ಸ್ಥಳೀಯರ ನಿರ್ಧಾರದಂತೆ ಯೋಜನಾ ಸ್ಥಳ ನಿಗದಿ ಮಾಡುವುದಾಗಿ ಸಚಿವ ಶಿವಾನಂದ ಪಾಟೀಲ ಭರವಸೆ
ಉದಯರಶ್ಮಿ ದಿನಪತ್ರಿಕೆ
ಕೊಲ್ಹಾರ: ಪಟ್ಟಣದಲ್ಲಿ ಪ್ರಜಾಸೌಧ ಹಾಗೂ ಬಸ್ ಡೀಪೋ ಸ್ಥಳ ಬದಲಾವಣೆ ಮಾಡುವ ವಿಷಯದಲ್ಲಿ ಸ್ಥಳೀಯರ ಒಕ್ಕೋರಲ ನಿರ್ಧಾರದಂತೆ ಯೋಜನಾ ಸ್ಥಳ ನಿಗದಿ ಮಾಡುವುದಾಗಿ ಬಸವವನಬಾಗೇವಾಡಿ ಕ್ಷೇತ್ರವನ್ನು ಪ್ರತಿನಿಧಿಸುತ್ತಿರುವ ಜವಳಿ, ಕೃಷಿ ಮಾರುಕಟ್ಟೆ, ಸಕ್ಕರೆ ಹಾಗೂ ಕಬ್ಬು ಅಭಿವೃದ್ಧಿ ಸಚಿವ ಶಿವಾನಂದ ಪಾಟೀಲ ಭರವಸೆ ನೀಡಿದರು.
ಮಂಗಳವಾರ ವಿಜಯಪುರ ನಗರದಲ್ಲಿರುವ ತಮ್ಮ ಗೃಹ ಕಛೇರಿಗೆ ಭೇಟಿ ನೀಡಿದ ಕೊಲ್ಹಾರ ಪಟ್ಟಣದ ನಿಯೋಗದ ಮನವಿ ಆಲಿಸಿದ ಸಚಿವರು, ಕ್ಷೇತ್ರದ ಅಭಿವೃದ್ಧಿಗೆ ಆದ್ಯತೆ ನೀಡುತ್ತಿದ್ದೇನೆ. ಸಂತ್ರಸ್ತರ ಪುನರ್ವಸತಿ ಕೇಂದ್ರವಾದ ಕೊಲ್ಹಾರ ಪಟ್ಟಣ ಸೇರಿದಂತೆ ಇಡೀ ತಾಲೂಕಿನ ಅಭಿವೃದ್ಧಿಗೆ ಆದ್ಯತೆ ನೀಡುತ್ತಿದ್ದೇನೆ. ಇದರ ಭಾಗವಾಗಿ ತಾಲೂಕ ಆಡಳಿತ ಸೌಧ ಹಾಗೂ ಬಸ್ ಡೀಪೋ ನಿರ್ಮಾಣಕ್ಕೆ ಯೋಜನೆ ರೂಪಿಸಲಾಗಿದೆ. ಸ್ಥಳೀಯರಿಗೆ ಅನುಕೂಲ ಆಗುವ ರೀತಿಯಲ್ಲಿ ಸ್ಥಳೀಯರ ಒಕ್ಕೋರಲ ನಿರ್ಧಾರದಂತೆ ಅಭಿವೃದ್ಧಿ ಯೋಜನೆ ರೂಪಿಸಲಾಗುತ್ತದೆ. ಹೀಗಾಗಿ ಅಭಿವೃದ್ಧಿ ವಿಷಯದಲ್ಲಿ ಒಡಕಿನ, ಅಪಸ್ವರದ ಮಾತುಗಳು ಬೇಡ ಎಂದು ಕಿವಿ ಮಾತು ಹೇಳಿದರು.
ಸಚಿವರಿಗೆ ಮನವಿ ಸಲ್ಲಿಸಿ ಮಾತನಾಡಿದ ನಿಯೋಗದ ಮುಖಂಡರಾದ, ಸಿ.ಎಂ. ಗಣಕುಮಾರ, ಕೊಲ್ಹಾರ ತಾಲೂಕ ಹೋರಾಟ ಸಮಿತಿ ಅಧ್ಯಕ್ಷ ಈರಣ್ಣ ಕೋಮಾರ, ಕೊಲ್ಹಾರ ಪಟ್ಟಣದ ಶಾಲಾ ಆವರಣದಲ್ಲಿ ಪ್ರಜಾಸೌಧ ನಿರ್ಮಾಣ ಮತ್ತು ಬಸ್ ನಿಲ್ದಾಣ ಭಾಗ -1 ರಲ್ಲಿ ಬಸ್ ಡಿಪೋ ನಿರ್ಮಾಣಕ್ಕೆ ಸ್ಥಳ ನಿಗದಿ ಮಾಡಿರುವ ಮಾಹಿತಿ ಇದೆ. ಆದರೆ ಪುನರ್ವಸತಿ ಕೇಂದ್ರವಾದ ಕೊಲ್ಹಾರ ಪಟ್ಟಣದಲ್ಲಿನ ಈ ಸ್ಥಳ ಬಳಕೆಯ ಬದಲಾಗಿ ಸದರಿ ಎರಡೂ ಯೋಜನೆಗಳಿಗೆ ಪರ್ಯಾಯ ಸ್ಥಳ ನಿಗದಿ ಮಾಡುವಂತೆ ಮನವಿ ಮಾಡಿದರು.
ಕೊಲ್ಹಾರ ಪಟ್ಟಣದ ಹೃದಯ ಭಾಗದಲ್ಲಿರುವ ಸರ್ಕಾರಿ ಕನ್ನಡ ಪ್ರಾಥಮಿಕ ಶಾಲೆ ಮತ್ತು ಉರ್ದು ಪ್ರಾಥಮಿಕ ಶಾಲೆಯ ಆವರಣದಲ್ಲಿ ಪ್ರಜಾಸೌಧ ನಿರ್ಮಾಣಕ್ಕೆ ಸ್ಥಳ ನಿಗದಿ ಹಾಗೂ ದಿಗಂಬರೇಶ್ವರ ಮಠದ ಹತ್ತಿರ ಬಸ್ ನಿಲ್ದಾಣದಲ್ಲಿ ಬಸ್ ಡಿಪೋ ನಿರ್ಮಾಣಕ್ಕೆ ಸ್ಥಳ ಗುರುತಿಸಲಾಗಿದೆ ಎಂಬ ಮಾಹಿತಿ ಇದೆ. ಈ ಎರಡೂ ಸ್ಥಳಗಳು ಪಟ್ಟಣದ ಹೃದಯ ಭಾಗದಲ್ಲಿದ್ದು ಮಕ್ಕಳಿಗೆ ಒಳ್ಳೆಯ ಶಿಕ್ಷಣ ನೀಡಲು ಪಟ್ಟಣದ ಮಧ್ಯೆ ಇರುವ ಶಾಲೆ ಹಾಗೂ ಈ ಭಾಗದ ಜನರಿಗೆ ಬಸ್ ನಿಲ್ದಾಣ ಅವಶ್ಯಕತೆ ಇದೆ. ಹೀಗಾಗಿ ಇವೆರಡೂ ಸ್ಥಳಗಳ ಬದಲಾಗಿ ಬೇರೆ ಸ್ಥಳ ಗುರುತಿಸುವಂತೆ ಕೋರಿದರು.
ಈ ಸಂದರ್ಭದಲ್ಲಿ ಪಟ್ಟಣ ಪಂಚಾಯತ್ ಅಧ್ಯಕ್ಷ ಸಿ.ಎಸ್. ಗಿಡ್ಡಪ್ಪಗೋಳ, ಸದಸ್ಯರಾದ ಶ್ರೀಶೈಲ ಮುಳವಾಡ, ವಿಜಯಮಹಾಂತೇಶ ಗಿಡ್ಡಪ್ಪಗೋಳ, ಲಕ್ಷ್ಮೀಬಾಯಿ ಹೆರಕಲ್, ಅಶೋಕ ಜಿಡ್ಡಿಬಾಗಿಲ, ಡಿ.ಕೆ. ಈಟಿ, ಮಲ್ಲು ಹೆರಕಲ್, ಪಪಂ. ಮಾಜಿ ಸದಸ್ಯ ಈರಣ್ಣ ಗಡ್ಡಿಪೂಜಾರಿ, ಗ್ರಾಮದ ಪ್ರಮುಖರಾದ ರಾಮಣ್ಣ ಉಪ್ಪಲದಿನ್ನಿ, ಪುಂಡಲೀಕ ಕಂಬಾರ, ಮಲ್ಲಪ್ಪ ಕೊಠಾರಿ, ಡಾ. ರಾಚಯ್ಯ ಮಠ, ನಂದಪ್ಪ ಗಿಡ್ಡಪಗೊಳ, ಬಸವರಾಜ ಚೌಡಪ್ಪಗೊಳ, ಮಾರುತಿ ಪವಾರ, ಯಮನೂರಿ ಮಾಕಾಳಿ, ಶಿವಪುತ್ರ ಮೇಲಗಿರಿ, ರಾಜಶೇಖರಯ್ಯ ಹೀರೆಮಠ, ಕುಮಾರ ಲಮಾಣಿ, ದರೆಪ್ಪ ಬೆಳ್ಳುಬ್ಬಿ, ಸುರೇಶ ಗಿಡ್ಡಪ್ಪಗೋಳ, ಮಹೇಶ್ ತುಂಬರಮಟ್ಟಿ, ರಾಜು ಇವನಗಿ, ಸಿದ್ದು ಗಣಿ, ತಿಪ್ಪಣ್ಣ ಕುದರಿ, ರಮೇಶ ಹೀರೆಮಠ, ಜಿ.ಕೆ. ಪರಡಿಮಠ, ವಿಜಯಕುಮಾರ ನಿಲವಾಣಿ, ಮಾರುತಿ ಭಜಂತ್ರಿ ಅಶೋಕ ಕಲ್ಯಾಣಿ, ರಮೇಶ ಮೇಲಗಿರಿ ಸಂತೋಷ ಚೌಡಪ್ಪನವರ, ಲಕ್ಷ್ಮಣ ಸಿಂಹಾಸನ, ಕಮಲಾ ಮಾಕಾಳಿ, ಶಕುಂತಲಾ ರೇವಣಕರ, ಸಂಗೀತಾ ಪತಂಗಿ, ಸುವರ್ಣ ಸಿರಾಣಿ, ಕಸ್ತೂರಿ ಮಠಪತಿ, ಶಾಯವ್ವ ಕುಪಗಡ್ಡಿ ಸೇರಿದಂತೆ ಪಟ್ಟಣದ ನೂರಾರು ಸಾರ್ವಜನಿಕರು ಇದ್ದರು.