೆ ಮಾಡಬಹುದು ಎಂದು ಉಪಕೃಷಿ ನಿರ್ದೇಶಕಿ ಮಂಜುಳಾ ಬಸವರೆಡ್ಡಿ ತಿಳಿಸಿದರು.
ಕೃಷಿ ಇಲಾಖೆ ಜಮಖಂಡಿ ಹಾಗೂ ಇಷ್ಟೋ ಸಂಸ್ಥೆಗಳ ಸಂಯುಕ್ತಾಶ್ರಯದಲ್ಲಿ ಹುಲ್ಯಾಳ ಗ್ರಾಮದ ರುದ್ರಪ್ಪ ಮಲ್ಲಪ್ಪ ಝುಲಪಿ ಇವರ ತೋಟದಲ್ಲಿ ಗೋವಿನಜೋಳ ಬೆಳೆಯಲ್ಲಿ ನ್ಯಾನೋ ಯೂರಿಯಾ, ಡಿಎಪಿಯನ್ನು ದ್ರೋಣ್ ಮೂಲಕ ಸಿಂಪರಣೆ ಮಾಡಿ ಅರಿವು ಮೂಡಿಸುವ ಕಾರ್ಯಕ್ರಮದಲ್ಲಿ ಮಾಹಿತಿ ನೀಡಿದರು.
ನ್ಯಾನೋ ಗೊಬ್ಬರಗಳು ಪರಿಸರ ಸ್ನೇಹಿಯಾಗಿದ್ದು, ವಾತಾವರಣ ವೈಪರೀತ್ಯದ ಕಾಮ ತಡೆಗಟ್ಟುತ್ತವೆ. ಅರ್ಧ ದುಷ್ಪರಿಣಾಮ ಲೀಟರ್ ಒಂದು ಬಾಟಲ್ ಒಂದು ಚೀಲ ಹರಳು ರಸಗೊಬ್ಬರಕ್ಕೆ ಸಮವಾಗಿದೆ. ನ್ಯಾನೋ ಗೊಬ್ಬರಗಳ ಬಳಕೆಯಿಂದ ಬೆಳೆಗಳು ಉತ್ತಮ ರೀತಿಯಲ್ಲಿ ಬೆಳವಣಿಗೆ ಹೊಂದುತ್ತವೆ. ಕೃಷಿ ಕಾರ್ಮಿಕರ ಅವಲಂಬನೆ ಕಡಿತಗೊಳಿಸುತ್ತದೆ. ಸಮಯವ ಉಳಿತಾಯವಾಗುತ್ತದೆ. ಡೋಣ್ ಣ್ ಯಂತ್ರ ಬಾಡಿ ಬಾಡಿಗೆ ಪಡೆದು ನ್ಯಾನೋ ಗೊಬ್ಬರ ಹಾಗೂ ಕೀಟನಾಶಕಗಳ ಸಿಂಪರಣೆ ಮಾಡಬಹುದಾಗಿದೆ. ಈ ನಿಟ್ಟಿನಲ್ಲಿ ರೈತರು ನೇರ ಗೊಬ್ಬರಗಳ ಬದಲಾಗಿ ನ್ಯಾನೋ ಗೊಬ್ಬರಗಳ ಬಳಕೆ ಹೆಚ್ಚು ಮಾಡಬೇಕೆಂದು ಕರೆ ನೀಡಿದರು.
ಇಪ್ಪೋ ಸಂಸ್ಥೆಯ ಸಿಬ್ಬಂದಿ ಧರೆಪ್ಪ ರಾಮತೀರ್ಥ ಮಾತನಾಡಿ, ನ್ಯಾನೋ ಯೂರಿಯಾ ಹಾಗೂ ಡಿಎಪಿ ಸಿಂಪರಣೆ ಮಾಡಿಸಲು ನಮ್ಮನ್ನು ಅಥವಾ ರೈತ ಸಂಪರ್ಕ ಕೇಂದ್ರ ಸಂಪರ್ಕಿಸಿದಲ್ಲಿ ತೋಟಕ್ಕೆ ಬಂದು ಸಿಂಪರಣೆ ಮಾಡಿಕೊಡುತ್ತೇವೆ. ಒಂದು ಎಕರೆ ಸಿಂಪರಣೆ ಮಾಡಲು ₹ 400 ಬಾಡಿಗೆ ಪಡೆಯಲಾಗುವುದು. ಡೋಣ್ ಯಂತ್ರವು 10 ಲೀ ಟ್ಯಾಂಕ ಹೊಂದಿದ್ದು, ಒಂದು ಎಕರೆ ಪ್ರದೇಶವನ್ನು ಕೇವಲ 10 ನಿಮಿಷದಲ್ಲಿ ಸಿಂಪರಣೆ ಮಾಡುತ್ತದೆ. ಕಬ್ಬು, ಗೋವಿನಜೋಳ, ತೊಗರಿ, ಉದ್ದು, ಹೆಸರು ಹಾಗೂ ಇನ್ನಿತರೆ ಬೆಳೆಗಳಿಗೆ ಸಿಂಪರಣೆ ಮಾಡಬಹುದಾಗಿದೆ ಎಂದು ವಿವರಣೆ ನೀಡಿದರು.
ಕೃಷಿ ಅಧಿಕಾರಿ ಶಂಕರರಾವ ಪವಾರ ಹಾಗೂ ಆತ್ತ ಯೋಜನೆಯ ತಾಲೂಕ ತಾಂತ್ರಿಕ ವ್ಯವಸ್ಥಾಪಕ ಮೊಯಿನ್ ಜಮಖಂಡಿ ಪ್ರಾತ್ಯಕ್ಷಿಕೆಯ ಉಸ್ತುವಾರಿ ವಹಿಸಿದ್ದರು.
ಪ್ರಭುಲಿಂಗೇಶ್ವರ ಸಕ್ಕರೆ ಕಾರ್ಖಾನೆಯ ಸಂಜೀವ ಜೋಶಿ, ಬಸವರಾಜ ಕೊಂಗವಾಡ, ಪ್ರಗತಿಪರ ರೈತ ಬಸಪ್ಪ ಗೋರೆ, ಮಂಜುನಾಥ ಗಲಗಲಿ, ಬಸವರಾಜ ಪಾಟೀಲ, ಶ್ರೀಶೈಲ ಭೂಮಾರ, ಪಂಡಿತ ಝಲಪಿ, ರುದ್ರಪ್ಪ ಮರೇಗುದ್ದಿ, ಕರಿಯಪ್ಪ ಮಂಟೂರ, ಈಶ್ವರಯ್ಯ ರೂಗಿ, ವಿಜಯ ಝುಲಪಿ, ಶ್ಯಾಮಲಾ ಹೆಗ್ಗೂರ, ಹಾಗೂ ಹೋಬಳಿಯ ಎಲ್ಲ ಕೃಷಿ ಸಖಿಯರು ಭಾಗವಹಿಸಿದ್ದರು.

